ಈ ರಾಜ್ಯದಲ್ಲಿ ಶೀಘ್ರದಲ್ಲೇ 500 ರೂ. ಗೆ ಸಿಗುತ್ತೆ ಎಲ್‌ಪಿಜಿ ಸಿಲಿಂಡರ್!

Published : Aug 21, 2023, 07:25 PM IST
ಈ ರಾಜ್ಯದಲ್ಲಿ ಶೀಘ್ರದಲ್ಲೇ 500 ರೂ. ಗೆ ಸಿಗುತ್ತೆ ಎಲ್‌ಪಿಜಿ ಸಿಲಿಂಡರ್!

ಸಾರಾಂಶ

ಶಿವರಾಜ್ ಚೌಹಾಣ್ ₹ 500 ಕ್ಕೆ ಗ್ಯಾಸ್ ಸಿಲಿಂಡರ್ ಘೋಷಿಸಿದರೆ ನಮಗೆ ಸಂತೋಷವಾಗುತ್ತದೆ ಮತ್ತು ಅವರು ಆ ಘೋಷಣೆ ಮಾಡಲಿದ್ದಾರೆ ಎಂದು ನಾನು ಕೇಳಿದೆ. ನಮ್ಮ ಘೋಷಣೆಗಳ ನಂತರ, ಅವರು ಸಿಲಿಂಡರ್‌ ಮತ್ತು ಮಹಿಳೆಯರ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಮಧ್ಯ ಪ್ರದೇಶ ಕಾಂಗ್ರೆಸ್‌ ನಾಯಕ ಕಮಲ್‌ ನಾಥ್‌ ಹೇಳಿದರು. 

ಹೊಸದಿಲ್ಲಿ (ಆಗಸ್ಟ್‌ 21, 2023): 26 ವಿರೋಧ ಪಕ್ಷಗಳ ಹೊಸದಾಗಿ ರಚನೆಯಾದ ಮೈತ್ರಿಕೂಟ INDIA ಬಗ್ಗೆ ಮಾತನಾಡಿದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ರಾಜ್ಯ ಮುಖ್ಯಸ್ಥ ಕಮಲ್ ನಾಥ್, ಮೈತ್ರಿಕೂಟವು ತಮ್ಮ ಭಿನ್ನಾಭಿಪ್ರಾಯಗಳನ್ನು ನಿವಾರಿಸುತ್ತದೆ ಮತ್ತು ಒಟ್ಟಿಗೆ ಇರುತ್ತದೆ. ಏಕೆಂದರೆ ಅವರ ಧ್ಯೇಯವಾಕ್ಯ "ಯಾರಾದರೂ ಸರಿ, ಆದರೆ ಮೋದಿ ಬೇಡ’’ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ರಾಜ್ಯ ಮುಖ್ಯಸ್ಥ ಕಮಲ್ ನಾಥ್ ಇಂದು ಹೇಳಿದ್ದಾರೆ.

ಹಾಗೂ, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲಾಗುವುದು. 2024ರ ಚುನಾವಣೆಗೆ ಮುನ್ನ ಪಕ್ಷಗಳು ಸಮಸ್ಯೆಗಳ ಕುರಿತು ಮಾತನಾಡುತ್ತವೆ ಮತ್ತು ಕೆಲಸ ಮಾಡಲಿವೆ ಎಂದು 26 ವಿರೋಧ ಪಕ್ಷಗಳ ಹೊಸದಾಗಿ ರಚನೆಯಾದ ಮೈತ್ರಿಕೂಟ ಕುರಿತು ಕಮಲ್ ನಾಥ್ ಹೇಳಿದರು.  ಇವುಗಳಲ್ಲಿ ಕೆಲವು ಪ್ರಬಲ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ಗೆ ನೇರ ಪ್ರತಿಸ್ಪರ್ಧಿಗಳಾಗಿವೆ. ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಯನ್ನು ಪ್ರತಿನಿಧಿಸುವ 'ಇಂಡಿಯಾ', 2024 ರಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಆಶಿಸುತ್ತಿದೆ ಎಂದೂ ಹೇಳಿದರು.

ಇದನ್ನು ಓದಿ: ‘ಲೋಕ’ ಸಮರ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲ್ಯಾನ್‌: ಶೀಘ್ರದಲ್ಲೇ ಎಲ್‌ಪಿಜಿ ಬೆಲೆ ಇಳಿಕೆ, ರೈತರ ಖಾತೆಗೆ ಪರಿಹಾರ ಧನ ಹೆಚ್ಚಳ!

ಇನ್ನು, ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಘೋಷಿಸಿದ ಕಲ್ಯಾಣ ಯೋಜನೆಗಳ ಬಗ್ಗೆ ತೀವ್ರವಾಗಿ ಟೀಕಿಸಿದ ಕಮಲ್ ನಾಥ್, "ಕಾರ್ಯಗಳು ಮಾತಿಗಿಂತ ಜೋರಾಗಿ ಸದ್ದು ಮಾಡಬೇಕು" ಎಂದೂ ಹೇಳಿದರು. "ಅವರು 18 ವರ್ಷಗಳ ನಂತರ ಸಹೋದರಿಯರು ಮತ್ತು ರೈತರನ್ನು ನೆನಪಿಸಿಕೊಂಡರು. ಅವರು ಚುನಾವಣೆಗೆ ಐದು ತಿಂಗಳು ಮುಂಚಿತವಾಗಿ ಈ ಘೋಷಣೆಗಳನ್ನು ಏಕೆ ಮಾಡಬೇಕಾಗಿತ್ತು? ಅವರು ತಮ್ಮ ಹದಿನೆಂಟು ವರ್ಷಗಳ ಪಾಪವನ್ನು ತೊಳೆಯಲು ಪ್ರಯತ್ನಿಸುತ್ತಿದ್ದಾರೆ" ಎಂದೂ ಕಮಲ್‌ನಾಥ್‌ ವ್ಯಂಗ್ಯವಾಡಿದ್ದಾರೆ.

ಸಾಮಾನ್ಯ ಜನರಿಗೆ ಪರಿಹಾರದ ಬಗ್ಗೆ ಮಾತನಾಡುವಾಗ, ನಮ್ಮ ಮನಸ್ಸಿನಲ್ಲಿ ಚುನಾವಣೆ ಇರಲಿಲ್ಲ, ಶಿವರಾಜ್ ಚೌಹಾಣ್ ₹ 500 ಕ್ಕೆ ಗ್ಯಾಸ್ ಸಿಲಿಂಡರ್ ಘೋಷಿಸಿದರೆ ನಮಗೆ ಸಂತೋಷವಾಗುತ್ತದೆ ಮತ್ತು ಅವರು ಆ ಘೋಷಣೆ ಮಾಡಲಿದ್ದಾರೆ ಎಂದು ನಾನು ಕೇಳಿದೆ. ನಮ್ಮ ಘೋಷಣೆಗಳ ನಂತರ, ಅವರು ಸಿಲಿಂಡರ್‌ ಮತ್ತು ಮಹಿಳೆಯರ ಬಗ್ಗೆ ಯೋಚಿಸುತ್ತಿದ್ದಾರೆ" ಎಂದೂ ಕಾಂಗ್ರೆಸ್‌ ನಾಯಕ ಹೇಳಿದರು. ನಾವು ₹ 1500 ನೀಡುವುದಾಗಿ ಹೇಳಿದಾಗ ₹ 2 ಸಾವಿರ ನೀಡುವುದಾಗಿ ಹೇಳಿದ್ದರು, ಅವರು ಅದನ್ನು ಮಾಡಿದರೆ ನಮ್ಮ ಗುರಿ ಈಡೇರುತ್ತದೆ, ಏಕೆಂದರೆ ನಮ್ಮ ಗುರಿ ಮತವಲ್ಲ, ಆದರೆ ಜನರ ಕಲ್ಯಾಣವಾಗಿದೆ’ ಎಂದೂ  ಮಧ್ಯ ಪ್ರದೇಶ ಮಾಜಿ ಸಿಎಂ ಕಮಲ್‌ ನಾಥ್‌ ಹೇಳಿದರು.

ಇದನ್ನೂ ಓದಿ: LPG ಬಳಕೆದಾರರಿಗೆ ಬ್ಯಾಡ್‌ ನ್ಯೂಸ್‌: ಸಿಲಿಂಡರ್‌ ಬೆಲೆಯಲ್ಲಿ ಹೆಚ್ಚಳ; ಇಂದಿನಿಂದಲೇ ಪರಿಷ್ಕೃತ ದರ ಜಾರಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌