'ಪ್ರಧಾನಿ ಮೋದಿಯವರು ಅದಾನಿ, ಅಂಬಾನಿ ಗುಲಾಮರಾಗಿದ್ದಾರೆ'

Kannadaprabha News   | Asianet News
Published : Jan 27, 2021, 12:27 PM IST
'ಪ್ರಧಾನಿ ಮೋದಿಯವರು ಅದಾನಿ, ಅಂಬಾನಿ ಗುಲಾಮರಾಗಿದ್ದಾರೆ'

ಸಾರಾಂಶ

 ಸರ್ಕಾರದ ಬಳಿ ಗುಪ್ತಚರ ಮಾಹಿತಿ ಇರಲಿಲ್ಲವೇ. ರೈತರು 62 ದಿನಗಳಿಂದ ಸುಮ್ನೇ ಪ್ರತಿಭಟನೆ ಮಾಡುತ್ತಾರಾ..?  ಕೇಂದ್ರ ಸರ್ಕಾರ 11 ಬಾರಿ ಮಾತುಕತೆ ನಡೆಸಿದ್ದು ಕಣ್ಣೊರೆಸುವ ತಂತ್ರ ಮಾಡುತ್ತಿದೆ ಎಮದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬೆಂಗಳೂರು (ಜ.27):  ರೈತರನ್ನ ಭಯೋತ್ಪಾದಕರು ಎಂದು ಬಾಯಿಗೆ ಬಂದ ಹಾಗೆ ಮಾತಾಡಬೇಡಿ. ಸರ್ಕಾರ ಹತಾಶೆಗೊಂಡು ಈ ರೀತಿಯ ಹೇಳಿಕೆಗಳನ್ನ ನೀಡುತ್ತಿದೆ.   ಖಲಿಸ್ತಾನ ಭಯೋತ್ಪಾದರಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರ ವಿರುದ್ಧ ಅಸಮಾಧಾನ ಹೊರಹಾಕಿದರು.

ಬೆಂಗಳೂರಿನಲ್ಲಿಂದು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ಬಳಿ ಗುಪ್ತಚರ ಮಾಹಿತಿ ಇರಲಿಲ್ಲವೇ. ರೈತರು 62 ದಿನಗಳಿಂದ ಸುಮ್ನೇ ಪ್ರತಿಭಟನೆ ಮಾಡುತ್ತಾರಾ..?  ಕೇಂದ್ರ ಸರ್ಕಾರ 11 ಬಾರಿ ಮಾತುಕತೆ ನಡೆಸಿದ್ದು ಕಣ್ಣೊರೆಸುವ ತಂತ್ರ ಮಾಡುತ್ತಿದೆ.  ಈ ಸಮಸ್ಯೆ ಇತ್ಯರ್ಥ ಮಾಡಲು 11 ಬಾರಿ‌ ಮಾತುಕತೆಗಳು ಬೇಕಾಗಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. 

ಕೇಂದ್ರ ಸರ್ಕಾರ ತಂದಿರುವ ಕೃಷಿಕಾಯ್ದೆಗಳು ರೈತವಿರೋಧಿಯಾಗಿದೆ.  ಇವು ಕೃಷಿಕಾಯ್ದೆಗಳಲ್ಲಿ ಕಪ್ಪು ಕಾಯ್ದೆಗಳು.. ಇವನ್ನ ಹಿಂಪಡೆಯಿರಿ ಎನ್ನುವುದು ರೈತರ ಬೇಡಿಕೆಯಾಗಿದೆ ಎಂದರು.

'ಸಿದ್ದರಾಮಯ್ಯ ವಿರುದ್ಧ ಡಿಕೆಶಿ ತಕ್ಷಣ ಕ್ರಮ ಕೈಗೊಳ್ಳಲಿ' ...

ಪ್ರಧಾನಿ ನರೇಂದ್ರ ಮೋದಿ ಅದಾನಿ, ಅಂಬಾನಿಗೆ ಮಾತುಕೊಟ್ಟಂತೆ ಕಾಣುತ್ತಿದೆ. ಅವರ ಗುಲಾಮರಾಗಿದ್ದಾರೆ. ಅದಾನಿ, ಅಂಬಾನಿ ಅವರೇ ಡಿಕ್ಟೇಟ್ ಮಾಡಿ ಕಾಯ್ದೆ ಮಾಡಿಸಿದಂತಿದೆ.  56 ಇಂಚಿನ ಎದೆ ಇದೆ ಇದ್ದರೆ ಸಾಲದು, ಆ ಎದೆಯೊಳಗೆ ಬಡವರು ರೈತರ ಕಣ್ಣೀರಿಗೆ ಸ್ಪಂದಿಸುವ ಹೃದಯ ಇರಬೇಕು.  ಇವತ್ತಿನ ವರೆಗು ರೈತರ ಜೊತೆ ಮೋದಿ ಮಾತಾಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಶಿವಮೊಗ್ಗಕ್ಕೆ ಭೇಟಿ :  ಇಂದು ಶಿವಮೊಗ್ಗದಲ್ಲಿ ಸ್ಫೋಟ ನಡೆದ ಸ್ಥಳಕ್ಕೆ ಹೋಗುತ್ತೇನೆ.  ಅಲ್ಲಿ ಆರು ಜನ ಸತ್ತಿದ್ದಾರೆ, ಸರ್ಕಾರದ ನೆಗ್ಲಿಜೆನ್ಸ್ ಇದೆ
ಹೀಗಾಗಿ ಸ್ಥಳಕ್ಕೇ ಹೋಗಿ ಪರಿಶೀಲಿಸುವೆ. ಅಧಿವೇಶನದಲ್ಲಿ ಸ್ಫೋಟದ ವಿಚಾರ ಪ್ರಸ್ತಾಪಿಸುವೆ.  ಇದು ಜಂಟಿ ಅಧಿವೇಶನ. ಇಲ್ಲಿ ಹೆಚ್ಚು ಚರ್ಚೆಗೆ ಅವಕಾಶವಿದೆ ಎಂದು ಸಿದ್ದರಾಮಯ್ಯ ಹೇಳಿದರು. 

ಸಭಾಪತಿ ಆಯ್ಕೆ ವಿಚಾರ :  ಜೆ ಡಿ ಎಸ್ ಸೆಕ್ಯುಲರ್ ಬಣ್ಣ ಬಯಲಾಗಲಿದೆ.  ಜೆ ಡಿ ಎಸ್ ಸೆಕ್ಯುಲರ್ ಬಣ್ಣ ಬೇಗನೆ ತಿಳಿಯುತ್ತದೆ ಎಂದು ಅಸಮಾಧಾನ ಹೊರಹಾಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯತ್ನಾಳ್ ಭಾಷಣಕ್ಕೆ ಟಾಂಗ್ ಕೊಡಲು ಹೋಗಿ ಯಡವಟ್ಟು ಮಾಡಿಕೊಂಡ ಸಚಿವ ಸಂತೋಷ್ ಲಾಡ್!
ಸವಣೂರು ಘಟನೆ ಕಾಂಗ್ರೆಸ್ ಓಲೈಕೆ ರಾಜಕಾರಣದ ಪ್ರತಿಬಿಂಬ, ರಾಜ್ಯದಲ್ಲಿ ಪೊಲೀಸರ ನಿಷ್ಕ್ರಿಯತೆ ಬಗ್ಗೆಯೂ ಸಂಸದ ಬೊಮ್ಮಾಯಿ ಕಿಡಿ