ಬಿಜೆಪಿಯಲ್ಲಿ ಯತ್ನಾಳ್‌ ಉಚ್ಚಾಟನೆಯ ಕೂಗು ಜೋರು..!

Published : Mar 16, 2021, 02:14 PM ISTUpdated : Mar 16, 2021, 03:21 PM IST
ಬಿಜೆಪಿಯಲ್ಲಿ ಯತ್ನಾಳ್‌ ಉಚ್ಚಾಟನೆಯ ಕೂಗು ಜೋರು..!

ಸಾರಾಂಶ

ಒಂದೇ ಪಕ್ಷದ ನಾಯಕರ ನಡುವೆ ಮುಸುಕಿನ ಗುದ್ದಾಟ ಶುರುವಾಗಿದ್ದು, ಸಿಎಂ ಬಿಎಸ್ ಯಡಿಯೂಪ್ಪ ಅವರ ಆಪ್ತ ಶಾಸಕರೊಬ್ಬರು ಯತ್ನಾಳ್‌ಗೆ ಸವಾಲು ಹಾಕಿದ್ದಾರೆ.

ಬೆಂಗಳೂರು, (ಮಾ.16): ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ರನ್ನ ಮೊದಲು ಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಸಿಎಂ ಬಿಎಸ್‌ವೈ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್​​ಗೆ ನಾನು ಸವಾಲ್ ಹಾಕ್ತೇನೆ. ನಾಟಕ ಮಾಡೋದು ಬಿಟ್ಟು, ನಿಮಗೆ ತಾಖತ್ ಇದ್ದರೆ ಸಿಎಂ ಕುಟುಂಬದ ಭ್ರಷ್ಟಾಚಾರದ ಆರೋಪ ದಾಖಲೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದ್ದಾರೆ.

ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಬಿಗ್ ಶಾಕ್ ಕೊಟ್ಟ ಹೈಕಮಾಂಡ್

ಸಿಎಂ ಹಾಗೂ ಅವರ ಕುಟುಂಬದ ವಿರುದ್ಧ ಆರೋಪ ಮಾಡಲು ನಿಮ್ಮ ಬಳಿ ಏನು ದಾಖಲೆ ಇವೆ. ವಾಜಪೇಯಿ ಸಂಪುಟದಲ್ಲಿ ಸಚಿವನಾಗಿದ್ದೆ ಅನ್ನೋದೇ ನಿಮ್ಮ ಬಂಡವಾಳ. ಈ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ ​ಜೋಶಿ, ಸಚಿವರಾದ ಜಗದೀಶ್​ ಶೆಟ್ಟರ್ ವಿರುದ್ಧ ಮಾತಾಡಿದ್ರಿ. ಈಗ ಸಿಎಂ ಯಡಿಯೂರಪ್ಪ ನಿಮಗೆ ಟಾರ್ಗೆಟ್ಟಾ? ಎಂದು ಪ್ರಶ್ನಿಸಿದರು.

ವಿಜಯೇಂದ್ರ ವಿರುದ್ಧ ಮಾತಾಡೋದು ಒಂದೇ ಯಡಿಯೂರಪ್ಪ ವಿರುದ್ಧ ಮಾತಾಡೋದು ಒಂದೇ. ವಿಜಯೇಂದ್ರ ಏನು ಭ್ರಷ್ಟಾಚಾರ ಮಾಡಿದ್ದಾರೆ? ವಿಜಯೇಂದ್ರ ಏನು ಹಸ್ತಕ್ಷೇಪ ಮಾಡಿದ್ದಾರೆ? ಇದನ್ನ ಪಕ್ಷ ಸಹಿಸಲ್ಲ, ಶಾಸಕಾಂಗ ಪಕ್ಷದ ಸಭೆ ಕರೆದು ಯತ್ನಾಳ್ ಉಚ್ಚಾಟನೆ ಮಾಡುವಂತೆ ಯಡಿಯೂರಪ್ಪಗೆ ಒತ್ತಾಯಿಸುವೆ. ಯತ್ನಾಳ್ ನಿಷ್ಠಾವಂತ ಕಾರ್ಯಕರ್ತ ಆಗಿದ್ದರೆ ಬೀದಿಲೀ ಮಾತಾಡ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ