ಮಾತಲ್ಲೇ ಉಳಿದ ಸ್ತ್ರೀಗೆ ಶೇ.33ರಷ್ಟು ಮೀಸಲು, 2823 ಅಭ್ಯರ್ಥಿಗಳ ಪೈಕಿ ಕೇವಲ 235 ಮಹಿಳೆಯರು!

Published : Apr 29, 2024, 02:43 PM IST
ಮಾತಲ್ಲೇ ಉಳಿದ ಸ್ತ್ರೀಗೆ ಶೇ.33ರಷ್ಟು ಮೀಸಲು,  2823 ಅಭ್ಯರ್ಥಿಗಳ ಪೈಕಿ ಕೇವಲ 235 ಮಹಿಳೆಯರು!

ಸಾರಾಂಶ

ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ನೀಡುವ ಮಸೂದೆಗೆ ಸಂಸತ್ತಿನ ಅನುಮೋದನೆ ಸಿಕ್ಕರೂ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪಕ್ಷಗಳು ಶೇ.8ರಷ್ಟು ಮಹಿಳೆಯರಿಗೆ ಮಾತ್ರ ಟಿಕೆಟ್‌ ನೀಡಿವೆ. ಟಿಕೆಟ್‌ ನೀಡುವಲ್ಲಿ ತಮಿಳುನಾಡು, ಕೇರಳ ಟಾಪ್‌ 2 ಸ್ಥಾನದಲ್ಲಿದೆ.

ನವದೆಹಲಿ (ಏ.29): ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ನೀಡುವ ಮಸೂದೆಗೆ ಸಂಸತ್ತಿನ ಅನುಮೋದನೆ ಸಿಕ್ಕರೂ, ಹಾಲಿ ಲೋಕಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಒಡಿಶಾದ ಬಿಜೆಡಿ ಹೊರತುಪಡಿಸಿದರೆ ಉಳಿದ ಎಲ್ಲಾ ರಾಜಕೀಯ ಪಕ್ಷಗಳು ಈ ಮೀಸಲು ಕಳಕಳಿ ಬದಿಗೊತ್ತಿರುವುದು ಸಾಬೀತಾಗಿದೆ.

1.09 ಕೋಟಿ ಸರ್ಕಾರಿ ಉದ್ಯೋಗಕ್ಕೆ ಕೇವಲ 87 ಲಕ್ಷ ಜನರಿಂದ ಮಾತ್ರ ನೋಂದಣಿ!

ಒಟ್ಟು ಏಳು ಹಂತದಲ್ಲಿ ನಡೆಯಲಿರುವ ಲೋಕಸಭಾ ಕದನದಲ್ಲಿ ಈಗಾಗಲೇ ಎರಡು ಹಂತದ ಮತದಾನ ಪ್ರಕ್ರಿಯೆ ಮುಗಿದಿದೆ. ಒಟ್ಟು 2823 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಆದರೆ ಇಷ್ಟು ಅಭ್ಯರ್ಥಿಗಳ ಪೈಕಿ ವಿವಿಧ ರಾಜಕೀಯ ಪಕ್ಷಗಳು ಅವಕಾಶ ನೀಡಿದ್ದು ಕೇವಲ 235 ಮಹಿಳೆಯರಿಗೆ ಮಾತ್ರವೇ. ಅಂದರೆ ಶೇ.8ರಷ್ಟು ಮಾತ್ರವೇ ಪ್ರಾತಿನಿಧ್ಯ ಸಿಕ್ಕಿದೆ.

Hassan Sex Scandal: HD ರೇವಣ್ಣ ಎ1 , ಪ್ರಜ್ವಲ್ ಎ2 ಆರೋಪಿ, ಪಿನ್‌ ಟು ಪಿನ್‌ ಕಥೆ ಹೇಳಿದ ಸಂತ್ರಸ್ಥೆ!

ಮೊದಲ ಹಂತದ ಚುನಾವಣೆಯಲ್ಲಿ 135 , ಎರಡನೇ ಹಂತದಲ್ಲಿ ಚುನಾವಣೆಯಲ್ಲಿ 100 ಜನ ಮಹಿಳಾ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಮೊದಲ ಹಂತದಲ್ಲಿ ಮಹಿಳಾ 135 ಅಭ್ಯರ್ಥಿಗಳ ಪೈಕಿ ತಮಿಳುನಾಡಿನಿಂದ ಅತ್ಯಧಿಕ 100 ಅಭ್ಯರ್ಥಿಗಳು ಸ್ಪರ್ಧಿಸಿದ್ದರು . ಎರಡನೇ ಹಂತದಲ್ಲಿ ಕೇರಳದಲ್ಲಿ ಅತಿಹೆಚ್ಚು ಅಂದರೆ 24 ಮಹಿಳೆಯರು ಎಲೆಕ್ಷನ್ ಅಖಾಡದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಒಟ್ಟು 235 ಮಹಿಳಾ ಅಭ್ಯರ್ಥಿಗಳ ಪೈಕಿ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ 69, ಕಾಂಗ್ರೆಸ್ 44, ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ. ಆದರೆ ಒಡಿಶಾದಲ್ಲಿ ಬಿಜೆಡಿ ಮಾತ್ರವೇ ಮಹಿಳೆಯರಿಗೆ ಶೇ.33ರಷ್ಟು ಟಿಕೆಟ್‌ ನೀಡಿಕೆಯ ಭರವಸೆ ಈಡೇರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ