ನಾಟಕ ಮಾಡಿದ್ದಿದ್ರೆ ನಾನು ಸಿಎಂ, ಚರಂತಿಮಠ ಮಂತ್ರಿ ಆಗಿರ್ತಿದ್ವಿ: ಯತ್ನಾ​ಳ

Published : May 18, 2022, 09:50 AM IST
ನಾಟಕ ಮಾಡಿದ್ದಿದ್ರೆ ನಾನು ಸಿಎಂ, ಚರಂತಿಮಠ ಮಂತ್ರಿ ಆಗಿರ್ತಿದ್ವಿ: ಯತ್ನಾ​ಳ

ಸಾರಾಂಶ

*   ರಾಜ​ಕಾ​ರ​ಣ​ದಲ್ಲಿ ಪ್ರಾಮಾ​ಣಿ​ಕ​ರಿಗೆ ಬೆಲೆ ಇಲ್ಲ *  ರಾಜಕಾರಣದಲ್ಲಿ ಕಳ್ಳರಿಗೆ, ದರೋಡೆಕೋರರಿಗೆ, ಭ್ರಷ್ಟರಿಗೆ ಬೆಲೆ ಇದೆ. ಇವರಿಂದ ರಾಜ್ಯವೇ ನಾಶವಾಗುತ್ತದೆ *  ನಾವು ಪ್ರಾಮಾಣಿಕವಾಗಿ, ನೇರವಾಗಿ ಮಾತನಾಡುವ ಮೂಲಕ ಯಾವುದೇ ಸ್ಥಾನಮಾನ ಸಿಗದಂತಾಗಿದೆ 

ಬಾಗಲಕೋಟೆ(ಮೇ.18): ರಾಜಕಾರಣದಲ್ಲಿ ಪ್ರಾಮಾಣಿಕರಿಗೆ ಬೆಲೆ ಇಲ್ಲದಂತಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಜಿಲ್ಲೆಯ ಬೇವೂರ ಗ್ರಾಮದಲ್ಲಿ ನಡೆದ ದುಗ್ಗಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜಕಾರಣದಲ್ಲಿ ಕಳ್ಳರಿಗೆ, ದರೋಡೆಕೋರರಿಗೆ, ಭ್ರಷ್ಟರಿಗೆ ಬೆಲೆ ಇದೆ. ಇವರಿಂದ ರಾಜ್ಯವೇ ನಾಶವಾಗುತ್ತದೆ ಎಂದ ಅವರು, ನಾವು ಪ್ರಾಮಾಣಿಕವಾಗಿ, ನೇರವಾಗಿ ಮಾತನಾಡುವ ಮೂಲಕ ಯಾವುದೇ ಸ್ಥಾನಮಾನ ಸಿಗದಂತಾಗಿದೆ. ಚರಂತಿಮಠರು ಮತ್ತೆ ನಾವು ನಾಟಕ ಮಾಡಿ ರಾಜಕಾರಣ ಮಾಡಿದ್ದರೇ ನಾನು ಮುಖ್ಯಮಂತ್ರಿಯಾಗುತ್ತಿದ್ದೆ. ಚರಂತಿಮಠರು ಮಂತ್ರಿಯಾಗುತ್ತಿದ್ದರು ಎಂದು ತಿಳಿಸಿದರು.

ಶಾಸಕ ಯತ್ನಾಳ್‌ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ: ಸಚಿವ ವಿ.ಸೋಮಣ್ಣ

ಕೆಲವು ರಾಜಕಾರಣಿಗಳಿಗೆ ಅಪ್ಪಾಜಿ ಎಂದು ಹೇಳಿಕೊಳ್ಳುತ್ತಾ ಮಂತ್ರಿ ಸ್ಥಾನ ಪಡೆಯುತ್ತಾರೆ. ನಾನು ಯಾರಿಗೂ ಅಪ್ಪಾಜಿ ಅಂತಾ ಅನ್ನಲ್ಲ. ತುಮಕೂರಿನ ಶ್ರೀಗಳಿಗೆ, ಸಿದ್ದೇಶ್ವರ ಶ್ರೀಗಳಿಗೆ ಮಾತ್ರ ಅಪ್ಪಾಜಿ ಎಂದು ಹೇಳುತ್ತೇವೆ ಎಂದರು.
ನಾನು ಎಲ್ಲ ಸಮಾಜಕ್ಕೂ ನ್ಯಾಯ ಸಿಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಸ್ವಾರ್ಥಕ್ಕಾಗಿ ರಾಜಕಾರಣ ಮಾಡುವುದಿಲ್ಲ. ವಿಧಾನಸಭೆ ಒಳಗೆ ಹಾಗೂ ಹೊರಗೆ ಇದ್ದರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು. ಬಾಗಲಕೋಟೆ ಶಾಸಕ ಚರಂತಿಮಠರು ದಕ್ಷ ಹಾಗೂ ಪ್ರಾಮಾಣಿಕರು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಅವರನ್ನು ಈ ಕ್ಷೇತ್ರ ಕಳೆದುಕೊಳ್ಳಬೇಡಿ ಎಂದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂದಿನಿಂದ ಕಾವೇರಲಿದೆ ಉತ್ತರ ಕರ್ನಾಟಕದ ಚರ್ಚೆ-3 ದಿನ ವಿಧಾನಮಂಡಲದಲ್ಲಿ ಈ ಬಗ್ಗೆ ಕಲಾಪ
ಅಧಿವೇಶನದಲ್ಲಿ ನಾವು ರಾಜ್ಯದ ರೈತರಿಗೋಸ್ಕರ ಹೋರಾಡುತ್ತೇವೆ: ಆರ್‌.ಅಶೋಕ್‌