
ಚನ್ನಪಟ್ಟಣ(ಜು.19): ಮೈತ್ರಿ ಖತಂ ಎಂದು ಯೋಗೇಶ್ವರ್ ಬೆಂಬಲಿಗರ ಮೂಲಕ ಎಚ್ಚರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ನಾನು ಅವರ ಪಾರ್ಟಿ ವಿಚಾರಕ್ಕೆ ಎಂಟ್ರಿ ಆಗಲ್ಲ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಅದು ಅವರ ಮಧ್ಯೆ ಇತ್ಯರ್ಥ ಆಗಬೇಕಿದೆ ಎಂದು ತಿಳಿಸಿದ್ದಾರೆ.
ನಾನು ಅಭಿವೃದ್ಧಿ ಮಾಡಲು ಬಂದಿದ್ದೇನೆ. ಈಗ ಚನ್ನಪಟ್ಟಣದಲ್ಲಿ 50 ಎಕರೆಯಷ್ಟು ಭೂಮಿ ಹುಡುಕಲಾಗಿದೆ. ಬಡವರಿಗೆ ಸೈಟ್ ಕೊಡಲು ಸರ್ವೇ ಮಾಡಿಸಲಾಗ್ತಿದೆ. ಈಗ ಅಧಿಕಾರ ಇದೇ, ಜನರಿಗೆ ಒಳ್ಳೆಯದನ್ನ ಮಾಡೋಣ ಎಂದು ಹೇಳಿದ್ದಾರೆ.
ದಮ್ಮಿದ್ದರೆ ಸಿಎಂ ವಾಲ್ಮೀಕಿ ಪ್ರಕರಣ ಸಿಬಿಐಗೆ ನೀಡಲಿ : ಸಂಸದ ರಮೇಶ ಜಿಗಜಿಣಗಿ ಸವಾಲು
ಅವರು ಹಿಂದೆ ಕಿತ್ತಾಡಿದ್ದರು, ನಂತರ ಒಂದಾದರು. ಈಗ ಕಿತ್ತಾಡುತ್ತಿದ್ದಾರೆ, ಮತ್ತೆ ಒಂದಾಗಲ್ಲ ಎಂಬುದು ಯಾವ ಗ್ಯಾರಂಟಿ ಎಂದು ಹೇಳುವ ಮೂಲಕ ಹೆಚ್ಡಿಕೆ - ಯೋಗೇಶ್ವರ್ ನಡುವಿನ ಅಸಮಾಧಾನಕ್ಕೆ ಡಿಕೆಶಿ ವ್ಯಂಗ್ಯವಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.