ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಮುರುಗೇಶ ನಿರಾಣಿ

Published : May 07, 2023, 10:02 PM IST
ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಮುರುಗೇಶ ನಿರಾಣಿ

ಸಾರಾಂಶ

2024ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿ​ಕಾರಕ್ಕೆ ಬರುತ್ತದೆ. ಈ ಬಾರಿ ನೀವು ಬಿಜೆಪಿಗೆ ಆಶೀರ್ವದಿಸಿದರೆ ಮುಂದಿನ 5 ವರ್ಷ ಕರ್ನಾಟಕದಲ್ಲಿ ಸುಭದ್ರವಾದ ಡಬಲ್‌ ಎಂಜಿನ್‌ ಸರ್ಕಾರ ಅಸ್ತಿತ್ವದಲ್ಲಿ ಇರುತ್ತದೆ. ಇದರಿಂದ ನಮ್ಮ ಕ್ಷೇತ್ರ, ನಮ್ಮ ರಾಜ್ಯ ಹಾಗೂ ದೇಶ ಎಲ್ಲವೂ ಸುಭಿಕ್ಷವಾಗಿರುತ್ತದೆ: ನಿರಾಣಿ 

ಬಾಗಲಕೋಟೆ(ಮೇ.07): ಕಾಂಗ್ರೆಸ್‌ ದೇಶದಲ್ಲಿ 60 ವರ್ಷ ದುರಾಡಳಿತ ಮಾಡಿದೆ. ದೇಶ ಕಾಂಗ್ರೆಸ್‌ ನೇತೃತ್ವದಲ್ಲಿದ್ದಾಗ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿಯೇ ಇತ್ತು. ಮೋದಿಜಿ ನೇತೃತ್ವದ ಬಿಜೆಪಿ ಸರ್ಕಾರ ಬಂದ ಮೇಲೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ರೂಪಗೊಂಡಿದೆ ಎಂದು ಬೀಳಗಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಹೇಳಿದರು.

ರೊಳ್ಳಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಡಬಲ್‌ ಎಂಜಿನ್‌ ಸರ್ಕಾರದಿಂದ ದಶಕಗಳಿಂದ ನೆನಗುದಿಗೆ ಬಿದ್ದ ಕೆಲಸಗಳಿಗೆ ಚಾಲನೆ ದೊರೆತಿದೆ. 2024ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿ​ಕಾರಕ್ಕೆ ಬರುತ್ತದೆ. ಈ ಬಾರಿ ನೀವು ಬಿಜೆಪಿಗೆ ಆಶೀರ್ವದಿಸಿದರೆ ಮುಂದಿನ 5 ವರ್ಷ ಕರ್ನಾಟಕದಲ್ಲಿ ಸುಭದ್ರವಾದ ಡಬಲ್‌ ಎಂಜಿನ್‌ ಸರ್ಕಾರ ಅಸ್ತಿತ್ವದಲ್ಲಿ ಇರುತ್ತದೆ. ಇದರಿಂದ ನಮ್ಮ ಕ್ಷೇತ್ರ, ನಮ್ಮ ರಾಜ್ಯ ಹಾಗೂ ದೇಶ ಎಲ್ಲವೂ ಸುಭಿಕ್ಷವಾಗಿರುತ್ತದೆ. ಕಾಂಗ್ರೆಸ್‌, ಜೆಡಿಎಸ್‌ ಎರಡು ಒಂದೇ ನಾಣ್ಯದ ಎರಡು ಮುಖಗಳು. ಹೀಗಾಗಿ ಅಭಿವೃದ್ಧಿ ಎನ್ನುವುದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು.

ಬಜರಂಗದಳ ನಿಷೇಧಿಸಿದರೆ ಕಾಂಗ್ರೆಸ್‌ ಸರ್ವನಾಶ: ನಳಿನ್‌ ಕುಮಾರ ಕಟೀಲ್‌

ಬೀಳಗಿ ಮತಕ್ಷೇತ್ರದಲ್ಲಿ ಕಳೆದ 5 ವಷÜರ್‍ಗಳಲ್ಲಿ ಬಹಳಷÜು್ಟಅಭಿವೃದ್ಧಿ ಕಾರ್ಯಗಳಾಗಿವೆ. ಜನತೆಯ ಅವಶ್ಯಕತೆಗಳನ್ನು ಅರಿತು ಕೆಲಸ ಮಾಡಿದ್ದೇನೆ. ಕಾಂಗ್ರೆಸ್‌ ಅಭ್ಯರ್ಥಿ ಜೆ.ಟಿ. ಪಾಟೀಲ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಜನತೆಗೆ ಎಲ್ಲವೂ ಅರ್ಥವಾಗುತ್ತದೆ. ಬೀಳಗಿ ಮತಕ್ಷೇತ್ರದ ಜನತೆ ವಿಕಾಸದ ಹಾದಿಯನ್ನು ಬಯಸುತ್ತಿದ್ದಾರೆ. ವಿಕಾಸ ಬಯಸುವವರು ಎಂದಿಗೂ ಕಾಂಗ್ರೆಸ್‌ ಆಯ್ಕೆ ಮಾಡಿಕೊಳ್ಳುವುದಿಲ್ಲ. ಸವಾಂರ್‍ಗೀಣ ಅಭಿವೃದ್ದಿಗಾಗಿ ಮತ್ತೊಮ್ಮೆ ನನಗೆ ಆಶೀರ್ವದಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಿವಾನಂದ ನಿಂಗನೂರ, ಮಲ್ಲಿಕಾರ್ಜುನ ಅಂಗಡಿ, ಈರಣ್ಣ ಗಿಡ್ಡಪ್ಪಗೋಳ, ಮಲ್ಲಪ್ಪ ಎಮ್‌. ಶಂಭೋಜಿ, ಬಸಲಿಂಗಪ್ಪ ನಿಂಗನೂರ, ಗೋವಿಂದಪ್ಪ ಬಿಳಂಡಿ, ಈರಪ್ಪ ಕಂಬಾರ, ನಿಜಲಿಂಗಪ್ಪ ತಳವಾರ, ಚೆನ್ನಯ್ಯ ಮಠ, ನಾಗನಗೌಡ ಪಾಟೀಲ, ಸಂಗಪ್ಪ ಕೆಂಪಗೌಡ್ರ, ಕೂಡ್ಲೇಪ್ಪ ಪಾಟೀಲ, ಶಿವಪ್ಪ ತಳವಾರ, ಚೆನ್ನಪ್ಪ ಮುದೂರ, ಭೀಮಣ್ಣ ಕುಬಕಡ್ಡಿ, ಮೈಬೂಸಾಬ ಜಮಾದಾರ, ದುಂಡಪ್ಪ ತಳವಾರ, ಮಹದೇವಪ್ಪ ಪಟ್ಟಣಶೆಟ್ಟಿ, ಮಲ್ಲಪ್ಪ ಕಿತ್ತೂರ, ಶಿವಾನಂದ ಕೆಂಪಗೌಡ್ರ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಬಿಜೆಪಿ ಸೆರ್ಪಡೆ:

ಭೀರಕಬ್ಬಿ ಗ್ರಾಮದ ವಿಕಲಚೇತನರಾದ ಬಾಲಪ್ಪ ಮಾದರ, ಮಲ್ಲಪ್ಪ ಕೆಠಾರಿ, ಲಕ್ಷ್ಮಣ ಪೂಜೇರಿ, ಭೀಮಣ್ಣ ಚಲಗೊಂಡ, ಹಣಮಂತ ಮಾದರ, ಮಲ್ಲಪ್ಪ ಮೆಳ್ಳಿಗೇರಿ, ಉಮೇಶ ಜಾಲಿ, ವಿಠ್ಠಲ ಯಲ್ಲಿಗುತ್ತಿ, ನಾಗಪ್ಪ ಶಿರೂರ, ಅಶೋಕ ವೀರಾಪುರ, ಅರ್ಜುನ ದಾಸರ ಅಪಾರ ಬೆಂಬಲಿಗರೊಂದಿಗೆ ಮುರಗೇಶ ನಿರಾಣಿಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಅವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!
ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?