ನನ್ನ ವಿರುದ್ಧ ಲಿಂಗಾಯತರ ಎತ್ತಿ ಕಟ್ಟುವ ಯತ್ನ: ಸಿದ್ದರಾಮಯ್ಯ

Published : Apr 25, 2023, 01:14 PM IST
ನನ್ನ ವಿರುದ್ಧ ಲಿಂಗಾಯತರ ಎತ್ತಿ ಕಟ್ಟುವ ಯತ್ನ: ಸಿದ್ದರಾಮಯ್ಯ

ಸಾರಾಂಶ

‘ವೀರಶೈವ-ಲಿಂಗಾಯತರಲ್ಲಿ ಎಲ್ಲರೂ ಪ್ರಾಮಾಣಿಕರಾಗಿದ್ದರು. ಆದರೆ, ಬಸವರಾಜ ಬೊಮ್ಮಾಯಿಯವರು ‘ಭ್ರಷ್ಟ ಸಿಎಂ’ ಎಂದು ಹೇಳಿದ್ದೀನಿ. ಅದರಲ್ಲಿ ತಪ್ಪೇನಿದೆ?. ಅದು ಜಾತಿ ವಿರುದ್ಧ ನೀಡಿದ ಹೇಳಿಕೆಯಾ?’ ಎಂದು ಅವರು ಪ್ರಶ್ನಿಸಿದ ಸಿದ್ದರಾಮಯ್ಯ. 

ಬೆಳಗಾವಿ(ಏ.25):  ‘ಬಿಜೆಪಿಯವರು ನನ್ನ ವಿರುದ್ಧ ವೀರಶೈವ-ಲಿಂಗಾಯತರನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಹೇಳಿದ್ದು ವೀರಶೈವ-ಲಿಂಗಾಯತರಲ್ಲಿ ಎಲ್ಲರೂ ಪ್ರಾಮಾಣಿಕರಾಗಿದ್ದರು. ಆದರೆ, ಬಸವರಾಜ ಬೊಮ್ಮಾಯಿಯವರು ‘ಭ್ರಷ್ಟ ಸಿಎಂ’ ಎಂದು ಹೇಳಿದ್ದೀನಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಗೋಕಾಕ್‌ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನಿಮ್ಮ ಮಾತುಗಳನ್ನು ತಿರುಚಲಾಗುತ್ತಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ವೀರಶೈವ-ಲಿಂಗಾಯತರಲ್ಲಿ ಎಲ್ಲರೂ ಪ್ರಾಮಾಣಿಕರಾಗಿದ್ದರು. ಆದರೆ, ಬಸವರಾಜ ಬೊಮ್ಮಾಯಿಯವರು ‘ಭ್ರಷ್ಟ ಸಿಎಂ’ ಎಂದು ಹೇಳಿದ್ದೀನಿ. ಅದರಲ್ಲಿ ತಪ್ಪೇನಿದೆ?. ಅದು ಜಾತಿ ವಿರುದ್ಧ ನೀಡಿದ ಹೇಳಿಕೆಯಾ?’ ಎಂದು ಅವರು ಪ್ರಶ್ನಿಸಿದರು.

ಸಿದ್ದು ಅವನ್ಯಾರು, ಇವನ್ಯಾರು ಅನ್ನೋದನ್ನ ನಿಲ್ಲಿಸಲಿ: ಸೋಮಣ್ಣ

ಶೆಟ್ಟರ್‌ಗೆ ಟಿಕೆಟ್‌ ಕೈ ತಪ್ಪಲು ಬಿ.ಎಲ್‌.ಸಂತೋಷ್‌ ಕಾರಣರಲ್ಲ. ಇದು ಪ್ರಧಾನಿ ಮೋದಿ, ಅಮಿತ್‌ ಶಾ ಅವರು ತೆಗೆದುಕೊಂಡ ನಿರ್ಣಯ ಎಂಬ ಜೋಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಶೆಟ್ಟರ್‌ ಹೇಳೋದನ್ನು ನಂಬಬೇಕೊ?, ಜೋಶಿ ಹೇಳೋದನ್ನು ನಂಬಬೇಕೊ?’ ಎಂದು ಪ್ರಶ್ನೆ ಮಾಡಿದರು. ‘ನಾನು ನಂಬುವುದು ಶೆಟ್ಟರ್‌ ಹೇಳುವುದನ್ನು. ಜೋಶಿಯವರು ಸುಳ್ಳು ಹೇಳುತ್ತಾರೆ’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂದಿನಿಂದ ಕಾವೇರಲಿದೆ ಉತ್ತರ ಕರ್ನಾಟಕದ ಚರ್ಚೆ-3 ದಿನ ವಿಧಾನಮಂಡಲದಲ್ಲಿ ಈ ಬಗ್ಗೆ ಕಲಾಪ
ಅಧಿವೇಶನದಲ್ಲಿ ನಾವು ರಾಜ್ಯದ ರೈತರಿಗೋಸ್ಕರ ಹೋರಾಡುತ್ತೇವೆ: ಆರ್‌.ಅಶೋಕ್‌