ಯಡಿಯೂರಪ್ಪನವರ ರಾಜಕಾರಣದ ಜೊತೆಗಾರ ಕೊರೋನಾದಿಂದ ನಿಧನ

Published : Sep 25, 2020, 05:35 PM ISTUpdated : Sep 25, 2020, 05:39 PM IST
ಯಡಿಯೂರಪ್ಪನವರ ರಾಜಕಾರಣದ ಜೊತೆಗಾರ ಕೊರೋನಾದಿಂದ ನಿಧನ

ಸಾರಾಂಶ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ರಾಜಕಾರಣದ ಆರಂಭದ ಜೊತೆಗಾರ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಶಿವಮೊಗ್ಗ, (ಸೆ.25): ಯಡಿಯೂರಪ್ಪನವರ ರಾಜಕಾರಣದ ಆರಂಭದ ದಿನದಿಂದಲೂ ಜೊತೆಗಿದ್ದ ದಾನೇರ್ ರುದ್ರಪ್ಪ ಅವರು ನಿಧನರಾಗಿದ್ದಾರೆ.

ಕೊರೋನಾ ಸೋಂಕಿನಿಂದ ಬಳಲುತ್ತಿದ್ದ  ದಾನೇರ್ ರುದ್ರಪ್ಪ ಚಿಕಿತ್ಸೆ ಫಲಕಾರಿಯಾಗದೆ ಇಂದು (ಶುಕ್ರವಾರ) ಕೊನೆಯುಸೆರೆಳೆದಿದ್ದಾರೆ.

ಮಹಾಮಾರಿ ಕೊರೋನಾಗೆ ಬಿಪಿ, ಶುಗರ್‌ ರೋಗಿಗಳೇ ಅಧಿಕ ಬಲಿ!
 
ರಾಜಕಾರಣದ ಆರಂಭದ ದಿನದಿಂದಲೂ ಯಡಿಯೂರಪ್ಪನವರ ಜೊತೆಗಿದ್ದ ದಾನೇರ್ ರುದ್ರಪ್ಪನವರು ತೊಗರ್ಸಿ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದರು.

 ಅಲ್ಲದೇ, ಶಿಕಾರಿಪುರ ತಾಲ್ಲೂಕು ಬಿಜೆಪಿ ಅಧ್ಯಕ್ಷರಾಗಿ ಹಾಗೂ ಪಟ್ಟಣದ ವಿಶ್ವಹಿಂದೂ ಪರಿಷತ್ ಆಶ್ರಯದಲ್ಲಿ ನಡೆಯಿತ್ತಿರುವ ಸೇವಾ ವಿಕಾಸ ಶಾಲೆಯ ಅಧ್ಯಕ್ಷರಾಗಿ ದಾನೇರ್ ರುದ್ರಪ್ಪನವರು ಸೇವೆ ಸಲ್ಲಿಸಿದ್ದರು.

ಬಿ.ಎಸ್.ಯಡಿಯೂರಪ್ಪನವರ ರಾಜಕಾರಣದ ಆರಂಭದ ದಿನದಿಂದಲೂ ಯಡಿಯೂರಪ್ಪನವರ ಜೊತೆಗಿದ್ದ ದಾನೇರ್ ರುದ್ರಪ್ಪ ನವರು ಕೋವಿಡ್ ಸೋಂಕಿಗೆ ತುತ್ತಾಗಿ,...

Posted by Raghavendra B Y Vijayendra on Friday, September 25, 2020

ಮೊನ್ನೇ ಅಷ್ಟೇ ಬಿಜೆಪಿ ರಾಜ್ಯಸಭಾ ಸದಸ್ಯರಾದ ಅಶೋಕ್ ಗಸ್ತಿ, ತದನಂತ ಕೇಂದ್ರ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ ಹಾಗೂ ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ಇದೇ ಕೊರೋನಾ ಮಹಾಮಾರಿ ಬಲಿ ಪಡೆದುಕೊಂಡಿದೆ. ಇದೀಗ ಬಿಎಸ್‌ವೈ ಅವರ ಜೊತೆಗಾರ ದಾನೇರ್ ರುದ್ರಪ್ಪ ಸಹ ಕೊರೋನಾಗೆ ಉಸಿರು ಚೆಲ್ಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್
ಜನರೊಂದಿಗೆ ಸಂಪರ್ಕ ಸಾಧಿಸಿ, ಸೋಶಿಯಲ್ ಮೀಡಿಯಾ ಬಳಸಿ: ಸಂಸದರಿಗೆ ಮೋದಿ ಕರೆ