
ಕೋಲ್ಕತಾ(ಫೆ.08): ಭಾರತ ಡೇವಿಸ್ ಕಪ್ ತಂಡದ ಮಾಜಿ ಕೋಚ್ ಅಖ್ತರ್ ಅಲಿ ಭಾನುವಾರ ದೀರ್ಘಕಾಲದ ಅನಾರೋಗ್ಯದ ಕಾರಣ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
1958ರಿಂದ 1964ರ ವರೆಗೆ 8 ಡೇವಿಸ್ ಕಪ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸುವ ಜೊತೆ ಕೋಚ್ ಸಹ ಆಗಿದ್ದರು. 1955ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿಯೇ ಅಖ್ತರ್ ಅಲಿ ಜೂನಿಯರ್ ನ್ಯಾಷನಲ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದ್ದರು. ವಿಂಬಲ್ಡನ್ ಹಾಗೂ ಫ್ರೆಂಚ್ ಓಪನ್ನಲ್ಲೂ ಆಡಿದ್ದ ಅಖ್ತರ್ಗೆ 2000ರಲ್ಲಿ ಅರ್ಜುನ ಪ್ರಶಸ್ತಿ ದೊರೆತಿತ್ತು. ಅವರ ಪುತ್ರ ಝೀಶಾನ್ ಅಲಿ, ಭಾರತ ಡೇವಿಸ್ ಕಪ್ ತಂಡದ ಹಾಲಿ ಕೋಚ್ ಆಗಿದ್ದಾರೆ.
ಸಚಿನ್ ಭಾರತ ರತ್ನಕ್ಕೆ ಅರ್ಹರಲ್ಲ, ಪವಾರ್ ಬಳಿಕ ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ನಾಯಕ!
ಕಳೆದ ರಾತ್ರಿ ತಂದೆ ಊಟ ಮಾಡಿ ಮಲಗಿದ್ದರು. ನಾನು ರಾತ್ರಿ 2 ಗಂಟೆ ಸುಮಾರಿಗೆ ತಂದೆ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು. 2.30ರ ಹೊತ್ತಿಗಾಗಲೇ ನೋಡನೋಡುತ್ತಿದ್ದಂತೆ ಕೊನೆಯುಸಿರೆಳೆದರು ಎಂದು ಅಖ್ತರ್ ಅಲಿ ಸಹೋದರಿ ನಿಲೋಫರ್ ತಿಳಿಸಿದ್ದಾರೆ.
ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ವಿಜಯ್ ಅಮೃತ್ರಾಜ್, ಸಾನಿಯಾ ಮಿರ್ಜಾ ಸೇರಿದಂತೆ ಭಾರತದ ಅನೇಕ ಟೆನಿಸಿಗರಿಗೆ ಅಖ್ತರ್ ಮಾರ್ಗದರ್ಶನ ನೀಡಿದ್ದರು. ಅಖ್ತರ್ ಅಲಿ ನಿಧನಕ್ಕೆ ಕ್ರೀಡಾದಿಗ್ಗಜರು ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿ ಮಿಡಿದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.