ಸಿದ್ದರಾಮಯ್ಯ ನಿವಾಸದಲ್ಲಿ ತಡರಾತ್ರಿ ಸಭೆ : ಮಹತ್ವದ ಚರ್ಚೆ

Published : Nov 17, 2018, 09:03 AM IST
ಸಿದ್ದರಾಮಯ್ಯ ನಿವಾಸದಲ್ಲಿ ತಡರಾತ್ರಿ ಸಭೆ : ಮಹತ್ವದ ಚರ್ಚೆ

ಸಾರಾಂಶ

ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಕಾಂಗ್ರೆಸ್ ಮುಖಂಡರು ಸೇರಿ ಸಭೆಯೊಂದನ್ನು ನಡೆಸಿದ್ದಾರೆ. ಈ ಸಭೆಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಯಾವುದೇ ನಿರ್ಣಯ ಕೈಗೊಳ್ಳದೇ ಸಭೆ ಬರ್ಖಾಸ್ತಾಗಿದೆ.

ಬೆಂಗಳೂರು :  ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ- ಮಂಡಳಿ ನೇಮಕಾತಿಯನ್ನು ಬೆಳ​ಗಾವಿ ಅಧಿ​ವೇ​ಶ​ನದ ನಂತರ ಮಾಡ​ಬೇಕೇ ಅಥವಾ ಅದಕ್ಕೂ ಮುನ್ನವೇ ಪೂರ್ಣ​ಗೊ​ಳಿ​ಸ​ಬೇಕೇ ಎಂಬ ಜಿಜ್ಞಾಸೆ ಕಾಂಗ್ರೆಸ್‌ ನಾಯ​ಕ​ರನ್ನು ಕಾಡಿ​ದೆ. ಆದರೆ ಯಾವುದೇ ನಿರ್ಣಯ ಕೈಗೊಳ್ಳದೇ ಸಭೆ ಬರ್ಖಾಸ್ತಾಗಿದೆ.

ಸಂಪುಟ ವಿಸ್ತ​ರಣೆ ಯಾವಾಗ ನಡೆ​ಸ​ಬೇಕು ಎಂಬ ಬಗ್ಗೆ ನಿರ್ಧ​ರಿ​ಸಲು ಶಾಸ​ಕಾಂಗ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌, ಉಪ ಮುಖ್ಯ​ಮಂತ್ರಿ ಪರ​ಮೇ​ಶ್ವರ್‌ ಹಾಗೂ ಜಲ​ಸಂಪ​ನ್ಮೂಲ ಸಚಿವ ಡಿ.ಕೆ. ಶಿವ​ಕು​ಮಾರ್‌ ಶುಕ್ರ​ವಾರ ತಡ​ರಾ​ತ್ರಿ​ವ​ರೆಗೂ ಸಭೆ ನಡೆ​ಸಿ​ದರು.

ಉಪ ಚುನಾ​ವಣೆ ನಂತರ ಸಂಪುಟ ವಿಸ್ತ​ರಣೆ ನಡೆ​ಸುವ ಭರ​ವಸೆ ನೀಡಿ​ರುವು​ದ​ರಿಂದ ಈ ಮಾಸಾಂತ್ಯ​ದೊ​ಳಗೆ ಸಂಪುಟ ವಿಸ್ತ​ರಣೆ ನಡೆ​ಸು​ವುದು ಸೂಕ್ತ ಎಂದು ಕೆಲ ನಾಯ​ಕರು ಸಭೆ​ಯಲ್ಲಿ ಅಭಿ​ಪ್ರಾಯ ಮಂಡಿ​ಸಿ​ದರು ಎನ್ನ​ಲಾ​ಗಿದೆ. ಆದರೆ, ಸಂಪುಟ ವಿಸ್ತ​ರ​ಣೆ​ಯನ್ನು ಮಾಡಿ​ದರೆ, ಅಸ​ಮಾ​ಧಾ​ನ​ಗೊಂಡ​ವರು ತಮ್ಮ ಅತೃಪ್ತಿ ಹೊರ ಹಾಕಲು ಡಿಸೆಂಬರ್‌ ಎರ​ಡನೇ ವಾರ​ದಲ್ಲಿ ನಡೆ​ಯ​ಲಿ​ರುವ ಬೆಳ​ಗಾವಿ ಅಧಿ​ವೇ​ಶ​ನ​ವನ್ನು ವೇದಿ​ಕೆ​ಯಾಗಿ ಬಳ​ಸಿ​ಕೊಂಡು ಪಕ್ಷ ಹಾಗೂ ಸರ್ಕಾ​ರಕ್ಕೆ ಮುಜು​ಗರ ಉಂಟು ಮಾಡ​ಬ​ಹುದು. ಹೀಗಾಗಿ, ಬೆಳ​ಗಾವಿ ಅಧಿ​ವೇ​ಶನದ ನಂತ​ರವೇ ಸಂಪುಟ ವಿಸ್ತ​ರಣೆ ಬಗ್ಗೆ ತೀರ್ಮಾನ ಕೈಗೊ​ಳ್ಳು​ವುದು ಉತ್ತಮ ಎಂದು ಮತ್ತೆ ಕೆಲ ನಾಯ​ಕರು ವಾದಿ​ಸಿ​ದರು ಎನ್ನ​ಲಾ​ಗಿ​ದೆ.

ಸುದೀರ್ಘ ಚರ್ಚೆಯ ನಂತ​ರವೂ ಯಾವುದೇ ತೀರ್ಮಾನ ಕೈಗೊ​ಳ್ಳಲು ಸಾಧ್ಯ​ವಾ​ಗದ ಹಿನ್ನೆ​ಲೆ​ಯಲ್ಲಿ ಪಕ್ಷದ ಇತರ ಎಲ್ಲಾ ಹಿರಿಯ ನಾಯ​ಕರ ಅಭಿ​ಪ್ರಾಯ ಪಡೆದು ಈ ಬಗ್ಗೆ ತೀರ್ಮಾನ ಕೈಗೊ​ಳ್ಳೋಣ ಎಂದು ನಿರ್ಧ​ರಿಸಿ ಸಭೆ ಬರ್ಖಾಸ್‌್ತ ಮಾಡ​ಲಾ​ಯಿತು ಎಂದು ಮೂಲ​ಗಳು ತಿಳಿ​ಸಿ​ವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Delhi Liquor Scam: ಕೇಜ್ರಿವಾಲ್ ಮೊಸಳೆ ಕಣ್ಣೀರು ಸುರಿಸುವುದು ಬೇಡ, ಸತ್ಯ ಹೊರಬರಲಿದೆ - ಸಿಎಂ ರೇಖಾ ಗುಪ್ತಾ ಕಿಡಿ
Kejriwal Case: ಬಿಜೆಪಿಯ ಆಟ ನಡೆಯಲ್ಲ ಅಂತ ಕೇಜ್ರಿವಾಲ್ ಪ್ರೂವ್ ಮಾಡಿದ್ದಾರೆ: ಆದಿತ್ಯ ಠಾಕ್ರೆ ಮೆಚ್ಚುಗೆ