ಮತ್ತೊಬ್ಬ ಸಚಿವ ರಾಜೀನಾಮೆ : ಸಾರ್ವಜನಿಕವಾಗಿಯೇ ಬಿಕ್ಕಿ ಬಿಕ್ಕಿ ಅತ್ತರು

Kannadaprabha News   | Asianet News
Published : Jan 23, 2021, 08:47 AM ISTUpdated : Jan 23, 2021, 09:01 AM IST
ಮತ್ತೊಬ್ಬ ಸಚಿವ ರಾಜೀನಾಮೆ : ಸಾರ್ವಜನಿಕವಾಗಿಯೇ ಬಿಕ್ಕಿ ಬಿಕ್ಕಿ ಅತ್ತರು

ಸಾರಾಂಶ

ಸಚಿವರೋರ್ವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಯಾಬಿನೆಟ್‌ನಿಂದ ಹೊರ ನಡೆದಿದ್ದಾರೆ. ಅಲ್ಲದೇ ಸಾರ್ವನಿಕವಾಗಿಯೇ ಬಿಕ್ಕಿ ಕಣ್ಣೀರು ಹಾಕಿದ್ದಾರೆ. 

ಕೋಲ್ಕತಾ (ಜ.23): ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಪುಟದ ಮತ್ತೊಂದು ವಿಕೆಟ್‌ ಪತನವಾಗಿದೆ. ಅರಣ್ಯ ಸಚಿವ ರಾಜೀವ್‌ ಬ್ಯಾನರ್ಜಿ ಗುರುವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜೀವ್‌, ‘ಪಕ್ಷದ ಕೆಲವು ನಾಯಕರು ವೈಯಕ್ತಿಕವಾಗಿ ತೀವ್ರ ನೋವುಂಟು ಮಾಡಿದ್ದರಿಂದ ನೊಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. 2 ವರ್ಷದ ಹಿಂದೆ ನನ್ನ ಖಾತೆ ಬದಲಾವಣೆ ಮಾಡಿದ್ದು ನೋವು ತಂದಿತ್ತು’ ಎಂದು ಹೇಳಿದರು. ಅಲ್ಲದೆ, ಇಂಥ ದಿನ ಬರುವುದು ಎಂದು ಎಣಿಸಿರಲಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲೇ ಅತ್ತರು.

ಬಿಎಸ್‌ಎಫ್‌ನಿಂದ ನಿರ್ದಿಷ್ಟ ಪಕ್ಷಕ್ಕೆ ಮತಕ್ಕೆ ಬೆದರಿಕೆ: ಟಿಎಂಸಿ ಗಂಭೀರ ಆರೋಪ! ..

ಆದರೆ ಪಕ್ಷದ ಸದಸ್ಯತ್ವಕ್ಕೂ ರಾಜೀನಾಮೆ ನೀಡುವ ಉದ್ದೇಶವಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ರಾಜೀವ್‌ ಉತ್ತರಿಸಲು ನಿರಾಕರಿಸಿದರು.

ಈ ನಡುವೆ ಅತೃಪ್ತ ಶಾಸಕ ಬೈಸಾಖಿ ದಾಲ್ಮಿಯಾ ಅವರನ್ನು ಟಿಎಂಸಿ, ಶುಕ್ರವಾರ ಉಚ್ಚಾಟಿಸಿದೆ.

ಮಮತಾ ಸಂಪುಟದಲ್ಲಿದ್ದ ಸುವೇಂದು ಅಧಿಕಾರಿ ಸೇರಿದಂತೆ ಈಗಾಗಲೇ ಹಲವರು ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇವರ ಮುಂದಿನ ನಡೆಯ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಸತಿ ಯೋಜನೆಗಳಿಗೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ: ಸಚಿವ ಜಮೀರ್‌ ಅಹಮದ್‌
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ