ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳಿಗೆ ಎಚ್‌ಡಿಕೆ ಪರೀಕ್ಷೆ! 61 ಪ್ರಶ್ನೆಗಳಿಗೆ ಉತ್ತರಿಸಬೇಕು

Kannadaprabha News   | Asianet News
Published : Sep 28, 2021, 08:57 AM IST
ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳಿಗೆ ಎಚ್‌ಡಿಕೆ ಪರೀಕ್ಷೆ!  61 ಪ್ರಶ್ನೆಗಳಿಗೆ ಉತ್ತರಿಸಬೇಕು

ಸಾರಾಂಶ

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೇರುವ ಗುರಿ ಈಡೇರಿಕೆಗಾಗಿ ಹೈಟೆಕ್‌ ಸ್ಪರ್ಶ  ಜೆಡಿಎಸ್‌ ಆರಂಭಿಸಿರುವ 4 ದಿನಗಳ ‘ಜನತಾ ಪರ್ವ -1.0 ಹಾಗೂ ಜೆಡಿ​ಎಸ್‌ ಮಿಷನ್‌ -123’ ಕಾರ್ಯಾ​ಗಾ​ರ

ರಾಮ​ನ​ಗರ (ಸೆ.28): ಮುಂದಿನ ವಿಧಾನಸಭೆ ಚುನಾವಣೆಯಲ್ಲಿ (Assembly Election) ಅಧಿಕಾರಕ್ಕೇರುವ ಗುರಿ ಈಡೇರಿಕೆಗಾಗಿ ಹೈಟೆಕ್‌ ಸ್ಪರ್ಶದೊಂದಿಗೆ ಜೆಡಿಎಸ್‌ (JDS) ಆರಂಭಿಸಿರುವ 4 ದಿನಗಳ ‘ಜನತಾ ಪರ್ವ -1.0 ಹಾಗೂ ಜೆಡಿ​ಎಸ್‌ ಮಿಷನ್‌ -123’ ಕಾರ್ಯಾ​ಗಾ​ರ​ದಲ್ಲಿ ಮೊದಲ ದಿನ ಭಾಗ​ವ​ಹಿ​ಸಿದ್ದ 200 ಪ್ರತಿ​ನಿ​ಧಿ​ಗ​ಳಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ (HD Kumaraswamy) ಗೆಲು​ವಿನ ಪಾಠ ಮಾಡಿ​ದ​ರು.

ಸುಮಾರು ಒಂದು ತಾಸಿಗೂ ಹೆಚ್ಚು ಕಾಲ 2023ರ ವಿಧಾ​ನ​ಸಭಾ ಚುನಾವಣೆ ಎದುರಿಸುವ ಬಗ್ಗೆ ತಮ್ಮ ಕನಸು, ಪರಿಕಲ್ಪನೆ ಹಂಚಿಕೊಂಡ ಎಚ್‌ಡಿಕೆ, ಜನರನ್ನು ತಲುಪುವ ಬಗೆ, ಸಂಘಟನೆ, ಕಾರ್ಯಕರ್ತರನ್ನು ಒಗ್ಗೂಡಿಸುವುದು, ಕಾಲ ಕಾಲಕ್ಕೆ ಪಕ್ಷ ನೀಡುವ ಸೂಚನೆಗಳನ್ನು ಪಾಲಿಸುವುದು, ಗೆಲುವಿಗಾಗಿ ಮಾಡಬೇಕಾದ ಎಲ್ಲ ಪ್ರಯತ್ನಗಳ ಬಗ್ಗೆ ವಿವರವಾಗಿ ಹೇಳಿದರು.

2023ರ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ: ಸಿದ್ದರಾಮಯ್ಯಗೆ ಎಚ್‌ಡಿಕೆ ಪರೋಕ್ಷ ಚಾಲೆಂಜ್

ಪಕ್ಷವನ್ನು ಸಂಘಟನೆ ಮಾಡುವುದರ ಜತೆಗೆ ಮಹಿಳಾ ಘಟಕ (woman wing), ಯುವ ಘಟಕ, ವಿಧ್ಯಾರ್ಥಿ ಘಟಕವನ್ನು ಬಲಗೊಳಿಸುವ ಬಗ್ಗೆ ಸಲಹೆ ನೀಡಿದರು. ಕಷ್ಟಕಾಲದಲ್ಲಿ ಪಕ್ಷದ ಜೊತೆ ನಿಂತ ಯಾರನ್ನೂ ಕೈ ಬಿಡುವುದಿಲ್ಲ. ಎಲ್ಲರೂ ತಮ್ಮ ಶಕ್ತಿಯನ್ನು ಬಳಸಿ ಸಂಘಟನೆ ಮಾಡಿ ಗೆಲ್ಲಬೇಕು. ಅದಕ್ಕೆ ಬೇಕಾದ ಎಲ್ಲ ಸಹಕಾರವನ್ನು ಪಕ್ಷ ನೀಡಲಿದೆ ಎಂದು ಸ್ಪಷ್ಟವಾಗಿ ಹೇಳಿದರು. ಅಭ್ಯರ್ಥಿ (Candidate) ಆಗಬೇಕೆಂಬ ಹಂಬಲ ಇದ್ದರೆ ಸಾಲದು. ಗೆಲ್ಲಲೇಬೇಕು ಎಂಬ ಛಲವೂ ಇರಬೇಕು. ಸಿಕ್ಕಿದ ಅವಕಾಶವನ್ನು ಕಳೆದುಕೊಳ್ಳುವುದು ಬೇಡ ಎಂದು ಕಿವಿಮಾತು ಹೇಳಿದರು.

ಆಕಾಂಕ್ಷಿಗಳಿಗೆ ಪರೀಕ್ಷೆ:  ಮುಂದಿನ ಚುನಾವಣೆಗೆ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗ​ಳಿಗೆ ಕಠಿಣ ಪರೀಕ್ಷೆ (Examination) ನೀಡಲಾ​ಗಿ​ದೆ. ಅವರಿಗೆ ಪ್ರಶ್ನೆ ಪತ್ರಿಕೆ ನೀಡಲಾಗಿದೆ. ಈ ಪ್ರಶ್ನೆ ಪತ್ರಿ​ಕೆ​ಯಲ್ಲಿ ಗೆಲುವಿಗಾಗಿ ಆಯ್ಕೆ ಮಾಡಿಕೊಂಡ ಟಾಪ್‌ 10 ನಾಯಕರ ಹೆಸರು, ತಮ್ಮ ಕ್ಷೇತ್ರದಲ್ಲಿ ಎಷ್ಟುಸದಸ್ಯತ್ವ ನೋಂದಣಿ ಮಾಡಿಸಿದ್ದೀರಿ? ಎಚ್‌ಡಿಕೆ ಅವರಲ್ಲಿ ನಿಮಗೆ ಇಷ್ಟವಾದ ಎರಡು ಗುಣಗಳೇನು? ಎಚ್‌ಡಿಕೆ ಅವರ ಇಷ್ಟವಾಗದ ಎರಡು ಗುಣಗಳು ಯಾವುವು? ನಿಮ್ಮ ಕ್ಷೇತ್ರದ ಜನ ನಿಮ್ಮಲ್ಲಿ ಇಷ್ಟಪಡುವ ಗುಣಗಳೇನು? ಇಷ್ಟಪಡದ ಗುಣಗಳೇನು? ಪ್ರಾದೇ​ಶಿಕ ಪಕ್ಷದ ಆರು ಅನು​ಕೂ​ಲ​ತೆ​ಗಳನ್ನು ತಿಳಿಸಿ? ತಮ್ಮ ಗೆಲು​ವಿನ ಎರಡು ಪ್ರಮುಖ ಸೂತ್ರ​ಗ​ಳನ್ನು ತಿಳಿಸಿ? ಹೀಗೆ ಸುಮಾರು 61 ಪ್ರಶ್ನೆಗಳಿರುವ ಪ್ರಶ್ನೆ ಪತ್ರಿಕೆಯನ್ನು ಆಕಾಂಕ್ಷಿ​ತ​ರಿಗೆ ನೀಡ​ಲಾ​ಗಿದ್ದು, ಅವ​ರೆ​ಲ್ಲರೂ ಉತ್ತರ ಬರೆ​ಯ​ಬೇ​ಕಾ​ಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!