
ತುಮಕೂರು(ಸೆ.28): ದೇಶದಲ್ಲಿ ಸಮಯಾನುಸಾರ ಎಲ್ಲರ ಜೊತೆಯಲ್ಲೂ ಹೊಂದಾಣಿಕೆ ಮಾಡಿಕೊಂಡಿದ್ದು ನಮ್ಮದೇನು ಹೊಸದಲ್ಲ ಎಂದು ಜೆಡಿಎಸ್ ಬಿಜೆಪಿ ಮೈತ್ರಿಯನ್ನು ಮಾಜಿ ಸಚಿವ ಬಂಡೆಪ್ಪ ಕಾಶಂಪೂರ ಸಮರ್ಥಿಸಿಕೊಂಡಿದ್ದಾರೆ.
ಅವರು ಶಿರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಶಿವಸೇನೆ ಜೊತೆ ಸೇರಿ ಕೂತ್ಕೊಂಡು ಸರ್ಕಾರ ಮಾಡಿದರೆ ಅದು ಹೊಂದಾಣಿಕೆ, ಕೋಮುವಾದಿಯಲ್ಲ. ನಾವು ಮಾಡಿಕೊಂಡರೆ ಅದು ತಪ್ಪಾ ಎಂದರು.
ಕಾವೇರಿ ಹೆಸರಿನಲ್ಲಿ ಬಿಜೆಪಿ-ಜೆಡಿಎಸ್ ರಾಜಕೀಯ ಫಲಿಸಲ್ಲ: ಸಚಿವ ಗುಂಡೂರಾವ್
ರಾಜ್ಯ ಹಾಗೂ ಪಕ್ಷದ ಹಿತದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಟಾರ್ಗೆಟ್ ಕಾಂಗ್ರೆಸ್ ನ್ನು ಸೋಲಿಸುವುದು ಎಂದರು. ನಾವು ಯಾವತ್ತೂ ಜಾತ್ಯಾತೀತನೇ ನಾವೇನು ಜಾತ್ಯಾತೀತ ಬಿಟ್ಟು ಬೇರೆ ಕಡೆ ಹೋಗುತ್ತೀವ ಎಂದರು. ಕಾಂಗ್ರೆಸ್ ನ್ನು ದೇಶದಲ್ಲೇ ಕಿತ್ತು ಹಾಕುತ್ತಾರೆ. 135ಸೀಟು ಇಲ್ಲಿ ಬಂದಿದೆ ಅವರ ಗತ್ತು, ನಡವಳಿಕೆಯೇ ಬದಲಾಗಿದೆ ಎಂದರು. ಒಳ್ಳೇ ರೀತಿ ಸರ್ಕಾರ ಮಾಡುವುದು ಬಿಟ್ಟು ಬೇರೆ ಕಡೆ ಗಮನ ಕೊಡುತ್ತಾರೆ. ಈ ಬಾರಿ ಜನತೆ ಪಾಠ ಕಲಿಸುತ್ತಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.