
ಬೆಂಗಳೂರು(ಫೆ.10): 3ನೇ ಆವೃತ್ತಿಯ ಬೆಂಗಳೂರು ಓಪನ್ ಟೆನಿಸ್ ಸೋಮವಾರದಿಂದ ಆರಂಭವಾಗಲಿದೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್ಎಲ್ಟಿಎ)ಯಲ್ಲಿ 7 ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ ಭಾರತದ ಅಗ್ರ ಕ್ರಮಾಂಕದ ಆಟಗಾರರು ಅದೃಷ್ಠ ಪರೀಕ್ಷೆಗೆ ಇಳಿದಿದ್ದಾರೆ.
ಟೆನಿಸ್ ದಿಗ್ಗಜ ಭಾರತದ ಲಿಯಾಂಡರ್ ಪೇಸ್ ಕೂಡ ಕಣದಲ್ಲಿರುವುದು ವಿಶೇಷವಾಗಿದೆ. ಪೇಸ್ ತವರಿನಲ್ಲಿ ಆಡುತ್ತಿರುವ ಕೊನೆಯ ಟೂರ್ನಿ ಇದಾಗಿದೆ. ಪ್ರಮುಖ ಸುತ್ತಿಗೆ ಭಾರತದ 6 ಟೆನಿಸಿಗರಿಗೆ ನೇರ ಪ್ರವೇಶ ನೀಡಲಾಗಿದೆ. ವಿಶ್ವ ರ್ಯಾಂಕಿಂಗ್ನಲ್ಲಿ 200ರೊಳಗಿರುವ 21 ಆಟಗಾರರು ಸೇರಿದಂತೆ 40 ಟೆನಿಸಿಗರು ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು ಓಪನ್ ಆಡಲಿದ್ದಾರೆ ಲಿಯಾಂಡರ್ ಪೇಸ್
ಭಾರತದ ಅಗ್ರ ಟೆನಿಸಿಗರು ಕಣಕ್ಕೆ: ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್, ಹಾಲಿ ಚಾಂಪಿಯನ್ ಪ್ರಜ್ನೇಶ್ ಗುಣೇಶ್ವರನ್, 2017ರ ಚಾಂಪಿಯನ್ ಸುಮಿತ್ ನಗಾಲ್, ಸಸಿಕುಮಾರ್ ಮುಕುಂದ್, ಅರ್ಜುನ್ ಖಾಡೆ, ಸಾಕೇತ್ ಮೈನೇನಿ, ನಿಕಿ ಪೂಣಚ್ಚ, ಆದಿಲ್ ಕಲ್ಯಾಣ್ಪುರ್, ಕರ್ನಾಟಕದ ಸೂರಜ್ ಪ್ರಬೋದ್, ಪ್ರಜ್ವಲ್ ದೇವ್, ಸಿದ್ಧಾರ್ಥ್ ರಾವತ್ ಕಣಕ್ಕಿಳಿಯಲಿರುವ ಭಾರತದ ಪ್ರಮುಖರು. ಪ್ರಜ್ನೇಶ್ ಹಾಗೂ ಸುಮಿತ್ ನಗಾಲ್ ಮೊದಲ ಸುತ್ತಲ್ಲಿ ಬೈ ಪಡೆದಿದ್ದಾರೆ.
ಉಚಿತ ಪ್ರವೇಶ:
ವಾರದ 5 ದಿನ ಟೆನಿಸ್ ಪಂದ್ಯಗಳ ವೀಕ್ಷಣೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಶನಿವಾರ ಹಾಗೂ ಭಾನುವಾರ ಪಂದ್ಯ ವೀಕ್ಷಣೆಗಾಗಿ ಪ್ರೇಕ್ಷಕರು ಟಿಕೆಟ್ಗಳನ್ನು ಖರೀದಿಸಬೇಕು. 100 ರಿಂದ 300 ರುಪಾಯಿವರೆಗೆ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.