ಕಾಂಗ್ರೆಸ್‌ನತ್ತ ಜಯಪ್ರಕಾಶ್ ಹೆಗ್ಡೆ ಚಿತ್ತ: ಲೋಕಸಭೆಗೆ ಕಣಕ್ಕಿಳಿಯಲು ರಣತಂತ್ರ

Published : Jul 10, 2023, 11:19 PM IST
ಕಾಂಗ್ರೆಸ್‌ನತ್ತ ಜಯಪ್ರಕಾಶ್ ಹೆಗ್ಡೆ ಚಿತ್ತ: ಲೋಕಸಭೆಗೆ ಕಣಕ್ಕಿಳಿಯಲು ರಣತಂತ್ರ

ಸಾರಾಂಶ

ಲೋಕಸಭೆಯಲ್ಲಿ ಕನಿಷ್ಠ 20 ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ರಣತಂತ್ರ ಹೆಣೆದಿದ್ದು, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಗೆ ಕಾಂಗ್ರೆಸ್​ ನಾಯಕರು ಗಾಳ ಹಾಕಿದ್ದಾರೆ.

ಬೆಂಗಳೂರು (ಜು.10): ಲೋಕಸಭೆಯಲ್ಲಿ ಕನಿಷ್ಠ 20 ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ರಣತಂತ್ರ ಹೆಣೆದಿದ್ದು, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಗೆ ಕಾಂಗ್ರೆಸ್​ ನಾಯಕರು ಗಾಳ ಹಾಕಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಜಯಪ್ರಕಾಶ್ ಹೆಗ್ಡೆ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸಲು ಒಪ್ಪಿಗೆ ಕೂಡ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಅಧ್ಯಕ್ಷರ ಅವಧಿ ವಿಸ್ತರಣೆಯ ಅಭಯ ನೀಡಲಾಗಿದೆ. ಈ ಮೂಲಕ ಜಯಪ್ರಕಾಶ್ ಹೆಗ್ಡೆ ಪರವಾಗಿ ಸಿದ್ದು ಸರ್ಕಾರದ ಸಾಫ್ಟ್ ಕಾರ್ನರ್ ತೋರಿಸಿದ್ದು, ಕಾಂಗ್ರೆಸ್​ ಪಕ್ಷಕ್ಕೆ ಸೆಳೆದು ಲೋಕಸಭಾ ಟಿಕೆಟ್ ನೀಡಲು ಪ್ಲ್ಯಾನ್ ಮಾಡಿದೆ.

2023ರಲ್ಲಿ ಚುನಾವಣೆಯಲ್ಲಿ ರಾಜಕೀಯ ಲೆಕ್ಕಾಚಾರ ಬದಲಾಗಿದೆ. 2023ರಲ್ಲಿ ಚಿಕ್ಕಮಗಳೂರಿನ 5 ಕ್ಷೇತ್ರದಲ್ಲೂ ಕಾಂಗ್ರೆಸ್​ಗೆ ಜಯವಾಗಿದೆ. ಇನ್ನು ಉಡುಪಿಯ 5 ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿದೆ. ಚಿಕ್ಕಮಗಳೂರಿನ 4, ಉಡುಪಿಯ 4 ಕ್ಷೇತ್ರ ಸೇರಿ 1 ಲೋಕಸಭಾ ಕ್ಷೇತ್ರವಾಗಿದೆ. ಹೀಗಾಗಿ, ಕಾಂಗ್ರೆಸ್​ನ 4 ಶಾಸಕರು, ಬಿಜೆಪಿಯ 4 ಶಾಸಕರ ಮಧ್ಯೆ ಹೋರಾಟ ಶುರುವಾಗಲಿದೆ. ಬಿಜೆಪಿ ಪಾಳಯದ ನಾಯಕನನ್ನೇ ಸೆಳೆದು ಮೇಲುಗೈ ಸಾಧಿಸೋ ಪ್ಲ್ಯಾನ್ ಮಾಡಲಾಗಿದೆ. ಜಯಪ್ರಕಾಶ್ ಹೆಗ್ಡೆ ಅವರು 2012ರ ಉಪಚುನಾವಣೆಯಲ್ಲಿ ಒಮ್ಮೆ ಗೆದ್ದಿದ್ದರು. ಆದರೆ, ಇದಕ್ಕಿಂರ ಮೊದಲು 2009ರಲ್ಲಿ ಸದಾನಂದಗೌಡರ ವಿರುದ್ಧ ಸೋತಿದ್ದರು. ಆದರೆ, 2014ರಲ್ಲಿ ಸೋಲಿನ ಬಳಿಕ ಕಾಂಗ್ರೆಸ್​ಗೆ ಗುಡ್​ಬೈ ಹೇಳಿದ್ದರು. 

ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಆನ್‌ಲೈನ್‌ ರಮ್ಮಿ ಆಟ: ಅರುಣ್‌ ಕುಮಾರ್‌ ಹೇಳಿದ್ದೇನು?

ಜಯಪ್ರಕಾಶ್ ಹೆಗ್ಡೆ ಲೆಕ್ಕಾಚಾರವೇನು? ಜಯಪ್ರಕಾಶ್ ಹೆಗ್ಡೆ ಅವರು ಕೂಡ ಉಡುಪಿ-ಚಿಕ್ಕಮಗಳೂರು BJP ಟಿಕೆಟ್ ನೀರಿಕ್ಷೆಯಲ್ಲಿದ್ದಾರೆ ಎಂದು ಕೇಳಿಬರುತ್ತಿದೆ. ಈ ಬಾರಿ ಬಿಜೆಪಿಯಿಂದ ಮಾಜಿ ಸಚಿವ ಸಿ.ಟಿ ರವಿಗೆ ಟಿಕೆಟ್‌ ನೀಡುವ ಸಾಧ್ಯತೆಯಿದೆ. ಶೋಭಾ ಕರಂದ್ಲಾಜೆಗೆ ಬೆಂಗಳೂರು ಉತ್ತರದಿಂದ ಸ್ಪರ್ಧಿಸೋ ಸಾಧ್ಯತೆಯಿದೆ. ಹೀಗಾಗಿ ಬಿಜೆಪಿಯಲ್ಲಿ ಟಿಕೆಟ್ ಸಿಗೋದಿಲ್ಲ ಎಂದು ಕಾಂಗ್ರೆಸ್​ನತ್ತ ಹೆಗ್ಡೆ ಕಣ್ಣಿಟ್ಟಿದ್ದಾರೆ. ಚಿಕ್ಕಮಗಳೂರನ್ನ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿರೋದ್ರಿಂದ ಗೆಲುವಿನ ಪ್ಲ್ಯಾನ್ ಕೂಡ ಲಭಯವಾಗುತ್ತಿದೆ. 

ಲೋಕಸಭಾ ಉಪ ಚುನಾವಣೆ ವಿವರ: 
ಉಡುಪಿ-ಚಿಕ್ಕಮಗಳೂರು ಉಪ ಚುನಾವಣೆ -2012
ಜಯಪ್ರಕಾಶ್ ಹೆಗ್ಡೆ- ಕಾಂಗ್ರೆಸ್- 3,98,723
ಸುನೀಲ್ ಕುಮಾರ್‌-  ಬಿಜೆಪಿ-  3,52,999
ಭೋಜೇಗೌಡ - ಜೆಡಿಎಸ್- 72,080
45,724 ಮತಗಳ ಅಂತರದ ಜಯ

ರಾಹುಲ್‌ ಗಾಂಧಿಯಿಂದ ಮತ್ತೊಂದು ಭಾರತ್‌ ಜೋಡೋ ಯಾತ್ರೆ: ಈಸ್ಟ್‌ ಟು ವೆಸ್ಟ್‌ ಶೀಘ್ರ ಆರಂಭ

  • 2009ರ ಲೋಕಸಭಾ ಚುನಾವಣೆ ಮಾಹಿತಿ: 
  • ಉಡುಪಿ-ಚಿಕ್ಕಮಗಳೂರು ಚುನಾವಣೆ - 2009
  • ಸದಾನಂದಗೌಡ- ಬಿಜೆಪಿ- 4,01,441
  • ಜಯಪ್ರಕಾಶ್ ಹೆಗ್ಡೆ- ಕಾಂಗ್ರೆಸ್- 3,74,423
  • 27,081 ಮತಗಳ ಅಂತರದ ಜಯ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಉದಯ ಕದಲೂರು ಓಪನ್ ಹೇಳಿಕೆ
ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ