ದಲಿತರು, ಅಲ್ಪಸಂಖ್ಯಾತರ ಕಡೆಗಣನೆ: ಬಿಜೆಪಿ, ಜೆಡಿಎಸ್‌ ತೊರೆದು ಕಾಂಗ್ರೆಸ್ ಸೇರ್ಪಡೆ

Published : Oct 15, 2023, 10:44 AM IST
ದಲಿತರು, ಅಲ್ಪಸಂಖ್ಯಾತರ ಕಡೆಗಣನೆ: ಬಿಜೆಪಿ, ಜೆಡಿಎಸ್‌ ತೊರೆದು ಕಾಂಗ್ರೆಸ್ ಸೇರ್ಪಡೆ

ಸಾರಾಂಶ

ಅಂಬೇಡ್ಕರ್ ಚಿಂತೆನೆಗಳನ್ನು ಕರ್ನಾಟಕದಲ್ಲಿ ದಲಿತ ಚಳವಳಿ ಪ್ರಾರಂಭವಾದಾಗಿನಿಂದಲೂ ಅನುಸರಿಸಿಕೊಂಡು ಬರುತ್ತಿದೆ. ಈಗ ನಮ್ಮ ಸಂವಿಧಾನ ಅಪಾಯದಲ್ಲಿದೆ. ಅದರ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದ ರಾಜು ಆಲಗೂರ

ವಿಜಯಪುರ(ಅ.15):  ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ ದೇಶ ಕಂಡ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಅವರು ಸರ್ವ ಜನಾಂಗದ ಏಳಿಗೆಗೆ ಶ್ರಮಿಸಿದ ಮಹಾನುಭಾವರು ಎಂದು ವಿ.ಪ ಸದಸ್ಯ ಎಚ್.ಪಿ. ಸುಧಾಮದಾಸ ಹೇಳಿದರು.

ಶುಕ್ರವಾರ ನಡೆದ ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ದೇಶದ ಜನತೆಯ ಸಂಕಷ್ಟ ದೂರ ಮಾಡಲು ಶ್ರಮಿಸಿದರು ಎಂದು ಹೇಳಿದರು. ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರ ಮಾತನಾಡಿ, ಅಂಬೇಡ್ಕರ್ ಚಿಂತೆನೆಗಳನ್ನು ಕರ್ನಾಟಕದಲ್ಲಿ ದಲಿತ ಚಳವಳಿ ಪ್ರಾರಂಭವಾದಾಗಿನಿಂದಲೂ ಅನುಸರಿಸಿಕೊಂಡು ಬರುತ್ತಿದೆ. ಈಗ ನಮ್ಮ ಸಂವಿಧಾನ ಅಪಾಯದಲ್ಲಿದೆ. ಅದರ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು. 

ರೈತರ ಅನುದಾನಕ್ಕೆ ಸಿದ್ದರಾಮಯ್ಯ ಕತ್ತರಿ: ಜಿ.ಟಿ.ದೇವೆಗೌಡ ಆರೋಪ

ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಮುಂದುವರೆದ ಉನ್ನತ ವರ್ಗಗಳಿಗೆ ಮೀಸಲಾತಿ ಸಂವಿಧಾನಕ್ಕೆ ವಿರುದ್ಧ. ಕೇಂದ್ರ ಬಿಜೆಪಿ ಸರ್ಕಾರ ದಲಿತರು, ಅಲ್ಪಸಂಖ್ಯಾತರ ಕಡೆಗಣನೆ ಮಾಡಿದೆ ಎಂದರು.

ರಾಜ್ಯ ಪ್ರಚಾರ ಸಮಿತಿ ಉಪಾಧ್ಯಕ್ಷ, ಕೆಪಿಸಿಸಿ ಶ್ರೀನಿವಾಸ ಹೆಣ್ಣೂರ, ನಾಗರಾಜ ಲಂಬು, ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ (ಗಣಿಯಾರ) ಶರಣು ಸಿಂಧೆ, ಅನಿಲ ಕೊಡತೆ, ರಾಜು ತೊರವಿ, ಲಕ್ಕಪ್ಪ ಬಡಿಗೇರ, ಪರಶುರಾಮ ದಿಂಡವಾರ, ಪ್ರಕಾಶ ಗುಡಿಮನಿ, ವಾಯ್.ಎಸ್. ಮ್ಯಾಗೇರಿ, ಮಲ್ಲೇಶಿ ಸಜ್ಜನ, ಮರೀಶ ನಾಗಣ್ಣವರ, ರವೀಂದ್ರ ಎ.ಶ್ರೀಧರ ಪೂಜಾರಿ, ಅಡಿವೆಪ್ಪ ಸಾಲಗಲ್ಲ, ರಾಹುಲ ಕುಬಕಡ್ಡಿ, ಚಂದ್ರಕಾಂತ ಸಿಂಗೆ, ರಾಜಶೇಖರ ಕುಚಬಾಳ, ಮುತ್ತಪ್ಪ ಚಮಲಾಪುರ, ಅಣ್ಣಾರಾಯ ಪೂಜಾರಿ, ದಶರತ ಸಿಂಗೆ, ಜಿ.ಎಸ್. ತಳವಾರ, ಯಶೋಧಾ ಮೇಲಿನಕೇರಿ, ರೇಣುಕಾ ಮಾದರ, ಜಯಶ್ರೀ ಡಿಂಗಿ, ಮಲ್ಲಮ್ಮ ಚಲವಾದಿ, ದೇವಮ್ಮ ಬಂಡಿವಡ್ಡರ, ಶಿವಸೀಲಾ ಚಲವಾದಿ, ಸುಭದ್ರಾ ಮೇಲಿನಮನಿ, ಪುಷ್ಪಾ ಮಣೂರ, ಸುಶೀಲಾ ಹರಿಜನ ಮತ್ತಿತರರು ಇದ್ದರು.

ಕಾಂಗ್ರೆಸ್ ಸೇರ್ಪಡೆ

ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪ.ಪಂ 8 ಸದಸ್ಯರು ಬಿಜೆಪಿ ತೊರೆದು ಶಿವನಗೌಡ ಗುಜಗೊಂಡ ನೇತೃತ್ವದಲ್ಲಿ ಹಾಗೂ ಇಂಡಿ ತಾಲೂಕಿನ ಮಹಮ್ಮದ ದೇವರ ಮತ್ತು ಪುಂಡಲಿತ ಆಲಭಗೊಂಡ ನೇತೃತ್ವದಲ್ಲಿ ಜೆಡಿಎಸ್‌ನ 25 ಜನ, ದೇವರಹಿಪ್ಪರಗಿ ಕ್ಷೇತ್ರದ ಹನಮಂತ ಮಾದರ ನೇತೃತ್ವದಲ್ಲಿ ಬಿಜೆಪಿ ತೊರೆದು ಮಾದರ, ಗಾಣಿಗೇರ, ವಿಶ್ವಕರ್ಮ, ರಡ್ಡಿ, ಗಂಗಾಮತ, ಚಲವಾದಿ,ಲಂಬಾಣಿ ಅಲ್ಪಸಂಖ್ಯಾತ ಸಮುದಾಯದವರು, ಸಿಂದಗಿ, ಆಲಮೇಲ, ಕೊಲ್ಹಾರ, ನಿಡಗುಂದಿ, ಬಬಲೇಶ್ವರ, ತಿಕೋಟಾ, ತಾಳಿಕೋಟೆ, ವಿಜಯಪುರ ತಾಲೂಕಿನ ಸಹಸ್ರಾರು ಜನರು ಎಂ.ಎಲ್.ಸಿ. ಸುಧಾಮದಾಸ, ಮಾಜಿ ಶಾಸಕ ರಾಜು ಆಲಗೂರ, ಶರಣಪ್ಪ ಸುಣಗಾರ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!