ಬಿಜೆಪಿ ಸರ್ಕಾರ ಆಂಜನೇಯ ದೇವರಿಗೆ ಅಪಮಾನ ಮಾಡಿದೆ: ವಿ.ಎಸ್‌. ಉಗ್ರಪ್ಪ

Published : Jan 18, 2023, 08:06 AM ISTUpdated : Jan 18, 2023, 08:07 AM IST
ಬಿಜೆಪಿ ಸರ್ಕಾರ ಆಂಜನೇಯ ದೇವರಿಗೆ  ಅಪಮಾನ ಮಾಡಿದೆ: ವಿ.ಎಸ್‌. ಉಗ್ರಪ್ಪ

ಸಾರಾಂಶ

ಅಂಜನಾದ್ರಿ ಬೆಟ್ಟಅಭಿವೃದ್ಧಿಪಡಿಸದ ಬಿಜೆಪಿ ಸರ್ಕಾರ ಆಂಜನೇಯ ದೇವರು ಹಾಗೂ ಹನುಮನ ಭಕ್ತರಿಗೆ ಅಪಮಾನ ಮಾಡಿದೆ. ಆಂಜನಾದ್ರಿ ಬೆಟ್ಟಅಭಿವೃದ್ಧಿಗೆ ಸರ್ಕಾರ ಬಜೆಟ್‌ನಲ್ಲಿ .100 ಕೋಟಿ ಘೋಷಿಸಿದೆ. ಆದರೆ, ಇದುವರೆಗೆ ನಯಾಪೈಸೆ ಖರ್ಚು ಮಾಡಿಲ್ಲ.ತುಂಗಭದ್ರಾ ಜಲಾಶಯದಲ್ಲಿ 37 ಟಿಎಂಸಿಯಷ್ಟುಹೂಳು ತುಂಬಿದೆ. ಇನ್ನೂ ಸಮನಾಂತರ ಜಲಾಶಯ ನಿರ್ಮಿಸಿಲ್ಲ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ದೂರಿದರು.

ಹೊಸಪೇಟೆ (ಜ.18) : ಅಂಜನಾದ್ರಿ ಬೆಟ್ಟಅಭಿವೃದ್ಧಿಪಡಿಸದ ಬಿಜೆಪಿ ಸರ್ಕಾರ ಆಂಜನೇಯ ದೇವರು ಹಾಗೂ ಹನುಮನ ಭಕ್ತರಿಗೆ ಅಪಮಾನ ಮಾಡಿದೆ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ದೂರಿದರು.

ಕಾಂಗ್ರೆಸ್‌ನ ಪ್ರಜಾಧ್ವನಿ(Prajadhwani) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಆಂಜನಾದ್ರಿ ಬೆಟ್ಟಅಭಿವೃದ್ಧಿ(Anjanadri temple)ಗೆ ಸರ್ಕಾರ ಬಜೆಟ್‌ನಲ್ಲಿ .100 ಕೋಟಿ ಘೋಷಿಸಿದೆ. ಆದರೆ, ಇದುವರೆಗೆ ನಯಾಪೈಸೆ ಖರ್ಚು ಮಾಡಿಲ್ಲ. ತುಂಗಭದ್ರಾ ಜಲಾಶಯದಲ್ಲಿ 37 ಟಿಎಂಸಿಯಷ್ಟುಹೂಳು ತುಂಬಿದೆ. ಇನ್ನೂ ಸಮನಾಂತರ ಜಲಾಶಯ ನಿರ್ಮಿಸಿಲ್ಲ. ಕಂಪ್ಲಿ, ಹೊಸಪೇಟೆ ಭಾಗದಲ್ಲಿ ಸಕ್ಕರೆ ಕಾರ್ಖಾನೆಗಳು ಮುಚ್ಚಿವೆ. .6 ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ 405 ಅಡಿ ಎತ್ತರದ ಧ್ವಜಸ್ತಂಭ ನಿರ್ಮಾಣ ಮಾಡಿದ್ದಾರೆ. ಇದು 40 ಪರ್ಸೆಂಟ್‌ ಕಮಿಷನ್‌ಗಾಗಿ ಮಾಡಿರುವ ಕಾಮಗಾರಿ ಎಂದು ಆರೋಪಿಸಿದರು. ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ, ಈ. ತುಕಾರಾಂ, ಭೀಮಾ ನಾಯ್ಕ, ಜೆ.ಎನ್‌. ಗಣೇಶ, ಮುಖಂಡರಾದ ಕುರಿಶಿವಮೂರ್ತಿ, ವಿ. ಸೋಮಪ್ಪ ಮತ್ತಿತರರಿದ್ದರು.

Koppala: ಹನುಮನ ಜನ್ಮಸ್ಥಳದಲ್ಲಿ ಹನುಮ ಮಾಲೆಗಳಿಗಿಲ್ಲ ಗೌರವ!

ಕಪ್ಪು ಹಣ ತಂದು,ಬಡವರ ಬ್ಯಾಂಕ್‌ ಖಾತೆಗೆ ಜಮೆ ಮಾಡಿಲ್ಲ:ಎಚ್‌.ಕೆ. ಪಾಟೀಲ್‌

ಪ್ರಧಾನಿ ನರೇಂದ್ರ ಮೋದಿ(Narendra Modi) ಕಪ್ಪು ಹಣ ತಂದು ಬಡವರ ಬ್ಯಾಂಕ್‌ ಖಾತೆಗೆ .15 ಲಕ್ಷ ಜಮೆ ಮಾಡುತ್ತೇವೆ ಎಂದಿದ್ದರು. ಜಮೆ ಮಾಡಿದ್ದಾರೆಯೇ? ನೋಟು ಅಮ್ಯಾನೀಕರಣ ಮಾಡಿದ್ದರೂ ಕಪ್ಪು ಹಣ ನಿಂತಿಲ್ಲ ಎಂದು ಮಾಜಿ ಸಚಿವ ಎಚ್‌.ಕೆ. ಪಾಟೀಲ್‌ ದೂರಿದರು. ಕಾಂಗ್ರೆಸ್‌(Congresss)ನ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಮಾಡುತ್ತೇವೆ ಎಂದರು. ಯುವಕರಿಗೆ ಎಲ್ಲಿ ಉದ್ಯೋಗ ಸಿಕ್ಕಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 371 (ಜೆ) ಕಲ್ಪಿಸಿದ್ದು, ಕಾಂಗ್ರೆಸ್‌ ಸರ್ಕಾರ. ಈ ಭಾಗದ 41 ಸ್ಥಾನಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಬೇಕೆಂಬ ಪಣತೊಡಬೇಕು ಎಂದರು.

Koppal News: ಅಂಜನಾದ್ರಿ ಅಭಿವೃದ್ಧಿ ಕಾರ್ಯ ಶೀಘ್ರ ಕೈಗೊಳ್ಳಿ: ಸಚಿವ ಆನಂದ್ ಸಿಂಗ್

ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ವಿಧಾನ ಪರಿಷತ್‌ ಮುಖ್ಯ ಸಚೇತಕ ಪ್ರಕಾಶ ರಾಠೋಡ್‌, ಮುಖಂಡರಾದ ಮಂಜುನಾಥ, ರಾಜಶೇಖರ ಹಿಟ್ನಾಳ್‌, ಮಾಜಿ ಶಾಸಕ ಎಚ್‌.ಆರ್‌.ಗವಿಯಪ್ಪ, ಮುಖಂಡರಾದ ದೀಪಕ್‌ ಸಿಂಗ್‌, ವೆಂಕಟರಾವ್‌ ಘೋರ್ಪಡೆ, ಕುರಿ ಶಿವಮೂರ್ತಿ, ಎಚ್‌ಎನ್‌ಎಫ್‌ ಇಮಾಮ್‌, ಎಲ್‌. ಸಿದ್ದನಗೌಡ, ಗುಜ್ಜಲ ರಘು, ಐಗೋಳ್‌ ಚಿದಾನಂದ ಮತ್ತಿತರರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ