ಕುಮಾ​ರ​ಸ್ವಾಮಿಗೆ ವ್ಯವ​ಹಾರ ಚೆನ್ನಾ​ಗಿ​ದ್ದಾಗ ನೈಸ್‌ ಬೇಕಿತ್ತು: ಡಿ.ಕೆ.​ಸು​ರೇಶ್‌

Published : Aug 18, 2023, 02:00 AM IST
ಕುಮಾ​ರ​ಸ್ವಾಮಿಗೆ ವ್ಯವ​ಹಾರ ಚೆನ್ನಾ​ಗಿ​ದ್ದಾಗ ನೈಸ್‌ ಬೇಕಿತ್ತು: ಡಿ.ಕೆ.​ಸು​ರೇಶ್‌

ಸಾರಾಂಶ

ಮಾಧ್ಯ​ಮ​ಗ​ಳಲ್ಲಿ ಪುಕ್ಕಟೆ ಪ್ರಚಾರ ಸಿಗು​ತ್ತದೆ ಎಂದು ನೈಸ್‌ ರಸ್ತೆ ಬಗ್ಗೆಯೇ ಮಾತ​ನಾ​ಡು​ತ್ತಿ​ದ್ದಾರೆ. ಆ ನೈಸ್‌ ರಸ್ತೆಗೆ ಸಹಿ ಹಾಕಿ​ದ​ವರು ಯಾರು? ಡಿ.ಕೆ.ಶಿ​ವ​ಕು​ಮಾರ್‌ ಅಥವಾ ಕಾಂಗ್ರೆಸ್‌ನ ಬೇರೆ ನಾಯ​ಕರು ಯಾರಾ​ದರೂ ಸಹಿ ಹಾಕಿ​ದ್ದಾರಾ? ನಿಮಗೆ ಸಹಿ ಹಾಕಲು ಯಾರು ಹೇಳಿ​ದ್ದರು, ನಿಮ್ಮ​ವರೇ ತಾನೇ? ಎಂದು ಪ್ರಶ್ನಿಸಿದ ಡಿ.ಕೆ. ಸುರೇಶ್‌  

ರಾಮ​ನ​ಗರ(ಆ.18):  ನಿಮಗೆ ವ್ಯವ​ಹಾರ ಬೇಕು ಅಂದಾಗ ನೈಸ್‌ ರಸ್ತೆ ಬೇಕಾ​ಗಿತ್ತು. ಈಗ ವ್ಯವ​ಹಾರ ಇಲ್ಲ​ವಲ್ಲ, ಅದಕ್ಕೆ ನೈಸ್‌ ರಸ್ತೆ​ ವಿರೋಧಿಸುತ್ತಿದ್ದೀರಿ. ಅಷ್ಟಕ್ಕೂ ನೀವು ಮುಖ್ಯ​ಮಂತ್ರಿ ಆಗಿ​ದ್ದಾಗ ನೈಸ್‌ ಯೋಜನೆ ಕುರಿತು ಒಂದೇ ಒಂದು ಸಭೆ ನಡೆ​ಸ​ಲಿಲ್ಲ ಏಕೆ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾ​ರ​ಸ್ವಾಮಿ ಅವ​ರನ್ನು ಸಂಸದ ಡಿ.ಕೆ.​ಸು​ರೇಶ್‌ ಪ್ರಶ್ನಿ​ಸಿ​ದ್ದಾರೆ.

ಮಾಧ್ಯ​ಮ​ಗ​ಳಲ್ಲಿ ಪುಕ್ಕಟೆ ಪ್ರಚಾರ ಸಿಗು​ತ್ತದೆ ಎಂದು ನೈಸ್‌ ರಸ್ತೆ ಬಗ್ಗೆಯೇ ಮಾತ​ನಾ​ಡು​ತ್ತಿ​ದ್ದಾರೆ. ಆ ನೈಸ್‌ ರಸ್ತೆಗೆ ಸಹಿ ಹಾಕಿ​ದ​ವರು ಯಾರು? ಡಿ.ಕೆ.ಶಿ​ವ​ಕು​ಮಾರ್‌ ಅಥವಾ ಕಾಂಗ್ರೆಸ್‌ನ ಬೇರೆ ನಾಯ​ಕರು ಯಾರಾ​ದರೂ ಸಹಿ ಹಾಕಿ​ದ್ದಾರಾ? ನಿಮಗೆ ಸಹಿ ಹಾಕಲು ಯಾರು ಹೇಳಿ​ದ್ದರು, ನಿಮ್ಮ​ವರೇ ತಾನೇ? ನಿಮಗೆ ವ್ಯವ​ಹಾರ ಬೇಕು ಅಂದಾಗ ನೈಸ್‌ ರಸ್ತೆ ಬೇಕಾ​ಗಿತ್ತು. ಈಗ ವ್ಯವ​ಹಾರ ಇಲ್ಲ​ವಲ್ಲ ಅದಕ್ಕೆ ಮಾತ​ನಾ​ಡು​ತ್ತಿ​ದ್ದೀರಿ ಎಂದು ಟೀಕಿ​ಸಿ​ದ​ರು. ನೈಸ್‌ ರಸ್ತೆ ಹೆಸರಲ್ಲಿ ಬೆಂಗ​ಳೂರು-ಮೈಸೂರು ಭಾಗದ ರೈತ​ರಿಗೆ ಅನ್ಯಾ​ಯ​ವಾ​ಗಿ​ದ್ದರೆ ಅದು ನಿಮ್ಮಿಂದ ಅನ್ನುವುದನ್ನು ಮರೆ​ಯ​ಬಾ​ರದು. ತಮಿ​ಳು​ನಾಡಿನ ಹೊಸೂರು ಉದ್ಧಾರ ಆಗಲು ನೀವು ಕಾರಣ ಎಂದು ಹೇಳಿದರು.

ಪಾಪದ ಹಣದಲ್ಲಿ ವಿದೇಶ ಪ್ರವಾಸ ಅಗತ್ಯವಿಲ್ಲ: ಚಲುವರಾಯಸ್ವಾಮಿಗೆ ಎಚ್‌ಡಿಕೆ ತಿರುಗೇಟು

ದೇವ​ನ​ಹ​ಳ್ಳಿ, ಹೊಸ​ಕೋಟೆ, ದೊಡ್ಡ​ಬ​ಳ್ಳಾ​ಪು​ರ,​ ಚಿ​ಕ್ಕ​ಬ​ಳ್ಳಾ​ಪು​ರದ ಕಡೆ ಜನ ಹೋಗು​ತ್ತಿ​ದ್ದಾರೆ ಅಂದರೆ ಅದಕ್ಕೆ ಕಾರಣ ನೀವೇ. ನೈಸ್‌ ರಸ್ತೆ​ಯನ್ನು ಪೂ​ರ್ಣ​ಗೊ​ಳಿ​ಸಿ​ದ್ದರೆ ಸುತ್ತಮುತ್ತಲ ರೈತರ ಆಸ್ತಿ​ಮೌಲ್ಯ .5 ರಿಂದ .10 ಕೋಟಿಗೆ ತಲುಪುತ್ತಿತ್ತು. ಮುಖ್ಯ​ಮಂತ್ರಿ ಆಗಿ​ದ್ದಾಗ ನೈಸ್‌ ಯೋಜನೆ ಕುರಿತು ಒಂದೇ ಒಂದು ಸಭೆ ಕರೆ​ಯ​ಲಿಲ್ಲ. ಮಾಧ್ಯ​ಮ​ಗ​ಳಲ್ಲಿ ಪುಕ್ಕಟೆ ಪ್ರಚಾರ ಪಡೆ​ಯು​ತ್ತಿ​ದ್ದೀರಿ. ನೀವು ರೈತ​ರಿಗೆ ಮಾಡಿ​ರುವ ಅನ್ಯಾ​ಯ​ ಮರೆ​ಯ​ಬೇಡಿ ಎಂದು ಸುರೇಶ್‌ ವಾಗ್ದಾಳಿ ನಡೆ​ಸಿ​ದ​ರು.

ನೈಸ್‌ ರಸ್ತೆ ಬಗ್ಗೆ ಏನಾ​ದರು ಒಂದು ತೀರ್ಮಾನ ತೆಗೆ​ದು​ಕೊ​ಳ್ಳ​ಲೇ ಬೇ​ಕಿದೆ. ಅದನ್ನು ಬಿಟ್ಟು ಇಲ್ಲ​ದಿ​ರುವ ವ್ಯಾಜ್ಯ ಸೃ​ಷ್ಟಿ​ಸಿ​ದರೆ ಮೊಮ್ಮ​ಕ್ಕಳ ಕಾಲ​ದ​ವ​ರೆಗೂ ಸಮಸ್ಯೆ ಬಗೆ​ಹ​ರಿ​ಯಲ್ಲ ಎಂದರು.

ಬಿಡದಿಯಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ನಿಯಮಿತದಿಂದ ಬಿಡದಿ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಮಂಜೂರಾಗಿರುವ ಕೆಸಿಸಿ ಬೆಳೆ ಸಾಲ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್
ಜನರೊಂದಿಗೆ ಸಂಪರ್ಕ ಸಾಧಿಸಿ, ಸೋಶಿಯಲ್ ಮೀಡಿಯಾ ಬಳಸಿ: ಸಂಸದರಿಗೆ ಮೋದಿ ಕರೆ