Karnataka Politics: ಮೊದಲಿಗೆ ಸುಮಲತಾ ಬೆಂಬಲಿಗರು ಬಿಜೆಪಿ ಸೇರ್ಪಡೆ: ಯೋ​ಗೇ​ಶ್ವರ್‌

Published : Jun 04, 2022, 06:59 AM IST
Karnataka Politics: ಮೊದಲಿಗೆ ಸುಮಲತಾ ಬೆಂಬಲಿಗರು ಬಿಜೆಪಿ ಸೇರ್ಪಡೆ: ಯೋ​ಗೇ​ಶ್ವರ್‌

ಸಾರಾಂಶ

*  ಸೂಕ್ತ ಸಮ​ಯ​ದಲ್ಲಿ ಪಕ್ಷ ಸೇರ್ಪಡೆ ನಿರ್ಧಾರ ಕೈಗೊ​ಳ್ಳುವ ಭರ​ವಸೆ  *  ಸುಮ​ಲ​ತಾ​ರ​ವರು ಬಿಜೆಪಿ ಸೇರ್ಪ​ಡೆ​ಯಾ​ಗಲು ಕಾನೂನು ತೊಡಕು  *  ಅಧಿ​ಕೃ​ತ​ವಾಗಿ ಪಕ್ಷಕ್ಕೆ ಸೇರ್ಪ​ಡೆ​ಯಾ​ಗಲು ಆಗಲ್ಲ 

ರಾಮ​ನ​ಗರ(ಜೂ.04): ಮಂಡ್ಯ ಸಂಸದೆ ಸುಮ​ಲತಾ ಬಿಜೆಪಿ ಸೇರ್ಪ​ಡೆಗೆ ಯಾವುದೇ ಷರತ್ತು ಅಥವಾ ಬೇಡಿ​ಕೆ​ಗ​ಳನ್ನು ಈವರೆಗೆ ಮುಂದಿ​ಟ್ಟಿಲ್ಲ. ಸೂಕ್ತ ಸಮ​ಯ​ದಲ್ಲಿ ಪಕ್ಷ ಸೇರ್ಪಡೆ ನಿರ್ಧಾರ ಕೈಗೊ​ಳ್ಳುವ ಭರ​ವಸೆ ನೀಡಿ​ದ್ದಾರೆ ಎಂದು ವಿಧಾನ ಪರಿ​ಷತ್‌ ಸದಸ್ಯ ಸಿ.ಪಿ.​ಯೋ​ಗೇ​ಶ್ವರ್‌ ತಿಳಿ​ಸಿ​ದರು. 

ಶ್ರೀರಂಗ​ಪ​ಟ್ಟಣ ಮತ್ತು ಮದ್ದೂರು ವಿಧಾ​ನ​ಸಭಾ ಕ್ಷೇತ್ರದ ವಿಚಾ​ರ​ವಾಗಿ ಸುಮ​ಲ​ತಾ​ರ​ವರು ಯಾವ ಷರತ್ತನ್ನೂ ಹಾಕಿಲ್ಲ. ಈಗಾ​ಗಲೇ ಶ್ರೀರಂಗ​ಪ​ಟ್ಟಣ ಕ್ಷೇತ್ರ​ದಲ್ಲಿ ಅವರ ಬೆಂಬ​ಲಿಗ ಸಚ್ಚಿ​ದಾ​ನಂದ ಬಿಜೆಪಿ ಸೇರ್ಪ​ಡೆ​ಯಾಗಿ ಪಕ್ಷ ಸಂಘ​ಟ​ನೆ​ಯಲ್ಲಿ ತೊಡ​ಗಿ​ದ್ದಾರೆ. ಮೊದಲ ಹಂತದಲ್ಲಿ ಸುಮಲತಾ ಬೆಂಬಲಿಗರು ಬಿಜೆಪಿ ಸೇರ್ಪಡೆ ಆಗುತ್ತಿದ್ದಾರೆ ಎಂದರು.

ನನಗೆ ರಾಜಕೀಯ ಅನಿವಾರ‍್ಯವಲ್ಲ, ಪಕ್ಷ ಸೇರ್ಪಡೆ ಯೋಚಿಸಿಲ್ಲ: ಸುಮಲತಾ ಅಂಬರೀಶ್‌

ಈಗ ಸುಮ​ಲ​ತಾ​ರ​ವರು ಬಿಜೆಪಿ ಸೇರ್ಪ​ಡೆ​ಯಾ​ಗಲು ಕಾನೂನು ತೊಡಕು ಇದೆ. ಯಾವುದೇ ಸಂಸ​ದರು, ಶಾಸ​ಕ​ರಾ​ಗಲಿ ಗೆದ್ದ ಆರು ತಿಂಗ​ಳೊ​ಳಗೆ ಯಾವು​ದಾ​ದರು ಪಕ್ಷ ಸೇರ​ಬ​ಹುದು. ಆರು ತಿಂಗಳ ನಂತರ ಬೆಂಬಲ ನೀಡ​ಬ​ಹುದು ಅಷ್ಟೆ. ಆದರೆ, ಅಧಿ​ಕೃ​ತ​ವಾಗಿ ಪಕ್ಷಕ್ಕೆ ಸೇರ್ಪ​ಡೆ​ಯಾ​ಗಲು ಆಗಲ್ಲ ಎಂದು ಯೋಗೇಶ್ವರ್‌ ಹೇಳಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!