Karnataka Politics: ಗದ್ದುಗೆ ಏರಲು ಬಿಜೆ​ಪಿ ತವಕ​, ಕಾಂಗ್ರೆಸ್‌ ತೆರೆಮರೆಯ ಕಸರತ್ತು..!

Kannadaprabha News   | Asianet News
Published : Jan 17, 2022, 10:34 AM ISTUpdated : Jan 17, 2022, 11:12 AM IST
Karnataka Politics: ಗದ್ದುಗೆ ಏರಲು ಬಿಜೆ​ಪಿ ತವಕ​, ಕಾಂಗ್ರೆಸ್‌ ತೆರೆಮರೆಯ ಕಸರತ್ತು..!

ಸಾರಾಂಶ

*  ಕುತೂಹಲ ಕೆರಳಿಸಿದ ಗದಗ- ಬೆಟ​ಗೇರಿ ನಗ​ರ​ಸಭೆ ಅಧ್ಯಕ್ಷ ಉಪಾ​ಧ್ಯ​ಕ್ಷರ ಚುನಾ​ವಣೆ *  ಜನವರಿ ಕೊನೆಯ ವಾರದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಯುವ ಸಾಧ್ಯತೆ  *  ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು   

ಶಿವ​ಕು​ಮಾರ ಕುಷ್ಟಗಿ

ಗದಗ(ಜ.17):  ಗದ​ಗ-ಬೆಟ​ಗೇರಿ(Gadag-Betageri) ನಗ​ರ​ಸ​ಭೆ ಚುನಾ​ವ​ಣೆ​ಯಲ್ಲಿ(City Muncipal Election) 14 ವರ್ಷ​ಗಳ ನಂತರ ಬಿಜೆಪಿ(BJP) ಸ್ಪಷ್ಟಬಹು​ಮ​ತ ಪಡೆ​ದಿದ್ದು, ಅಧಿ​ಕಾ​ರ ಗದ್ದುಗೆ ಏರು​ವ ತಯಾರಿ ಮಾಡಿ​ಕೊಂಡಿದೆ. ಆದರೆ ಬಹು​ಮ​ತಕ್ಕೆ ಕೇವಲ 2 ಸ್ಥಾನ​ಗ​ಳನ್ನು ಕಡಿಮೆ ಪಡೆ​ದಿ​ರುವ ಕಾಂಗ್ರೆಸ್‌(Congress) ಸಹ ಗದ್ದು​ಗೆ ವಶಕ್ಕೆ ತೆರೆಮರೆಯ ಕಸ​ರತ್ತು ನಡೆ​ಸಿದೆ ಎನ್ನುವ ಚರ್ಚೆ​ ಸಾರ್ವ​ಜ​ನಿ​ಕ ವಲ​ಯ​ದಲ್ಲಿ ಜೋರಾ​ಗಿಯೇ ಕೇಳಿ ಬರು​ತ್ತಿವೆ.

ಡಿ. 27ರಂದು ಗದಗ- ಬೆಟ​ಗೇರಿ ನಗ​ರ​ಸ​ಭೆಯ 35 ವಾರ್ಡ್‌​ಗ​ಳಿಗೆ ಮತ​ದಾನ ನಡೆ​ದಿದ್ದು, ಡಿ. 30ರಂದು ನಡೆದ ಮತ​ ಎ​ಣಿಕೆಯಲ್ಲಿ ಬಿಜೆಪಿ 18 ಸ್ಥಾನ​ಗ​ಳನ್ನು, ಕಾಂಗ್ರೆಸ್‌ 15 ಸ್ಥಾನ​ಗ​ಳನ್ನು ಹಾಗೂ ಪಕ್ಷೇ​ತ​ರರು 2 ಸ್ಥಾನ​ಗ​ಳಲ್ಲಿ ಗೆಲುವು ಸಾಧಿ​ಸಿದ್ದಾರೆ. 18 ಸ್ಥಾನ​ಗ​ಳನ್ನು ಪಡೆದ ಬಿಜೆಪಿ ಸ್ಪಷ್ಟಬಹು​ಮ​ತ ಹೊಂದಿದೆ. 2 ಸ್ಥಾನ​ಗ​ಳಲ್ಲಿ ಗೆಲುವು ಸಾಧಿ​ಸಿ​ರುವ ಪಕ್ಷೇ​ತ​ರರು ಕಾಂಗ್ರೆಸ್‌ ಬಂಡಾಯ ಅಭ್ಯ​ರ್ಥಿ​ಗ​ಳಾ​ಗಿದ್ದು, ಅವರಲ್ಲಿ ಈಗಾ​ಗಲೇ ಓರ್ವ ಮಹಿಳಾ ಸದಸ್ಯೆ ಮತ್ತೆ ಕಾಂಗ್ರೆಸ್‌ಗೆ ಸೇರ್ಪ​ಡೆ​ಯಾ​ಗಿದ್ದು, ಇನ್ನೋರ್ವ ಪಕ್ಷೇ​ತ​ರರ ಕಾಂಗ್ರೆಸ್‌ ಬೆಂಬ​ಲಿ​ಸಿ​ದಲ್ಲಿ ಕಾಂಗ್ರೆಸ್‌ ಒಟ್ಟು 17 ಸ್ಥಾನದ ಬಲ​ದಿಂದ ಸ್ಪಷ್ಟಬಹು​ಮ​ತಕ್ಕೆ ಕೇವಲ ಒಂದು ಸ್ಥಾನ ಮಾತ್ರ ಕಡಿಮೆ ಬೀಳುವ ಹಿನ್ನೆ​ಲೆ​ ಕೊನೆಯ ಕ್ಷಣ​ದಲ್ಲಿ ಏನಾ​ದರೂ ಬೆಳ​ವ​ಣಿಗೆ ನಡೆ​ದರೂ ಆಶ್ಚರ್ಯ ಪಡು​ವಂತಿಲ್ಲ.

 

Local Body Election Result: : ಬಿಜೆಪಿ ಪಾಲಿಗೆ ಅದೃಷ್ಟ ಲಕ್ಷ್ಮಿಯಾದ ಉಷಾ..!

ಮಹಿಳೆಯರಿಗೆ ಮೀಸಲು:

ಜನವರಿ ಕೊನೆಯ ವಾರದಲ್ಲಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ(Election of President-Vice President) ನಡೆಯುವ ಸಾಧ್ಯತೆ ಇದ್ದು, ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ(woman) ಮೀಸಲಾಗಿದೆ.

ಶಾಸ​ಕರು, ಸಂಸ​ದ​ರಿಗೆ ಮತ​ದಾ​ನದ ಹಕ್ಕು

ನಗ​ರ​ಸಭೆ ಅಧ್ಯಕ್ಷ, ಉಪಾ​ಧ್ಯ​ಕ್ಷರ ಆಯ್ಕೆ ಸಂದ​ರ್ಭ​ದಲ್ಲಿ ಗದಗ ಶಾಸ​ಕ​ರಾದ ಎಚ್‌.​ಕೆ. ​ಪಾ​ಟೀಲ(HK Patil) ಹಾಗೂ ಹಾವೇರಿ ಲೋಕ​ಸಭಾ ಸದಸ್ಯ ಶಿವ​ಕು​ಮಾರ ಉದಾಸಿ(Shivakumar Udasi) ಮತ​ದಾನದ ಹಕ್ಕನ್ನು ಹೊಂದಿದ್ದು, ಇಬ್ಬರು ತಮ್ಮ ತಮ್ಮ ಪಕ್ಷದ ಪರ​ವಾಗಿ ಮತ​ದಾನ ಮಾಡಿ​ದರೂ ಬಿಜೆ​ಪಿಗೆ 19 ಸ್ಥಾನ, ಕಾಂಗ್ರೆಸ್‌ಗೆ 18 ಸ್ಥಾನದ ಬಲ ಬಂದಂತಾ​ಗು​ತ್ತದೆ. ಹಾಗಾಗಿ ಕಾಂಗ್ರೆಸ್‌ ಅಧಿ​ಕಾರ ಹಿಡಿ​ಯ​ಬೇ​ಕಾ​ದಲ್ಲಿ ಒಬ್ಬರೇ ಒಬ್ಬ ಬಿಜೆ​ಪಿ ಸದ​ಸ್ಯ​ರ​ನ್ನು ಸೆಳೆ​ದರೂ ಅವಳಿ ನಗ​ರದ ರಾಜ​ಕೀಯದಲ್ಲಿ ದೊಡ್ಡ ಸಂಚ​ಲನ ಸೃಷ್ಟಿ​ಯಾ​ಗ​ಲಿದೆ.

ಬಿಜೆಪಿ ಸದ​ಸ್ಯರು ಗೈರಾ​ದಲ್ಲಿ ಅಪಾಯ

ಕಾಂಗ್ರೆಸ್‌ ಅಧಿ​ಕಾ​ರಕ್ಕೆ ಬರ​ಬೇ​ಕಾ​ದಲ್ಲಿ ಬಿಜೆ​ಪಿಯ ಒಬ್ಬರ ಸದ​ಸ್ಯ​ರನ್ನು ಸೆಳೆ​ಯ​ಬೇ​ಕಾದ ಅನಿ​ವಾ​ರ್ಯತೆ ಇರು​ವುದು ಒಂದೆ​ಡೆ​ಯಾ​ದರೆ, ಇನ್ನೊಂದೆಡೆ ಅಧ್ಯಕ್ಷ, ಉಪಾ​ಧ್ಯ​ಕ್ಷರ ಆಯ್ಕೆಯ ಸಂದ​ರ್ಭ​ದಲ್ಲಿ ಬಿಜೆ​ಪಿಯ ಒಬ್ಬರು ಅಥವಾ ಇಬ್ಬರು ಸದ​ಸ್ಯರು ಗೈರಾ​ದರೂ ಸಾಕು ಕಾಂಗ್ರೆಸ್‌ ಮತ್ತೆ ನಗ​ರ​ಸ​ಭೆ ಅಧಿ​ಕಾ​ರಕ್ಕೆ ಬರು​ವು​ದ​ರಲ್ಲಿ ಯಾವುದೇ ಸಂಶ​ಯ​ವಿಲ್ಲ. ಬಿಜೆಪಿ ತನ್ನ ಸದ​ಸ್ಯ​ರಿಗೆ ವಿಪ್‌ ಜಾರಿ ಮಾಡು​ತ್ತದೆ. ವಿಪ್‌ ಅಧ್ಯಕ್ಷ, ಉಪಾ​ಧ್ಯ​ಕ್ಷರ ಆಯ್ಕೆಯ ಚುನಾ​ವ​ಣೆ​ಯಲ್ಲಿ ಪಾಲ್ಗೊಂಡು ಪಕ್ಷ ವಿರೋ​ಧಿ​ಯಾಗಿ ನಡೆ​ದು​ಕೊಂಡರೆ ಅವರ ಸದ​ಸ್ಯತ್ವ ರದ್ದಾ​ಗು​ತ್ತದೆ. ಆದರೆ ವಿಪ್‌ ಸ್ವೀಕ​ರಿಸಿ, ಮತ​ದಾ​ನ​ದಿಂದ ದೂರ ಉಳಿ​ದರೆ ಬಿಜೆ​ಪಿಗೆ ತೀವ್ರ ತೊಂದ​ರೆ​ಯಾ​ಗುವುದು ಪಕ್ಕಾ.

ಆಸ್ಸಾಂ ಪ್ರವಾಸ...

ಹಲ​ವಾರು ವರ್ಷ​ಗ​ಳಿಂದ ನಂತರ ನಗ​ರ​ಸ​ಭೆ​ಯಲ್ಲಿ ಅಧಿ​ಕಾರ ಹಿಡಿ​ದಿ​ರುವ ಬಿಜೆಪಿ ಯಾವುದೇ ಕಾರ​ಣಕ್ಕೂ ಅಧಿ​ಕಾರ ಕೈ ತಪ್ಪ​ದಂತೆ ಎಚ್ಚರ ವಹಿ​ಸು​ತ್ತಿದೆ. ಅದರ ಭಾಗ​ವಾ​ಗಿಯೇ ಎಲ್ಲ ನೂತನ ಸದ​ಸ್ಯರು ಸೇರಿ​ದಂತೆ ನಗ​ರ​ಸಭೆ ಚುನಾ​ವ​ಣೆ​ಯಲ್ಲಿ ಶ್ರಮಿ​ಸಿ​ದ​ವ​ರ​ನ್ನೆಲ್ಲಾ ದೂರದ ಅಸ್ಸಾಂಗೆ ಪ್ರವಾ​ಸಕ್ಕೆ ಕರೆ​ದು​ಕೊಂಡು ಹೋಗಿ ಬಂದಿದೆ. ಆದರೆ ಕೊನೆಯ ಕ್ಷಣ​ದಲ್ಲಿ ಕಾಂಗ್ರೆಸ್‌ ಮಾಡು​ತ್ತಿ​ರುವ ರಣ​ತಂತ್ರಕ್ಕೆ ಬಿಜೆಪಿ ಜಾಣ್ಮೆಯ ನಡೆ ಅನು​ಸ​ರಿಸಿ ಅಧಿ​ಕಾರ ಹಿಡಿ​ಯುತ್ತಾ ಎನ್ನು​ವು​ದನ್ನು ಕಾಯ್ದು ನೋಡ​ಬೇಕು.

Gadag-Betageri: ಒಗ್ಗಟ್ಟಿನಿಂದ ನಗರಸಭೆ ಗೆದ್ದುಕೊಂಡ ಬಿಜೆಪಿ: ಕಾಂಗ್ರೆಸ್‌ಗೆ ನಿರ್ಲಕ್ಷ್ಯಕ್ಕೆ ಪಾಠ

ನಗ​ರ​ಸಭೆ ಚುನಾ​ವ​ಣೆ​ಯಲ್ಲಿ ಜನತೆ ನಮಗೆ ಕೊಟ್ಟ ತೀರ್ಪನ್ನು ಸ್ವಾಗ​ತಿ​ಸು​ತ್ತೇವೆ. ಪ್ರಬಲ ವಿರೋಧ ಪಕ್ಷ​ವಾಗಿ ಏನು ಕೆಲಸ ಮಾಡ​ಬೇಕೋ ಅದನ್ನು ಮಾಡು​ತ್ತೇವೆ. ಯಾರನ್ನು ಸೆಳೆ​ಯುವ ಪ್ರಶ್ನೆಯೇ ಉದ್ಭವಿ​ಸು​ವು​ದಿಲ್ಲ ಅಂತ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಅ​ಶೋಕ ಮಂದಾಲಿ ತಿಳಿಸಿದ್ದಾರೆ.   

ನಮ್ಮ ಪಕ್ಷದ ಎಲ್ಲ ನೂತನ ಸದ​ಸ್ಯರು ಸುಶಿ​ಕ್ಷಿ​ತರು, ಯುವ​ಕರು, ಪಕ್ಷ ನಿಷ್ಠ​ರಾ​ಗಿ​ದ್ದಾರೆ. ವಿರೋಧ ಪಕ್ಷ​ದ​ವರು ಏನೇ ಪ್ರಯತ್ನ ಮಾಡಿ​ದರೂ ಅದಕ್ಕೆ ಅವರೇ ಅವ​ಕಾಶ ನೀಡು​ವು​ದಿಲ್ಲ. ನಮಗೆ ಸ್ಪಷ್ಟ​ವಾದ ಬಹು​ಮ​ತ​ವಿದೆ ಅಂತ ಗದಗದ ಬಿಜೆಪಿ ಯುವ ಮುಖಂಡ ಅನಿಲ ಮೆಣ​ಸಿ​ನ​ಕಾಯಿ ಹೇಳಿದ್ದಾರೆ.  
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ