ರಾಜ್ಯದ 10 ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಗೆ ಮೀಸಲಾತಿ ಪ್ರಕಟ

Published : Feb 12, 2021, 03:13 PM IST
ರಾಜ್ಯದ 10 ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಗೆ ಮೀಸಲಾತಿ ಪ್ರಕಟ

ಸಾರಾಂಶ

10 ಮಹಾನಗರ ಪಾಲಿಕೆಗಳ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಮೀಸಲಾತಿ ಪಟ್ಟಿ ಪ್ರಕಟವಾಗಿದ್ದು, ಯಾವ ಪಾಲಿಕೆ ಯಾವ ಮೀಸಲಾತಿ ಬಂದಿದೆ ಎನ್ನುವ ಮಾಹಿತಿ ಇಂತಿದೆ.

ಬೆಂಗಳೂರು, (ಫೆ.12):  ರಾಜ್ಯದ 10 ಮಹಾನಗರ ಪಾಲಿಕೆಗಳ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. 

ವಿವಿಧ ಕ್ಯಾಟಗರಿಗಳಿಗೆ ಮೇಯರ್, ಉಪ ಮೇಯರ್ ಸ್ಥಾನವನ್ನ ನಿಯೋಜನೆ ಮಾಡಿ ರಾಜ್ಯ ಸರ್ಕಾರ ಇಂದು (ಶುಕ್ರವಾರ) ಆದೇಶ ಹೊಡಡಿಸಿದೆ.

ಈ ಎಲ್ಲಾ ಹತ್ತು ಮಹಾನಗರ ಪಾಲಿಕೆಗಗಳ ಮೇಯರ್ ಹಾಗೂ ಉಪ ಮೇಯರ್ ಮೀಸಲಾತಿ ಪ್ರಕಟಿಸುವ ಮೊದಲು ರಾಜ್ಯ ಸರ್ಕಾರ ಕಳೆದ ಜನವರಿ 21ರಂದು ಮೀಸಲಾತಿ ನಿಗದಿಪಡಿಸುವ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಾರ್ಗಸೂಚಿ ಹೊರಡಿಸಿತ್ತು. ಅದರಂತೆ ಇದೀಗ ಅಧಿಕೃತ ಆದೇಶ ಹೊರಡಿಸಿದೆ.

ಬೈ ಎಲೆಕ್ಷನ್‌ ಕಣದಿಂದ ಹಿಂದೆ ಸರಿದ ಜೆಡಿಎಸ್: ಬಿಜೆಪಿಗೆ ಪ್ಲಸ್...! 

ಬಳ್ಳಾರಿ,ಬೆಳಗಾವಿ, ದಾವಣಗೆರೆ,ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು,ಮೈಸೂರು,ಶಿವಮೊಗ್ಗ, ತುಮಕೂರು ಹಾಗೂ ವಿಜಯಪುರ ಮಹಾನಗ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಮೀಸಲಾತಿ ಪ್ರಕಟಿಸಲಾಗಿದೆ. ಅದು ಈ ಕೆಳಗಿನಂತಿದೆ.

ಮೀಸಲಾತಿ ಪಟ್ಟಿ
1. ಬಳ್ಳಾರಿ: ಮೇಯರ್ -ಸಾಮಾನ್ಯ , ಉಪ ಮೇಯರ್ -ಒಬಿಸಿ
2. ಬೆಳಗಾವಿ: ಮೇಯರ್ -ಸಾಮಾನ್ಯ , ಉಪ ಮೇಯರ್ -ಸಾಮಾನ್ಯ ಮಹಿಳೆ
3. ದಾವಣಗೆರೆ: ಮೇಯರ್ -‌SC ಮಹಿಳೆ , ಉಪ ಮೇಯರ್ -ಸಾಮಾನ್ಯ ಮಹಿಳೆ
4. ಹುಬ್ಬಳ್ಳಿ ಧಾರವಾಡ: ಮೇಯರ್‌ -ಒಬಿಸಿ(ಎ), ಉಪ ಮೇಯರ್ -‌SC ಮಹಿಳೆ
5. ಕಲಬುರಗಿ: ಮೇಯರ್‌ -ಸಾಮಾನ್ಯ ಮಹಿಳೆ, ಉಪ ಮೇಯರ್ -ಒಬಿಸಿ (ಬಿ)
6. ಮಂಗಳೂರು: ಮೇಯರ್ -ಸಾಮಾನ್ಯ , ಉಪ ಮೇಯರ್ -ಒಬಿಸಿ(ಎ) ಮಹಿಳೆ
7. ಮೈಸೂರು: ಮೇಯರ್ -ಸಾಮಾನ್ಯ ಮಹಿಳೆ, ಉಪ ಮೇಯರ್ -ಸಾಮಾನ್ಯ
8. ಶಿವಮೊಗ್ಗ: ಮೇಯರ್ -ಒಬಿಸಿ(ಎ) ಮಹಿಳೆ, ಉಪ ಮೇಯರ್ -ಸಾಮಾನ್ಯ
9. ತುಮಕೂರು: ಮೇಯರ್ -SC, ಉಪ ಮೇಯರ್ -ಸಾಮಾನ್ಯ ಮಹಿಳೆ
10. ವಿಜಯಪುರ: ಮೇಯರ್ -ಸಾಮಾನ್ಯ , ಉಪ ಮೇಯರ್ -ಒಬಿಸಿ(ಎ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೈರತಿ ಬಸವರಾಜ್‌ಗೆ ಬಂಧನದ ಭೀತಿ; ಬಿಕ್ಲುಶಿವ ಕೊಲೆ ಕೇಸಲ್ಲಿ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹೈಕೋರ್ಟ್!
ಸದನದಲ್ಲಿ Siddaramaiah vs Arvind Bellad ಒಳಮೀಸಲು ಹೆಚ್ಚಳ ಜಟಾಪಟಿ! ಯತ್ನಾಳ್‌ಗೆ ಸಿಎಂ ಸಂವಿಧಾನ ಪಾಠ