ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಿದ ಪ್ರಕಾಶ್ ರೈ

Published : Jan 18, 2019, 12:44 PM ISTUpdated : Jan 18, 2019, 12:47 PM IST
ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಿದ ಪ್ರಕಾಶ್ ರೈ

ಸಾರಾಂಶ

ಹೊಸ ವರ್ಷಾರಂಭದಲ್ಲಿ ರಾಜಕೀಯ ಪ್ರವೇಶದ ನಿರ್ಧಾರ ಪ್ರಕಟಿಸಿದ್ದ ಪ್ರಕಾಶ್ ರೈ ಆಪ್ತಗೆಳತಿಯಾಗಿದ್ದ ಗೌರಿ ಲಂಕೇಶ್ ಸಾವಿನ ಬಳಿಕ #JustAsking ಚಳವಳಿ ಆರಂಭಿಸಿದ್ದ ಬಹುಭಾಷಾ ನಟ  

ಬೆಂಗಳೂರು: ರಾಜಕೀಯ ಪ್ರವೇಶಿಸುವ ನಿರ್ಧಾರವನ್ನು ಪ್ರಕಟಿಸಿದ ಬಳಿಕ, ಇದೇ ಮೊದಲ ಬಾರಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ನಟ ಪ್ರಕಾಶ್ ರೈ, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮ ವರದಿಗಾರರನ್ನು ಉದ್ದೇಶಿಸಿ ಮಾತನಾಡಿದ ರೈ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೋಮುವಾದಿ ಶಕ್ತಿಗಳನ್ನು ಸೋಲಿಸುವುದು ಅನಿವಾರ್ಯ ಎಂದಿದ್ದಾರೆ.

ಪ್ರಸಕ್ತ ರಾಜ್ಯ ರಾಜಕಾರಣದ ಬಗ್ಗೆ ಪ್ರತಿಕ್ರಿಯಿಸಿದ ರೈ,  ಆಪರೇಷನ್ ಕಮಲ ಮಾಡುತ್ತಿರುವವರಿಗೆ ನಾಚಿಕೆ ಆಗಬೇಕು. ಹಬ್ಬದ ದಿನ ಇಡೀ ಜನತೆ ಹಬ್ಬ ಮಾಡ್ತಿದ್ರೆ, ಇವರು ರಾಜಕೀಯ ಮಾಡ್ತಿದ್ರು. ಬಿಜೆಪಿಯವರದ್ದು ನಾಚಿಕೆ ಇಲ್ಲದ ಜನ್ಮ, ಎಂದು ಹರಿಹಾಯ್ದಿದ್ದಾರೆ.

ಪ್ರಕಾಶ್‌ ರೈಗೆ ಕಾಂಗ್ರೆಸ್‌ ಬೆಂಬಲವಿಲ್ಲ!

ಮಹಾಘಟಬಂಧನ್ ಜೊತೆ ಸೇರಿದ್ರೆ ಏನು ತಪ್ಪು? ಕೋಮುವಾದಿ ಶಕ್ತಿಗಳನ್ನು ಎದುರಿಸುವ ನಿಟ್ಟಿನಲ್ಲಿ ಮಹಾಘಟಬಂಧನ್ ಇದೆ.  ನಮ್ಮ ಗುರಿ ಒಂದೇ ಇರುವಾಗ ನಾವು ಅವರಿಗೆ ಅಥವಾ ಅವರು ನಮಗೆ ಬೆಂಬಲ ಕೊಟ್ರೆ ತಪ್ಪೇನಿಲ್ಲ, ಎಂಬ ಅಭಿಪ್ರಾಯವನ್ನು ರೈ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ರಾಜಕೀಯ ವ್ಯವಸ್ಥೆ ಹಾಗೂ ರಾಜಕಾರಣಿಗಳ ವಿರುದ್ಧ ಅಸಮಾಧಾನ ಹೊರಹಾಕಿದ ರೈ,  ರಾಜಕೀಯ ಪಕ್ಷಗಳು ಕಳ್ಳರು, ಐದು ವರ್ಷಕ್ಕೊಮ್ಮೆ ಜನರ ಬಳಿ ಬರುತ್ತಾರೆ, ಆಮೇಲೆ ಎಲ್ಲಾವನ್ನು ದೋಚುತ್ತಾರೆ ಎಂದು ಕಿಡಿಕಾರಿದ್ದಾರೆ.

ಬೆಂಗಳೂರು ಸೆಂಟ್ರಲ್ ಯಾಕೆ:

ತನ್ನ ಶಾಲೆ, ಕಾಲೇಜು ವಿದ್ಯಾಭ್ಯಾಸ, ರಂಗಭೂಮಿಗೆ ಪದಾರ್ಪಣೆ, ಚಿತ್ರರಂಗದ ಪ್ರವೇಶ ಎಲ್ಲವೂ ಜರುಗಿದ್ದು ಈ ಬೆಂಗಳೂರು ಸೆಂಟ್ರಲ್‌ನಲ್ಲಿಯೇ. ಇಲ್ಲಿಯ ಅವಶ್ಯಕತೆಗಳನ್ನು ಚೆನ್ನಾಗಿ ಬಲ್ಲೆ. ಹಾಗಾಗಿ ಈ ಕ್ಷೇತ್ರವನ್ನೇ ರಾಜಕೀಯ ಕರ್ಮಭೂಮಿಯಾಗಿ ಆಯ್ಕೆಮಾಡಿದ್ದೇನೆ, ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಲೋಕಸಭಾ ಚುನಾವಣೆಗೆ ಪ್ರಕಾಶ್ ರೈ ಸ್ಪರ್ಧೆ!: ಯಾವ ಪಕ್ಷದಿಂದ ಸ್ಪರ್ಧಿಸ್ತಾರೆ?

ಸಿನಿಮಾ & ರಾಜಕೀಯ:

ತಾನು ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಖಳನಟನಾಗಿ ಅಭಿನಯಿಸಿರುವ ರೈ, ಆ ಇಮೇಜ್ ಚುನಾವಣೆ ಮೇಲೆ ಪರಿಣಾಮ ಬೀರಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ನನ್ನ‌ ಜವಾಬ್ದಾರಿ ಹೆಚ್ಚಾಗಿದೆ.  ಸಿನಿಮಾ ಹಾಗೂ ರಾಜಕಾರಣ ಎರಡನ್ನೂ ನೋಡಿಕೊಳ್ಳುತ್ತೇನೆ. ಆದರೆ ಸದ್ಯ ಆರು ತಿಂಗಳು ಸಿನಿಮಾ ಮಾಡಲ್ಲ
-ಪ್ರಕಾಶ್ ರೈ

ವಿಲನ್ ಪಾತ್ರ ಮಾಡಿದ್ದೇನೆ, ಅದು ನಟನಾಗಿ ಮಾತ್ರ. ಜನರು ನನ್ನನ್ನು ನಟನನ್ನಾಗಿ ನೋಡ್ತಾರೆ.  ಆದರೆ ಸಿನಿಮಾ ನಿಜವಲ್ಲ ಪಾತ್ರವಷ್ಟೇ, ಎಂಬುವುದು ರೈ ಮಾತು .

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ