ಮುಗಿದ ಉಪಸಮರ: ಸಿ-ವೋಟರ್ ಸಮೀಕ್ಷೆಯಲ್ಲಿ ಯಾರಿಗೆ ಎಷ್ಟು?

Published : Dec 05, 2019, 07:57 PM ISTUpdated : Dec 05, 2019, 08:28 PM IST
ಮುಗಿದ ಉಪಸಮರ: ಸಿ-ವೋಟರ್ ಸಮೀಕ್ಷೆಯಲ್ಲಿ ಯಾರಿಗೆ ಎಷ್ಟು?

ಸಾರಾಂಶ

ಮುಗಿದ    15  ಕ್ಷೇತ್ರಗಳ ಉಪಚುನಾವಣೆ/  ಸಿ-ವೋಟರ್ ಸಮೀಕ್ಷೆಯಲ್ಲಿ ಬಿಜೆಪಿಗೆ  ಹೆಚ್ಚಿನ ಸ್ಥಾನ/ ಬಿಜೆಪಿಗೆ   9 ರಿಂದ 12   ಸ್ಥಾನ ಎಂದ ಸಿ- ವೋಟರ್

ಬೆಂಗಳೂರು(ಡಿ. 05) ಕರ್ನಾಟಕದ ಉಪಸಮರ ಮುಗಿದಿದ್ದು  ಸಿ ವೋಟರ್ ಸಮೀಕ್ಷೆ ಬಿಜೆಪಿಗೆ ಮುನ್ನಡೆ ನೀಡಿದೆ.  ಬಿಜೆಪಿ  9 ರಿಂದ 12 ಸ್ಥಾನದಲ್ಲಿ ಜಯ ಸಾಧಿಸಲಿದೆ ಎಂದು ಹೇಳಿದ್ದರೆ  ಕಾಂಗ್ರೆಸ್ ಗೆ 3 ರಿಂದ 6 ಸ್ಥಾನ ದೊರೆಯಲಿದೆ ಎಂದು ಹೇಳಿದೆ.

ಜೆಡಿಎಸ್ 1 ಸ್ಥಾನದಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಸಿ-ವೋಟರ್ ಸಮೀಕ್ಷೆ  ಹೇಳಿದೆ. ಪಕ್ಷೇತರ  ಶೂನ್ಯ ಫಲಿತಾಂಶ ಬರಲಿದೆ ಎಂದು ಹೇಳುವ ಮೂಲಕ ಹೊಸಕೋಟೆ ಶರತ್ ಬಚ್ಚೇಗೌಡ ಗೆಲುವಿನ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಣೆ ಮಾಡಿದೆ.

ಪತ್ತೆಯಾದ ಹೌದೋ ಹುಲಿಯಾದ ಅಸಲಿ ಮಾಲೀಕ

ಬಿಜೆಪಿ, ಕಾಂಗ್ರೆಸ್ ಮತ್ತು ಜಡಿಎಸ್ ಪಕ್ಷಗಳು ಆಂತರಿಕವಾಗಿ ತಮ್ಮ ತಮ್ಮ ಸಮೀಕ್ಷೆ ಮಾಡಿವೆ. ಆಯಾ ಪಕ್ಷಗಳು ತಮ್ಮ ಕಾರ್ಯಕರ್ತರ ಮಾಹಿತಿ ಆಧಾರದ ಮೇಲೆ ಇಂತಿಷ್ಟು ಸ್ಥಾಮ ಬರುವುದು ಎಂಬ ಲೆಕ್ಕಾಚಾರ ಮಾಡಿಕೊಂಡಿವೆ

ಡಿಸೆಂಬರ್ 5 ಅಂದರೆ ಇಂದು 15 ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಮುಗಿದಿದೆ.  ಡಿಸೆಂಬರ್ 9 ರಂದು ಫಲಿತಾಂಶ ಹೊರಬೀಳಲಿದ್ದು ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ಅಳಿವು-ಉಳಿವು ಆ ಫಲಿತಾಂಶದ ಮೇಲೆ ನಿಂತಿದೆ.

ಉಪಚುನಾವಣೆ ನಡೆದಿರುವ ಕ್ಷೇತ್ರಗಳು
1.ಗೋಕಾಕ್, 2.ಅಥಣಿ, 3.ಕಾಗವಾಡ [ಬೆಳಗಾವಿ], 4. ರಾಣೇಬೆನ್ನೂರು, 5. ಹಿರೇಕೆರೂರು [ಹಾವೇರಿ], 6. ಕೆ.ಆರ್.ಪುರಂ, 7.ಯಶವಂತಪುರ, 8. ಶಿವಾಜಿನಗರ, 9. ಮಾಹಾಲಕ್ಷ್ಮೀ ಲೇಔಟ್ [ಬೆಂಗಳೂರು], 10.ಯಲ್ಲಾಪುರ [ಉತ್ತರ ಕನ್ನಡ] 11. ಕೆ.ಆರ್.ಪೇಟೆ [ಮಂಡ್ಯ], 12. ಹುಣಸೂರು [ಮೈಸೂರು], 13. ಚಿಕ್ಕಬಳ್ಳಾಪುರ, 14. ಹೊಸಕೋಟೆ [ಬೆಂಗಳೂರು ಗ್ರಾಮಾಂತರ] ಹಾಗೂ 15. ವಿಜಯನಗರ [ಬಳ್ಳಾರಿ]

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಾ ಜಿ ಪರಮೇಶ್ವರ ರಾಜ್ಯದ ಸಿಎಂ ಆಗಬೇಕು, ರಾಜಕೀಯದಲ್ಲಿ ಸಂಚಲನ ಮೂಡಿಸೋ ಹೇಳಿಕೆ ಕೊಟ್ಟ ಕೇಂದ್ರ ಸಚಿವ ವಿ. ಸೋಮಣ್ಣ!
ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!