
ನವದೆಹಲಿ(ಡಿ.17): ವಿವಾದಾತ್ಮಕ ಇಸ್ಲಾಂ ಪ್ರವಚನಕಾರ ಝಾಕಿರ್ ನಾಯ್ಕ್ ವಿರುದ್ಧ ಹೊರಡಿಸಲಾದ ರೆಡ್ ಕಾರ್ನರ್ ನೋಟಿಸನ್ನು ಇಂಟರ್'ಪೋಲ್ ರದ್ದುಗೊಳಿಸಿದೆ. ಇದರಿಂದ ವಿದೇಶದಲ್ಲಿರುವ ಆತನನ್ನು ದೇಶಕ್ಕೆ ಕರೆತರುವ ಭಾರತ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ.
ಅ.24ರಿಂದ 27ರವರೆಗೆ ನಡೆದ ಇಂಟರ್'ಪೋಲ್ ಸಭೆಯಲ್ಲೇ ಈ ನಿರ್ಣಯ ಕೈಗೊಳ್ಳಲಾಗಿದೆ. ನಾಯ್ಕ್ ವಿರುದ್ಧ ಹೊರಡಿಸಿದ್ದ ನೋಟಿಸನ್ನು ನ.9ರಂದೇ ಅದು ತನ್ನ ದತ್ತಾಂಶದಿಂದ ತೆಗೆದು ಹಾಕಿದ್ದು, ತಿಳಿದು ಬಂದಿದೆ.
ಝಾಕಿರ್ ನಾಯ್ಕ್'ನ ಲಂಡನ್ ಮೂಲದ ವಕೀಲರಿಗೆ ಈ ಬಗ್ಗೆ ಖುದ್ದು ಇಂಟರ್'ಪೋಲ್ ಡಿ.11ರಂದು ಮಾಹಿತಿ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.