ಈಶ್ವರಪ್ಪರನ್ನ ಪೆದ್ದ ಎಂದು ಕರೆಯುವುದರಲ್ಲಿ ಆಶ್ಚರ್ಯವಿಲ್ಲ: ಎಚ್‌.ಸಿ. ಮಹದೇವಪ್ಪ

Published : Sep 18, 2022, 12:59 PM IST
ಈಶ್ವರಪ್ಪರನ್ನ ಪೆದ್ದ ಎಂದು ಕರೆಯುವುದರಲ್ಲಿ ಆಶ್ಚರ್ಯವಿಲ್ಲ: ಎಚ್‌.ಸಿ. ಮಹದೇವಪ್ಪ

ಸಾರಾಂಶ

ಆರ್‌ಎಸ್‌ಎಸ್‌ನಿಂದ ಸಚಿವ ಸ್ಥಾನ ಪಡೆಯಲು ದಲಿತರ ಸಂವಿಧಾನಿಕ ಅವಕಾಶಗಳ ಮೇಲೆ ಅಸಹನೆ ತೋರಬಾರದು: ಮಹದೇವಪ್ಪ 

ಮೈಸೂರು(ಸೆ.18):  ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರನ್ನು ಪೆದ್ದ ಎಂದು ಕರೆಯುವುದರಲ್ಲಿ ಆಶ್ಚರ್ಯವಿಲ್ಲ ಎಂದು ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ವ್ಯಂಗ್ಯವಾಡಿದ್ದಾರೆ.

ಶೇ. 40 ಈಶ್ವರಪ್ಪನವರೇ ಎಂದು ಮೊದಲಿಸಿರುವ ಅವರು, ಮೀಸಲಾತಿ ಎಂಬುದು ಆರ್ಥಿಕ ಕಾರಣಕ್ಕಾಗಿ ನೀಡುವಂತದ್ದಲ್ಲ. ಅದು ಪ.ವರ್ಗದ ಸಮುದಾಯಗಳು ಐತಿಹಾಸಿಕವಾಗಿ ಅನುಭವಿಸಿದ ಅವಮಾನ, ಅಸಮಾನತೆ ಮತ್ತು ಅಸ್ಪೃಶ್ಯತೆಯ ಕಾರಣಕ್ಕಾಗಿ ನೀಡುವಂತದ್ದು. ಬಾಯಿಗೆ ಬಂದ ಹಾಗೆ ಮಾತನಾಡುವ ಬದಲು ಸಂವಿಧಾನ ಓದಿದರೆ ಯಾರಿಗೂ ಈ ಸಮಸ್ಯೆ ಇರುವುದಿಲ್ಲ ಎಂದಿದ್ದಾರೆ. 

ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಫೋಟ: ಸರ್ಕಾರದ ವಿರುದ್ಧ ಈಶ್ವರಪ್ಪ ಕಿಡಿ

ಅಲ್ಲದೆ ಮೀಸಲಾತಿಗೆ ಸಾಮಾಜಿಕ ಅಸಮಾನತೆ ಮಾನದಂಡವೇ ಹೊರತು ಆರ್ಥಿಕತೆ ಅಲ್ಲ. ಆರ್‌ಎಸ್‌ಎಸ್‌ನಿಂದ ಸಚಿವ ಸ್ಥಾನ ಪಡೆಯಲು ದಲಿತರ ಸಂವಿಧಾನಿಕ ಅವಕಾಶಗಳ ಮೇಲೆ ಅಸಹನೆ ತೋರಬಾರದು ಎಂದು ಅವರು ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ
ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!