'ಮತಾಂತರ ಚರ್ಚೆ ಬಿಡಿ: GST ಪರಿಹಾರ, ರೈತರಿಗೆ ಅನ್ಯಾಯ ಆಗ್ತಿರುವ ಬಗ್ಗೆ ಮಾತಾಡಿ'

Published : Sep 22, 2021, 03:41 PM IST
'ಮತಾಂತರ ಚರ್ಚೆ ಬಿಡಿ: GST ಪರಿಹಾರ, ರೈತರಿಗೆ ಅನ್ಯಾಯ ಆಗ್ತಿರುವ ಬಗ್ಗೆ ಮಾತಾಡಿ'

ಸಾರಾಂಶ

* ಅಧಿವೇಶನದಲ್ಲಿ ಮತಾಂತರ ಬಗ್ಗೆ ಚರ್ಚೆ * ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ * ಜಿಎಸ್‌ಟಿ ಪರಿಹಾರ ಸಿಕ್ಕಿಲ್ಲ, ರೈತರಿಗೆ ಅನ್ಯಾಯ ಆಗ್ತಿದೆ ಆ ಬಗ್ಗೆ ಚರ್ಚೆ ಆಗುತ್ತಿಲ್ಲ ಎಂದು ಕಿಡಿ

ಬೆಂಗಳೂರು, (ಸೆ.22): ಪ್ರಸ್ತುತ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಮತಾಂತರ ಬಗ್ಗೆ ತೀವ್ರ  ಚರ್ಚೆ ನಡೆಯುತ್ತಿದ್ದು, ನನ್ನ ಹೆತ್ತ ತಾಯಿಯೇ ಮತಾಂತರ ಆಗಿದ್ದಾರೆ ಎಂದು  ಬಿಜೆಪಿ (BJP) ಶಾಸಕ ಗೂಳಿಹಟ್ಟಿ ಶೇಖರ್ ನೋವು ತೋಡಿಕೊಂಡರು.

ಇನ್ನು ಈ ಮತಾಂತರ ವಿರುದ್ಧ ಕಾಂಗ್ರೆಸ್ (Congress) ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಮತಾಂತರ ಮಾಡೋದು ಸಂವಿಧಾನವಾಗಿ ಅದು ತಪ್ಪು. ಯಾರು ತಪ್ಪು ಮಾಡ್ತಾರೆ, ಅವರನ್ನ ಶಿಕ್ಷಿಸಲಿ. ಚರ್ಚೆ ಮಾಡಲು ಅನೇಕ ವಿಚಾರಗಳಿವೆ. ಆದ್ರೆ ಬಿಜೆಪಿಯವರು ಯಾವ್ಯಾವುದೋ ಬಿಲ್ ತಂದು ಚರ್ಚೆ ಮಾಡ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ತಾಯಿಯೇ ಕ್ರೈಸ್ತ ಧರ್ಮಕ್ಕೆ ಮತಾಂತರ: ಗೂಳಿಹಟ್ಟಿ ಗೋಳು!

ಜಿಎಸ್‌ಟಿ ಪರಿಹಾರ ಸಿಕ್ಕಿಲ್ಲ, ರೈತರಿಗೆ ಅನ್ಯಾಯ ಆಗ್ತಿದೆ ಆ ಬಗ್ಗೆ ಚರ್ಚೆ ಆಗುತ್ತಿಲ್ಲ. ಸಂವಿಧಾನದಲ್ಲಿ ಯಾವ ಧರ್ಮ ಪಾಲನೆ ಬೇಕಾದ್ರೂ ಪಾಲನೆಗೆ ಅವಕಾಶವಿದೆ. ಫೋರ್ಸ್ಡ್ ಕನ್ವರ್ಟ್ ಮಾಡೋದು ತಪ್ಪು. ನಾನು ಒಂದು ಧರ್ಮವನ್ನ ಒಪ್ಪುತ್ತೇನೆ ಅಂದ್ರೆ ಅದನ್ನ ಫಾಲೋ ಮಾಡೋದು ತಪ್ಪಲ್ಲ. ಸಂವಿಧಾನದಲ್ಲೇ ಯಾವ ಧರ್ಮವನ್ನ ಬೇಕಾದ್ರೂ ಪಾಲನೆ ಮಾಡಲು ಅವಕಾಶವಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ: ಛಲವಾದಿ ನಾರಾಯಣಸ್ವಾಮಿ
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್