
ಬೆಂಗಳೂರು, (ಜ.13): ಹೊಸ ಇಂದು (ಬುಧವಾರ) 7 ನೂತನ ಸಚಿವರುಗಳು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಸಂಪುಟ ಸೇರ್ಪಡೆಯಾದರು.
ರಾಜಭವನದಲ್ಲಿ ನಡೆದ ಸರಳ ಸಮಾರಭದಲ್ಲಿ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಎಂಟಿಬಿ ನಾಗರಾಜ್, ಆರ್.ಶಂಕರ್, ಅಂಗಾರ, ಅರವಿಂದ್ ಲಿಂಬಾವಳಿ ಹಾಗೂ ಸಿ.ಪಿ.ಯೋಗೇಶ್ವರ್ ಅವರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಯಡಿಯೂರಪ್ಪ ಸಂಪುಟದ ನೂತನ ಸಾರಥಿಗಳ ಪ್ರಮಾಣ ವಚನದ ಫೋಟೋಗಳು
ಆದ್ರೆ, ಇವರಿಗೆ ಯಾವ ಖಾತೆ ಎನ್ನುವುದನ್ನು ಇನ್ನೂ ಕೊಟ್ಟಿಲ್ಲ. ಖಾತೆಗಾಗಿ ಲಾಬಿಗಳು ಸಹ ಶುರುವಾಗಿದೆ. ಇದಕ್ಕೂ ಮೊದಲು ನೂತನ ಸಚಿವರುಗಳಿಗೆ ವಿಧಾನಸೌಧದಲ್ಲೇ ಕೊಠಡಿ ಹಂಚಿಕೆ ಮಾಡಲಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ರವೀಂದ್ರ ಕೊಠಡಿ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಹಾಗಾದ್ರೆ, ಯಾರಿಗೆ ಯಾವ ಸಂಖ್ಯೆ ಕೊಠಢಿ ಎನ್ನುವುದು ಈ ಕೆಳಗಿನಂತಿದೆ.
ಕೊಠಡಿ ಹಂಚಿಕೆ
ಉಮೇಶ್ ಕತ್ತಿ - 329 -329ಎ - ವಿಧಾನಸೌಧ
* ಅರವಿಂದ ಲಿಂಬಾವಳಿ - 344-344ಎ - ವಿಧಾನಸೌಧ
* ಎಂಟಿಬಿ ನಾಗರಾಜ್ - 330-330ಎ - ವಿಧಾನಸೌಧ
* ಮುರುಗೇಶ್ ನಿರಾಣಿ - 307-307ಎ - ವಿಧಾನಸೌಧ
* ಸಿ.ಪಿ.ಯೋಗೇಶ್ವರ್ - 336-336ಎ - ವಿಧಾನಸೌಧ
* ಎಸ್.ಅಂಗಾರ - 252-253ಎ - ವಿಧಾನಸೌಧ
* ಆರ್.ಶಂಕರ್ - 305-305ಎ - ವಿಧಾನಸೌಧ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.