ಚಿಕ್ಕಮಗಳೂರು: ಚುನಾವಣಾ ಬಹಿಷ್ಕಾರಕ್ಕೆ ಮುಂದಾದ ಮಡಬೂರು ಗ್ರಾಮಸ್ಥರು

Published : Apr 18, 2024, 09:04 PM ISTUpdated : Apr 18, 2024, 09:05 PM IST
ಚಿಕ್ಕಮಗಳೂರು: ಚುನಾವಣಾ ಬಹಿಷ್ಕಾರಕ್ಕೆ ಮುಂದಾದ ಮಡಬೂರು ಗ್ರಾಮಸ್ಥರು

ಸಾರಾಂಶ

ಗ್ರಾಮಕ್ಕೆ ರಸ್ತೆ, ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯ ಕಲ್ಪಸದ ನಿಮಗೆ ಓಟು ಯಾಕೆ ಬೇಕು? ಲೋಕಸಭಾ ಚುನಾವಣೆ ಮತದಾನಕ್ಕೆ ಬಹಿಷ್ಕಾರಕ್ಕೆ ಮುಂದಾದ ಚಿಕ್ಕಮಗಳೂರು ಜಿಲ್ಲೆಯ ಮಡಬೂರು ಗ್ರಾಮಸ್ಥರು

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಏ.18): ಮೊದಲ ಹಂತ ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇವೆ. ಚುನಾವಣಾ ರಣಕಣದಲ್ಲಿ ಅಭ್ಯರ್ಥಿಗಳು ಮತದಾರರನ್ನು ಸೆಳೆಯುಲು ಕಸರತ್ತು ಆರಂಭಿಸಿದ್ದಾರೆ. ಗ್ರಾಮಾಂತರ ಪ್ರದೇಶದ ಮತಬೇಟೆಗೆ ತೆರಳುವ ರಾಜಕೀಯ ಪಕ್ಷಗಳಿಗೆ ಇದೀಗ  ಬಹಿಷ್ಕಾರದ ಬಿಸಿ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಲೆನಾಡಿನಲ್ಲಿ ಬಹಿಷ್ಕಾರದ ಕೂಗು ಜೋರಾಗಿದ್ದು  ಮೂಲಭೂತ ಸೌಕರ್ಯಗಳಿಗಾಗಿ ಆಗ್ರಹಿಸಿ ಚುನಾವಣೆ ಬಹಿಷ್ಕಾರವನ್ನು ಗ್ರಾಮಸ್ಥರು ಮಾಡಿದ್ದಾರೆ.

ಒಂದೊಳ್ಳೆ ರಸ್ತೆ ಮಾಡದಿದ್ರೆ ಮತದಾನ ಮಾಡಿ ಏನು ಪ್ರಯೋಜನ? ಚುನಾವಣೆ‌‌ ಬಹಿಷ್ಕಾರಕ್ಕೆ ಯಲುವಗುಳಿ ಗ್ರಾಮಸ್ಥರು!

ಚುನಾವಣೆಗೆ 8 ದಿನಗಳಷ್ಟೇ ಬಾಕಿ 

ಮೊದಲ ಹಂತದ ಲೋಕಸಭೆ ಚುನಾವಣೆಗೆ ಇನ್ನು 8 ದಿನಗಳಷ್ಟೇ ಬಾಕಿ ಇದೆ. ಚಿಕ್ಕಮಗಳೂರು ಉಡುಪಿ ಲೋಕಸಭಾ ಕ್ಷೇತ್ರ(Chikkamagaluru udupi Lok sabha)ದಲ್ಲಿ ಪ್ರಚಾರವೂ ಬಿರುಸು ಪಡೆದುಕೊಂಡಿದೆ. ಇನ್ನೊಂದಡೆ ಮತದಾನದ ಮಹತ್ವವನ್ನು ಜನರಲ್ಲಿ  ಜಾಗೃತಿ ಮೂಡಿಸಲು  ಆಯೋಗ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದ್ರೆ ಚಿಕ್ಕಮಗಳೂರಿನ ಕೆಲ ಭಾಗದಲ್ಲಿ ಚುನಾವಣೆಯ ಬಹಿಷ್ಕಾರದ ಪ್ರಕರಣಗಳು ಜಾಸ್ತಿ ಆಗುತ್ತಿದೆ. 

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮಡಬೂರು ಗ್ರಾಮದಲ್ಲಿ  ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಮಾಡಿದ್ದಾರೆ.  ಗ್ರಾಮಸ್ಥರು ಈ ಬಾರೀ ಲೋಕಸಭೆ ಚುನಾವಣೆಯ ಮತದಾನದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ. ಗ್ರಾಮದ ಮುಖ್ಯದ್ವಾರ ಬಾಗಿಲಿನಲ್ಲಿ ಈ ಬಾರೀ ಮತದಾನ ಬಹಿಷ್ಕಾರ ಎಂದೂ ಬೋರ್ಡ್, ಬ್ಯಾನರ್  ಹಾಕಿದ್ದಾರೆ.ಮಡಬೂರು ಹೋಬಳಿ ವ್ಯಾಪ್ತಿಯಲ್ಲಿ ಕೆಸಕ್ಕಿ, ಹೊಸಮನೆ, ಬಟ್ಟೆಕೊಡಿಗೆ, ಕುಪ್ಪೂರು ಗ್ರಾಮದ ವ್ಯಾಪ್ತಿಯ ಜನರು ಮತದಾನದಿಂದ ದೂರ ಉಳಿಯುವ ಎಚ್ಚರಿಕೆಯನ್ನು ನೀಡಿದ್ದಾರೆ. ಗ್ರಾಮದಲ್ಲಿ 60 ಕ್ಕೂ ಹೆಚ್ಚು ಮನೆಗಳಿದ್ದು 600ಕ್ಕೂ ಹೆಚ್ಚುಮತದಾರರು ಇದ್ದಾರೆ. 

ಮೂಲಭೂತ ಸೌಕರ್ಯಗಳಿಗಾಗಿ ಆಗ್ರಹಿಸಿ ಬಹಿಷ್ಕಾರ : 

ಈ ಗ್ರಾಮಗಳಿಗೆ  ಹೋಗಲು ಸರಿಯಾದ ರಸ್ತೆಯಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮೂಲಭೂತ ಸೌಕರ್ಯಗಳಿಂದಾ ಈ ಗ್ರಾಮಗಳು ಹಲವಾರು ವರ್ಷಗಳಿಂದಾ ವಂಚಿತ ಆಗಿದ್ದು ಹಲವಾರು ಬಾರೀ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ.ಈ ಕಾರಣಕ್ಕಾಗಿ ಲೋಕಸಭಾ ಚುನಾವಣೆಯ ಮತದಾನವನ್ನು ಗ್ರಾಮಸ್ಥರು ಬಹಿಷ್ಕಾರ ಮಾಡಿದ್ದಾರೆ. ಎನ್ ಆರ್ ಪುರ ತಾಲೂಕ್ ಕೇಂದ್ರದಿಂದಾ ಕೇವಲ 15 ಕೀ.ಮೀ  ದೂರದಲ್ಲಿರುವ ಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಕೂಡ ಇಲ್ಲ. ಮಳೆಗಾಲದಲ್ಲಿ ಜನರು ಮತ್ತು ವಾಹನ ಸಂಚಾರ ಓಡಾಡ ತುಂಬಾ  ಕಷ್ಟದಾಯಕವಾಗಿದೆ. ಜೊತೆಗೆ  ಮಡಬೂರು ಹೋಬಳಿ ವ್ಯಾಪ್ತಿಯಲ್ಲಿ ಕೆಸಕ್ಕಿ, ಹೊಸಮನೆ, ಬಟ್ಟೆಕೊಡಿಗೆ, ಕುಪ್ಪೂರು ಗ್ರಾಮದ ವ್ಯಾಪ್ತಿಯಲ್ಲಿ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾಮಸ್ಥರು ಮತಧಾನ ಬಹಿಷ್ಕಾರ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 

ವಿಧಾನಸಭಾ ಚುನಾವಣೆ ಹಿನ್ನೆಲೆ; ಒಳ ಮೀಸಲಾತಿ ಹೊಡೆತ ನೀಡಲು ಸಜ್ಜಾದ ಲಂಬಾಣಿ ಸಮುದಾಯ!

ಒಟ್ಟಿನಲ್ಲಿ ಅದೇನೆಯಿರಲಿ ಜನಪ್ರತಿನಿದಿಗಳು ಕೇವಲ ಚುನಾವಣೆಗಳು ಬಂದಾಗ ಮತದಾರರಿಗೆ ಬಣ್ಣದ ಬಣ್ಣದ ಆಶ್ವಾಸನೆಗಳನ್ನು ನೀಡಿವ ಬದಲು ಅದನ್ನು ಕಾರ್ಯಗತ ಮಾಡುವುದರ ಮೂಲಕ ಜನರ ಸಮಸ್ಸೆಯನ್ನು ಬಗೆಹರಿಸಿಬೇಕು ಅದನ್ನು ಬಿಟ್ಡು ಭರವಸೆಗಳನ್ನು ನೀಡಿ ಮತ್ತೆ ಚುನಾವಣೆ ಬಂದಾಗ ಜನರಿಗೆ ಅದೇ ಭರವಸೆ ನೀಡಲು ಬಂದರೆ ಈ ರೀತಿಯಾಗಿ ಬಹಿಷ್ಕಾರದ ಬಿಸಿ ಎದುರುಸಿಬೇಕಾಗುತ್ತೇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿ.ಕೆ.ಶಿವಕುಮಾರ್ 30 ದಿನಗಳ ಮೌನ ತಪ್ಪಿಸ್ಸಿಗೆ ಒಲಿಯುತ್ತಾ ಪಟ್ಟಾಭಿಷೇಕ; ಜನವರಿ 9ಕ್ಕೆ ಮುಹೂರ್ತ!
ರಾಜ್ಯದಲ್ಲಿ 'ನಾಯಕತ್ವ ಬದಲಾವಣೆ ಇಲ್ಲ'- ಯತೀಂದ್ರ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಅಸಮಾಧಾನ!