ಸಾರ್ವಜನಿಕರ ಭೇಟಿಗೆ ಸಮಯ ನಿಗದಿ ಮಾಡಿದ ಎಚ್‌ಡಿಕೆ : ಇನ್ಮುಂದೆ ಇಲ್ಲೇ ರಾಜಕೀಯ

Kannadaprabha News   | Asianet News
Published : Jul 05, 2021, 02:17 PM IST
ಸಾರ್ವಜನಿಕರ ಭೇಟಿಗೆ ಸಮಯ ನಿಗದಿ ಮಾಡಿದ ಎಚ್‌ಡಿಕೆ : ಇನ್ಮುಂದೆ ಇಲ್ಲೇ ರಾಜಕೀಯ

ಸಾರಾಂಶ

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಾರ್ವಜನಿಕರಿಗೆ ತಮ್ಮ ಭೇಟಿ ಸಮಯ ನಿಗದಿ ಮಾಡಿದ್ದಾರೆ.   ಇನ್ನು ಮುಂದೆ ಪ್ರತಿದಿನ ಸಾರ್ವಜನಿಕರಿಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಬೆಳಿಗ್ಗೆ 8.30 ರಿಂದ 10.30 ರವರೆಗೆ  ಅವಕಾಶ ಕಲ್ಪಿಸಿದ್ದಾರೆ.  

ಬೆಂಗಳೂರು (ಜು.05): ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಾರ್ವಜನಿಕರಿಗೆ ತಮ್ಮ ಭೇಟಿ ಸಮಯ ನಿಗದಿ ಮಾಡಿದ್ದಾರೆ. 

 ಇನ್ನು ಮುಂದೆ ಪ್ರತಿದಿನ ಸಾರ್ವಜನಿಕರಿಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಬೆಳಿಗ್ಗೆ 8.30 ರಿಂದ 10.30 ರವರೆಗೆ  ಅವಕಾಶ ಕಲ್ಪಿಸಿದ್ದಾರೆ.  

ಕಳೆದ ಆರು ತಿಂಗಳಿನಿಂದ ಬಿಡದಿ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿರುವ ಕುಮಾರಸ್ವಾಮಿ. ಇಸ್ರೇಲ್ ಮಾದರಿಯಲ್ಲಿ ತೋಟವನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. 
ಬೆಂಗಳೂರಿನ ಮನೆಯಲ್ಲಿ ಸಾರ್ವಜನಿಕರಿಗೆ ಭೇಟಿ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ಬಿಡದಿ ತೋಟದ ಮನೆಯಲ್ಲಿ ಕಛೇರಿ ಉದ್ಘಾಟನೆ ಮಾಡಿ ಇಲ್ಲಿಯೇ ಸಾರ್ವಜನಿಕರನ್ನು ಭೇಟಿ ಮಾಡಲಾಗುತ್ತದೆ.  ಬಿಡದಿ ತೋಟದ ಮನೆಯಿಂದಲೇ ಇನ್ನು ಮುಂದೆ ರಾಜಕೀಯ ಚಟುವಟಿಕೆಗಳು ನಡೆಯಲಿದೆ. 

ಮೈಷುಗರ್ ಸಕ್ಕರೆ ಕಾರ್ಖಾನೆ ಖಾಸಗಿಗೆ ಕೊಡಬೇಡಿ; ಸಿಎಂಗೆ ಎಚ್‌ಡಿಕೆ ಮನವಿ ..  
ಮೇಕೆದಾಟು ವಿಚಾರದ ಬಗ್ಗೆ ಪ್ರತಿಕ್ರಿಯೆ:  ತಮಿಳುನಾಡಿನ ಮುಖ್ಯಮಂತ್ರಿ ಹೇಳಿಕೆ ಗಮನಿಸಿದ್ದೇನೆ. ನಾವು ಮೇಕೆದಾಟಿನಲ್ಲಿ ಸಂಗ್ರಹ ಮಾಡುವುದು 67 ಟಿಎಂಸಿ ನೀರು. ಶಿಂಷಾ, ಕೆ ಆರ್ ಎಸ್ ಭಾಗದಿಂದ ಬರುವ ನೀರಿನ ಭಾಗವನ್ನು ಅವರಿಗೂ ಕೊಡಬೇಕಿದೆ.  ಆ ನೀರಿನ ಪ್ರಮಾಣ ಕಡಿಮೆ ಆಗುತ್ತೆ ಎಂಬ ಆತಂಕ ಅವರದ್ದು.  

ಮೇಕೆದಾಟಿನಲ್ಲಿ ವಿದ್ಯುತ್ ಶಕ್ತಿ ವಿಚಾರವೇ ಬೇರೆ, ಜಲಾಶಯ ವಿಚಾರವೇ ಬೇರೆ ಎಂದು ಹೇಳಿದ್ದಾರೆ.  ತಮಿಳುನಾಡಿನ ಸಿಎಂ ಗೆ ನಾನೇ ಸ್ವತಃ ಮನವಿ ಮಾಡುತ್ತೇನೆ. 
ನ್ಯಾಯಾಧೀಕರಣ ತೀರ್ಪು ನೀಡಿದೆ. ನಾವು ತಮಿಳುನಾಡಿಗೆ ಕೊಡಬೇಕಾದ ನೀರು ಕೊಡುವುದು ನಮ್ಮ ಜವಾಬ್ದಾರಿ. ನಾವಿಬ್ಬರು ಅಣ್ಣ ತಮ್ಮಂದಿರ ರೀತಿಯಲ್ಲಿ. 
ತಮಿಳುನಾಡಿನ ರೈತರು ನಮ್ಮ ಅಣ್ಣ ತಮ್ಮಂದಿರೆ, ನಮ್ಮ ರೈತರು ಅಣ್ಣ ತಮ್ಮಂದಿರೆ ಎಂದರು.

ಜಲಾಶಯ ನಿರ್ಮಾಣಕ್ಕಾಗಿ ನಮ್ಮ ಜನರ ಬೇಡಿಕೆ ಇದೆ.  ಹೆಚ್ಚಿನ ನೀರು ಸಮುದ್ರಕ್ಕೆ ಹೋಗುತ್ತಿದೆ.  ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಭಾಗಕ್ಕೆ ಕುಡಿಯುವ ನೀರಿಗೆ ಇದನ್ನು ಬಳಕೆ ಮಾಡಿಕೊಳ್ಳುವುದು.  ತಮಿಳುನಾಡಿಗೆ ಎಷ್ಟು ನೀರು ನೀಡಬೇಕೊ ಅದನ್ನು ನೀಡುತ್ತೇವೆ. ಅವರಿಗೆ ಈ ಬಗ್ಗೆ ಅನುಮಾನ ಬೇಡ. 

ಅವರು ಹೊಗೆನಕಲ್ ನಲ್ಲಿ ಯಾರ ಅಪ್ಪಣೆ ತೆಗೆದುಕೊಂಡು ಅಣೆಕಟ್ಟು ಕಟ್ಟಿದರು. ಆ ನೀರು ಯಾವುದಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.  ಕುಡಿಯುವುದಕ್ಕ ಅಥವಾ ರೈತರಿಗಾ ?
ಎರಡು ರಾಜ್ಯದ ಜನರ ಸಂಬಂಧ ಸೌಹಾರ್ಧವಾಗಿ ಇರಬೇಕಾಗುತ್ತದೆ. ಇದನ್ನು ಸೌಹಾರ್ಧಯುತವಾಗಿಯೇ ಬಗೆಹರಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!