ಸಿಎಂ ಯಾರು ಆಗ್ತಾರೆ ಎಂಬುದು ಮುಖ್ಯವಲ್ಲ; ದೇಶ ಸಮೃದ್ಧವಾಗಬೇಕು: ಸಚಿವ ಕೋಟಾ

Published : Apr 01, 2023, 12:45 PM ISTUpdated : Apr 01, 2023, 12:46 PM IST
ಸಿಎಂ ಯಾರು ಆಗ್ತಾರೆ ಎಂಬುದು ಮುಖ್ಯವಲ್ಲ; ದೇಶ ಸಮೃದ್ಧವಾಗಬೇಕು: ಸಚಿವ ಕೋಟಾ

ಸಾರಾಂಶ

ರಾಜ್ಯದಲ್ಲಿ ಸಿಎಂ ಯಾರು ಆಗ್ತಾರೆ ಎಂಬುದು ಮುಖ್ಯವಲ್ಲ; ದೇಶ ಸಮೃದ್ಧವಾಗಬೇಕು ಎಂದು  ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಇತ್ತೀಚೆಗೆ ಉದ್ಘಾಟಿಸಿದರು.

ಜೋಯಿಡಾ (ಏ.1) : ಜೋಯಿಡಾ ತಾಲೂಕಿನ ಜಗಲಬೇಟದಲ್ಲಿ ಬಿಜೆಪಿಯಿಂದ ವಿಜಯ ಸಂಕಲ್ಪ ಕಾರ್ಯಕ್ರಮವನ್ನು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಇತ್ತೀಚೆಗೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿ(Narendra Modi) ದೇಶದ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಬಿಜೆಪಿ(BJP)ಯಲ್ಲಿ ಯಾರು ಮಂತ್ರಿಗಳಾಬೇಕು ಎಂಬುದು ಮುಖ್ಯವಲ್ಲ, ನಮ್ಮ ದೇಶ ಸಮೃದ್ಧವಾಗಬೇಕು. ನಮ್ಮ ಸರ್ಕಾರದ ಎಲ್ಲ ಜನರ ಪರವಾಗಿದೆ. ನಾವು ಎಂದಿಗೂ ಕಾಂಗ್ರೆಸ್‌ನವರಂತೆ ಗ್ಯಾರಂಟಿ ಕಾರ್ಡ್‌(caCongress guaranteerd) ನೀಡಿಲ್ಲ. ಜನರಿಗೆ ನಮ್ಮ ಪಕ್ಷದ ಬಗ್ಗೆ ವಿಶ್ವಾಸವಿದೆ. ನಮ್ಮ ಪಕ್ಷಕ್ಕೆ ಯಾವುದೇ ಗ್ಯಾರಂಟಿ ಕಾರ್ಡ್‌ ಬೇಡ. ನಮ್ಮ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲ. ತನ್ನ ಸಂಪೂರ್ಣ ಬದುಕು ದೇಶಕ್ಕಾಗಿ ಎಂಬ ಮನಸ್ಸು ನರೇಂದ್ರ ಮೋದಿ ಅವರದ್ದು. ಕಾಶ್ಮೀರದಲ್ಲಿ 370 ಆ್ಯಕ್ಟ್ ರದ್ದು ಮಾಡಿ, ಅಲ್ಲಿ ಜನರಿಗೆ ನ್ಯಾಯ ಒದಗಿಸಿದ್ದಾರೆ. ದೇಶಕ್ಕೆ ಭದ್ರತೆ, ಶಕ್ತಿ, ನ್ಯಾಯ, ಕೊಡುವುದೇ ನಮ್ಮ ಪಕ್ಷದ ಗುರಿ ಎಂದರು.

KARNATAKA ELECTION 2023: ಕಾಂಗ್ರೆಸ್‌, ಬಿಜೆಪಿ ಕಾಲೆಳೆಯುವ ಆಟ ಜೋರು!

ಮಾಜಿ ಶಾಸಕ ಸುನೀಲ್‌ ಹೆಗಡೆ ಮಾತನಾಡಿ, ಬಿಜೆಪಿ ಕುಟುಂಬ ಆಧರಿತ ಪಕ್ಷವಲ್ಲ. ಇದು ದೇಶಪ್ರೇಮ ಹೊಂದಿದವರ ಪಕ್ಷ. ದೇಶದ ಹಿತಕ್ಕಾಗಿ ದೇಶದ ರಕ್ಷಣೆಗಾಗಿ ಬಿಜೆಪಿ ಆಡಳಿತಕ್ಕೆ ಬರುವುದು ಅವಶ್ಯವಾಗಿದೆ ಎಂದರು.

ಜಗಲಬೇಟ ಗ್ರಾಪಂ ಅಧ್ಯಕ್ಷ ಗಿರೀಶ್‌ ನಾಯ್ಕ ಹಾಗೂ ಅವರ ಜತೆ 225 ಜನರನ್ನು ಬಿಜೆಪಿಗೆ ಸೇರ್ಪಡೆ ಮಾಡಲಾಯಿತು.

ಜೋಯಿಡಾ ಬಿಜೆಪಿ ಅಧ್ಯಕ್ಷ ಸಂತೋಷ ರೇಡ್ಕರ್‌, ತುಕಾರಾಂ ಮಾಂಜ್ರೇಕರ್‌, ಶಿವಾಜಿ ಗೋಸಾವಿ, ದೀಪಕ ದೇಸಾಯಿ, ಹಳಿಯಾಳ ಬಿಜೆಪಿ ಅಧ್ಯಕ್ಷ ಗಣಪತಿ ಕರಂಜೇಕರ, ಇತರರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!
Karnataka News Live: ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!