ಮೋದಿ ಎಂದಾದರೂ ನಾನು ಕೊಟ್ಟೆ, ನಾನು ಕೊಟ್ಟೆ ಅಂತ ಎದೆ ಬಡಿದುಕೊಂಡಿದ್ದಾರಾ?: ಸಿದ್ದು ವಿರುದ್ಧ ರವಿ ವ್ಯಂಗ್ಯ

Published : May 19, 2022, 06:32 AM IST
ಮೋದಿ ಎಂದಾದರೂ ನಾನು ಕೊಟ್ಟೆ, ನಾನು ಕೊಟ್ಟೆ ಅಂತ ಎದೆ ಬಡಿದುಕೊಂಡಿದ್ದಾರಾ?: ಸಿದ್ದು ವಿರುದ್ಧ ರವಿ ವ್ಯಂಗ್ಯ

ಸಾರಾಂಶ

*  ತುಂಬಿದ ಕೊಡ ತುಳುಕುವುದಿಲ್ಲ: ಸಿದ್ದು ವಿರುದ್ಧ ರವಿ ವ್ಯಂಗ್ಯ *  ರಾಜ್ಯದಲ್ಲಿ ಕಾಂಗ್ರೆಸ್‌ ಕಾಲದಲ್ಲಿ ‘ಅನ್ನಭಾಗ್ಯ’ ಯೋಜನೆಗೆ ಕೇಂದ್ರದ ಶೇ.90 ಹಣ  *  ಎರಡೂವರೆ ವರ್ಷಗಳ ಕಾಲ 84 ಕೋಟಿ ಜನರಿಗೆ ಉಚಿತವಾಗಿ ರೇಷನ್‌ ಕೊಟ್ಟ ಪ್ರಧಾನಿ ಮೋದಿ  

ಚಿಕ್ಕಮಗಳೂರು(ಮೇ.19):  ಓರ್ವ ಮಾಜಿ ಮುಖ್ಯಮಂತ್ರಿ ಎಲ್ಲದಕ್ಕೂ ನಾನು ಕೊಟ್ಟೆ, ನಾನು ಕೊಟ್ಟೆ ಎಂದು ಹೇಳಿಕೊಳ್ಳುತ್ತಿದ್ದರೂ, ತುಂಬಿದ ಕೊಡ ಎಂದೂ ತುಳುಕುವುದಿಲ್ಲ. ಅರ್ಧಂಬರ್ಧ ಇದ್ದವೇ ಹೆಚ್ಚು ಅಲುಗಾಡುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರೇಳದೇ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದರು.

ನಗರದ ಎಐಟಿ ಕಾಲೇಜಿನಲ್ಲಿ ಬುಧವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎರಡೂವರೆ ವರ್ಷಗಳ ಕಾಲ 84 ಕೋಟಿ ಜನರಿಗೆ ಉಚಿತವಾಗಿ ರೇಷನ್‌ ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಎಂದಾದರೂ ನಾನು ಕೊಟ್ಟೆ, ನಾನು ಕೊಟ್ಟೆ ಎಂದು ಎದೆ ಬಡಿದುಕೊಂಡಿದ್ದಾರಾ ಎಂದು ಪ್ರಶ್ನಿಸಿದರು.

ಆಜಾನ್-ಸುಪ್ರಭಾತ ವಿವಾದ: ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು ಕೊಟ್ಟ ಸಿಟಿ ರವಿ

ರಾಜ್ಯದಲ್ಲಿ ಕಾಂಗ್ರೆಸ್‌ ಕಾಲದಲ್ಲಿ ‘ಅನ್ನಭಾಗ್ಯ’ ಯೋಜನೆಗೆ ಕೇಂದ್ರ ಶೇ.90 ಹಣ ನೀಡುತ್ತಿತ್ತು. ಅಂದರೆ, ಒಟ್ಟು .32ನಲ್ಲಿ .29 ಬಿಜೆಪಿ ನೇತೃತ್ವದ ಕೇಂದ್ರದ್ದು, .3 ಮಾತ್ರ ರಾಜ್ಯದ್ದು. .29 ಕೊಟ್ಟವರು ನಾನು ಕೊಟ್ಟೆನಾನು ಕೊಟ್ಟೆಎಂದು ಹೇಳಲೇ ಇಲ್ಲಾ. .3 ಕೊಟ್ಟವರು ನಾನು ಕೊಟ್ಟೆ ನಾನು ಕೊಟ್ಟೆ ಎಂದು ಹೇಳುತ್ತಿದ್ದರು ಎಂದು ವ್ಯಂಗ್ಯವಾಡಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ