
ರಾಂಚಿ(ನ.12): ಪ್ರಧಾನಿ ನರೇಂದ್ರ ಮೋದಿ ಅವರು ಚುನಾಯಿತ ಸರ್ಕಾರ ಗಳನ್ನು ಬೀಳಿಸುವ, ವಿಪಕ್ಷ ಗಳನ್ನು ಹತ್ತಿಕ್ಕುವ ಹಾಗೂ ವಿಪಕ್ಷ ಶಾಸಕರನ್ನು ಕುರಿಯಂತೆ ಖರೀದಿಸಿ ಕತ್ತರಿಸಿ ತಿನ್ನುವ ಚಾಳಿ ಹೊಂದಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಜಾರ್ಖಂಡ್ ವಿಧಾನ ಸಭೆ ಚುನಾವಣೆ ನಿಮಿತ್ತ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, 'ಮೋದಿ-ಜಿ ಸರ್ಕಾರಗಳನ್ನು ಬೀಳಿಸುತ್ತಾರೆ. ಶಾಸಕರನ್ನು ಖರೀದಿಸುತ್ತಾರೆ.
ಅಘಾಡಿಯಿಂದ ಸ್ತ್ರೀಯರಿಗೆ ₹3000, ಫ್ರೀ ಬಸ್ ಪ್ರಯಾಣ: ಪ್ರಣಾಳಿಕೆ ಬಿಡುಗಡೆ
ಉನ್ನಾ ಕಾಮ್ ಎಮ್ಮೆಲ್ಲೇಸ್ ಕೋ ಬಕ್ರಿ ಕೆ ಜೈಸೇ ಅಪ್ಪೆ ಪಾಸ್ ರಖ್ ಲೇನಾ, ಪಾಲ್ನಾ ಔರ್ ಫಿರ್ಬಾದ್ ಮೇ ಕಾಟ್ ಕರ್ಖಾನಾ ಹೈ (ಮೋದಿ ಶಾಸಕರನ್ನು ಮೇಕೆಗಳಂತೆ ಇಟ್ಟುಕೊಳ್ಳುತ್ತಾರೆ, ಅವರಿಗೆ ಆಹಾರ ನೀಡುತ್ತಾರೆ ಮತ್ತು ನಂತರ ಅವರನ್ನು ಕತ್ತರಿಸಿ ತಿನ್ನುತ್ತಾರೆ)' ಎಂದು ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.