ವಿಜಯನಗರ ಬಿಜೆಪಿ ಬಂಡಾಯ ಅಭ್ಯರ್ಥಿಗೆ 101 ಲೀ. ಕ್ಷೀರಾಭಿಷೇಕ!

Published : Nov 19, 2019, 08:29 AM IST
ವಿಜಯನಗರ ಬಿಜೆಪಿ ಬಂಡಾಯ ಅಭ್ಯರ್ಥಿಗೆ 101 ಲೀ. ಕ್ಷೀರಾಭಿಷೇಕ!

ಸಾರಾಂಶ

ಚುನಾವಣಾ ಅಖಾಡದಲ್ಲಿ ಅಭ್ಯರ್ಥಿಗಳು| ಅಭ್ಯರ್ಥಿಗಳ ಪರ ಬೆಂಬಲಿಗರ ಭರ್ಜರಿ ಪ್ರಚಾರ| ವಿಜಯನಗರ ಬಿಜೆಪಿ ಬಂಡಾಯ ಅಭ್ಯರ್ಥಿಗೆ 101 ಲೀ. ಕ್ಷೀರಾಭಿಷೇಕ

ಹೊಸ​ಪೇ​ಟೆ[ನ.19]: ವಿಜಯನಗರದಲ್ಲಿ ಅನರ್ಹ ಶಾಸಕ ಆನಂದ​ಸಿಂಗ್‌ ಬಿಜೆಪಿ ಟಿಕೆಟ್‌ ನೀಡಿ​ರುವುದಕ್ಕೆ ಮುನಿ​ಸಿ​ಕೊಂಡು ಪಕ್ಷೇ​ತರ ಅಭ್ಯ​ರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕವಿ​ರಾಜ್‌ ಅರಸ್‌ ಅವರಿಗೆ ಅವರ ಬೆಂಬಲಿಗರು 101 ಲೀಟರ್‌ ಹಾಲಿನ ಅಭಿಷೇಕ ಮಾಡಿರುವ ಘಟನೆ ಸೋಮವಾರ ನಡೆದಿದೆ.

ಕವಿರಾಜ್‌ ಇಲ್ಲಿನ ಮೃತ್ಯುಂಜಯ ನಗ​ರ​ದ​ ಬಾಲಾಂಜ​ನೇಯ ದೇವ​ಸ್ಥಾ​ನಕ್ಕೆ ತೆರ​ಳಿ, ಆಂಜ​ನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿ​ಸಿದ ಬಳಿಕ ಕಾಲ್ನ​ಡಿ​ಗೆ​ಯಿಂದ ಉಪ​ವಿ​ಭಾ​ಗಾ​ಧಿ​ಕಾರಿ ಕಚೇ​ರಿಗೆ ತೆರಳಿ ಚುನಾ​ವ​ಣಾ​ಧಿ​ಕಾರಿ ಶೇಖ್‌ ತನ್ವೀರ್‌ ಆಸೀಫ್‌ ಅವ​ರಿಗೆ ನಾಮಪತ್ರ ಸಲ್ಲಿ​ಸಿ​ದ​ರು.

ಕವಿರಾಜ್‌ ನಾಮ​ಪತ್ರ ಸಲ್ಲಿಸಿ ಹೊರಬರುತ್ತದ್ದಂತೆಯೇ ಅವರ ಬೆಂಬಲಿಗರು 101 ಲೀಟರ್‌ ಹಾಲಿನ ಅಭಿ​ಷೇಕ ಮಾಡುವ ಮೂಲಕ ಅಭಿ​ಮಾನ ಮೆರೆ​ದ​ರು.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ: ಛಲವಾದಿ ನಾರಾಯಣಸ್ವಾಮಿ
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್