ಕರ್ನಾಟಕ ಮತದಾರರಿಗೆ ಅಮಿತ್‌ ಶಾ ಬೆದರಿಕೆ: ಜೈರಾಂ ರಮೇಶ್‌

Published : Apr 27, 2023, 10:40 AM IST
ಕರ್ನಾಟಕ ಮತದಾರರಿಗೆ ಅಮಿತ್‌ ಶಾ ಬೆದರಿಕೆ: ಜೈರಾಂ ರಮೇಶ್‌

ಸಾರಾಂಶ

ಕಾಂಗ್ರೆಸ್‌ ವಿರುದ್ಧದ ಹೇಳಿಕೆಗಳು ಪ್ರಚೋದನಾಕಾರಿಯಾಗಿದ್ದು, ನಾಚಿಕೆಗೇಡಿನ ಹೇಳಿಕೆಗಳಾಗಿವೆ. ದೇಶದ ಮೊದಲ ಗೃಹ ಸಚಿವರಿಂದ ನಿಷೇಧಿಸಲ್ಪಟ್ಟಿದ್ದ ಸಂಘಟನೆಗೆ (ಆರ್‌ಎಸ್‌ಎಸ್‌) ನಿಷ್ಠರಾಗಿರುವ ಗೃಹ ಸಚಿವರು ಸೋಲಿನ ಭಯದಿಂದ ಬೆದರಿಕೆ ಹೇಳಿಕೆ ನೀಡುತ್ತಿದ್ದಾರೆ: ಜೈರಾಮ್‌ ರಮೇಶ್‌

ನವದೆಹಲಿ(ಏ.27): 'ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ಧಿ ರಿವರ್ಸ್‌ಗೇರ್‌ನಲ್ಲಿ ಸಾಗಲಿದೆ ಹಾಗೂ ರಾಜ್ಯದಲ್ಲಿ ಗಲಭೆಗಳು ಸೃಷ್ಟಿಯಾಗಲಿವೆ’ ಎಂಬ ಅಮಿತ್‌ ಶಾ ಹೇಳಿಕೆಗೆ ಕಿಡಿಕಾರಿರುವ ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ‘ಇಂತಹ ಹೇಳಿಕೆಗಳ ಮೂಲಕ ಶಾ ಅವರು ಮತದಾರರನ್ನು ಬೆದರಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಬುಧವಾರ ಮಾತನಾಡಿದ ಜೈರಾಮ್‌, ‘ಕಾಂಗ್ರೆಸ್‌ ವಿರುದ್ಧದ ಹೇಳಿಕೆಗಳು ಪ್ರಚೋದನಾಕಾರಿಯಾಗಿದ್ದು, ನಾಚಿಕೆಗೇಡಿನ ಹೇಳಿಕೆಗಳಾಗಿವೆ. ದೇಶದ ಮೊದಲ ಗೃಹ ಸಚಿವರಿಂದ ನಿಷೇಧಿಸಲ್ಪಟ್ಟಿದ್ದ ಸಂಘಟನೆಗೆ (ಆರ್‌ಎಸ್‌ಎಸ್‌) ನಿಷ್ಠರಾಗಿರುವ ಗೃಹ ಸಚಿವರು ಸೋಲಿನ ಭಯದಿಂದ ಬೆದರಿಕೆ ಹೇಳಿಕೆ ನೀಡುತ್ತಿದ್ದಾರೆ’ ಎಂದಿದ್ದಾರೆ.

‘ಒಂದು ದೇಶ ಒಂದು ಹಾಲು’ ಘೋಷಣೆ ಮಾಡಲು ಬಿಜೆಪಿಗೆ ಬಿಡುವುದಿಲ್ಲ: ಜೈರಾಂ ರಮೇಶ್‌

ಕರ್ನಾಟಕದ ದೇವರಹಿಪ್ಪರಗಿಯಲ್ಲಿ ಮಂಗಳವಾರ ಸಾರ್ವಜನಿಕ ರಾರ‍ಯಲಿಯನ್ನುದ್ದೇಶಿಸಿ ಮಾತನಾಡಿದ ಶಾ, ‘ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕುಟುಂಬ ರಾಜಕಾರಣ ಹಾಗೂ ಗಲಭೆಗಳಿಗೆ ರಾಜ್ಯ ತುತ್ತಾಗುತ್ತದೆ. ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಿ’ ಎಂದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ