
ಬೆಂಗಳೂರು (ಅ.12) : ರಾಜ್ಯದಲ್ಲಿ ಸತ್ತವರ ಹೆಸರನ್ನೇ ಹೇಳಿಕೊಂಡು ರಾಜಕೀಯ ಮಾಡಿದವರಿದ್ದಾರೆ. ಕುಸುಮಾ ಡಿ ಕೆ ರವಿ ಅವರನ್ನು ಧಾರ್ಮಿಕ ವಿಧಿಗಳಂತೆ ಮದುವೆಯಾದವರು. ಅವರು ಗಂಡನ ಹೆಸರು ಹಾಕಿಕೊಳ್ಳುವುದು ಬೇಡ ಅಂದರೆ ಹೇಗೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದ್ದಾರೆ.
ಕುಸುಮಾ ಡಿ.ಕೆ ರವಿ ಹೆಸರು ಹೇಳಬಾರದು ಎಂದು ಹೇಳಿದ ಶೋಭಾ ಕರಂದ್ಲಾಜೆ ಮಾತಿಗೆ ಉಮಾಶ್ರೀ ತಿರುಗೇಟು ನೀಡಿದ್ದಾರೆ.
ಅವರ ಗಂಡನ ಹೆಸರನ್ನು ಬಳಸುವ ಬಗ್ಗೆ ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ಕುಸುಮಾ ವೈಫ್ ಆಫ್ ಡಿ.ಕೆ.ರವಿ. ನೋವುಂಡವರ ನೋವು ಅವರಿಗೇ ಗೊತ್ತು. ಶೋಭಾ ಕರಂದ್ಲಾಜೆ ಒಂದೇ ದಿಕ್ಕಿನಲ್ಲಿ ಯೋಚಿಸಬಾರದು ಎಂದು ಉಮಾಶ್ರೀ ಹೇಳಿದ್ದಾರೆ.
ಡಿ.ಕೆ ರವಿ ತಾಯಿ ಹೇಳಿಕೆಗೆ ಕುಸುಮಾ ಮೊದಲ ರಿಯಾಕ್ಷನ್ ...
ಸಣ್ಣ ವಯಸ್ಸಿನಲ್ಲೇ ಗಂಡನನ್ನ ಕಳೆದುಕೊಂಡ ಹೆಣ್ಣುಮಗಳು ಕುಸುಮಾ. ಕುಸುಮಾ ನೋವು ಯಾರಿಗೆ ಅರ್ಥ ವಾಗುತ್ತೆ. ನೋವನ್ನ ಮರೆತು ಸಾಮಾಜಿಕ ಸೇವೆಗೆ ಬಂದಿದ್ದಾರೆ. ಅಂತವರ ಬಗ್ಗೆ ಹೀಗೆ ಹೇಳಿಕೆ ಸರಿಯಲ್ಲ. ಶೋಭಾ ಅವರೇ ನೀವೇನು ಜ್ಯೋತಿಷಿಯಲ್ಲ. ಒಬ್ಬ ಸಂಸದೆಯಾಗಿ ನೀವು ಮಾತನಾಡಿ ಎಂದು ಉಮಾಶ್ರೀ ವಾಗ್ದಾಳಿ ನಡೆಸಿದರು.
ಯಾವುದೇ ಪಕ್ಷದ ಹೆಣ್ಣುಮಗಳಿರಲಿ ಅಂತವರ ಬಗ್ಗೆ ಇಂತಹ ವಿಚಾರ ಚರ್ಚಾ ವಿಷಯ ಮಾಡಬೇಡಿ. ಕುಸುಮಾ ಕ್ಯಾಂಡಿಡೇಟ್ ಆಗಿರೋದು ನಿಮಗೆ ಅಂಜಿಕೆಯಾಗಿರಬೇಕು. ಅದಕ್ಕೆ ಇಂತಹ ಮಾತುಗಳನ್ನ ಹೇಳ್ತಿದ್ದೀರ ಎಂದು ಶೋಭಾ ಕರಂದ್ಲಾಜೆ ವಿರುದ್ಧ ಉಮಾಶ್ರೀ ಗುಡುಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.