
ಬೆಂಗಳೂರು, (ಜೂನ್.09): ಶಾಸಕ ಜಮೀರ್ ಅಹ್ಮದ್ ಖಾನ್, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಮತ್ತು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.
ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್, ಕುಮಾರಸ್ವಾಮಿ ಲಾಭ ಇದೆ ಅಂದ್ರೆ ಸಾಕು ಪಲ್ಟಿ ಹೊಡೆಯುತ್ತಾರೆ. ದೇವೇಗೌಡರು ಹಾಗಲ್ಲ, ಅವರು ಸೆಕ್ಯೂಲರ್ ಸಿದ್ಧಾಂತದವರು. ಕುಮಾರಸ್ವಾಮಿಗೆ ಯಾವ ಸಿದ್ಧಾಂತವೂ ಇಲ್ಲ. ಹಣ, ಅಧಿಕಾರ ಸಿಕ್ಕರೆ ಎಲ್ಲಿಗೆ ಬೇಕಾದ್ರೂ ಹೋಗ್ತಾರೆ. ಅಧಿಕಾರಕ್ಕಾಗಿ ಯಾರ ಕಾಲು ಬೇಕಾದ್ರೂ ಹಿಡಿಯುತ್ತಾರೆ ಎಂದು ಕಿಡಿಕಾರಿದರು.
ರಾಜ್ಯ ಸಂದಿಗ್ಧತೆಗೆ ಸಿಲುಕಿರುವ ಈ ಹೊತ್ತಿನಲ್ಲಿ ಇದೆಂಥ ರಾಜಕೀಯ? ಎಚ್ಡಿಕೆ ಕ್ಲಾಸ್
ಪದೇ ಪದೇ ಸಿಎಂ ಹತ್ತಿರ ಕುಮಾರಸ್ವಾಮಿ ಯಾಕೆ ಹೋಗಬೇಕು? ಕುಮಾರಸ್ವಾಮಿ ಪಲ್ಟಿ ಗಿರಾಕಿ. ಯಾವಾಗ ಎಲ್ಲಿ ಬೇಕಾದ್ರೂ ಪಲ್ಟಿ ಹೊಡೆಯುತ್ತಾರೆ. ಕುಮಾರಸ್ವಾಮಿಗೆ ದುಡ್ಡು ಅಧಿಕಾರ ಎರಡೇ ಬೇಕಾಗಿರೋದು ಎಂದು ಎಡಿಕೆ ವಿರುದ್ಧ ಜಮೀರ್ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಇದೇ ವೇಳೆ ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ ಜಮೀರ್, ರಾಜ್ಯದಲ್ಲಿ ಬಿಜೆಪಿ ನೆಲ ಕಚ್ಚಿತ್ತು. ಅದು ಮೇಲೆಳೆಲು ಕುಮಾರಸ್ವಾಮಿಯವರೇ ಸಹಾಯ ಮಾಡಿದ್ದು. 20/20 ಅಧಿಕಾರ ಕೊಡಬೇಕಿತ್ತು. ಬಿಜೆಪಿಯವರಿಗೆ ಕೊಡಿ ಅಂತ ಹೇಳಿದ್ದೆ. ಕೊಟ್ಟಿದ್ದರೆ ಅವತ್ತೇ ಅವರು ಕಿತ್ತಾಡಿಕೊಂಡು ಹೋಗ್ತಿದ್ರು. ಆಗ ಮಾಡಿದ ತಪ್ಪಿಗೆ ಈಗ ಅಧಿಕಾರ ಹಿಡಿದಿದ್ದಾರೆ.ಸಿ.ಟಿ ರವಿಯರು ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದರು.
ಜನ ಇವತ್ತು ಶಾಪ ಹಾಕ್ತಿದ್ದಾರೆ. ಸರ್ಕಾರಕ್ಕೆ ಥೂ ಛೀ ಅಂತ ಛಿಮಾರಿ ಹಾಕುತ್ತಿದ್ದಾರೆ. ನಾವಿದ್ದರೆ ಸಹಾಯ ಹಸ್ತ ಚಾಚುತ್ತಿದ್ದೆವು. ಬಿಜೆಪಿಗೆ ಜನ ಬಹುಮತ ಕೊಟ್ಟಿಲ್ಲ. ಆಪರೇಷನ್ ಕಮಲ ಮಾಡಿ ಬಂದವರು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.