
ನವದೆಹಲಿ (ಅ.24): ಟ್ವಿಟರ್ ನಲ್ಲಿ ಸದಾ ಬೇರೆಯವರ ಕಾಲೆಳೆಯುತ್ತಾ, ಎಲ್ಲಾ ಪಕ್ಷಗಳ ಮೇಲೆ ಒಂದಿಲ್ಲೊಂದು ಆರೋಪ ಮಾಡುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇದೀಗ ಕಾಂಗ್ರೆಸ್ ಮುಖಂಡ ಅಮರಿಂದರ್ ಸಿಂಗ್ ಒಡ್ಡಿದ ಮುಕ್ತ ಚರ್ಚಾ ಸವಾಲಿಗೆ ಒಪ್ಪಿಕೊಂಡಿದ್ದಾರೆ.
ಕೇವಲ ಆರೋಪ ಮಾಡುವ ಬದಲು ನೇರಾನೇರಾ ಚರ್ಚೆ ಮಾಡೋಣ ಬನ್ನಿ ಎನ್ನುವ ಅಮರಿಂದರ್ ಸವಾಲಿಗೆ ಕೇಜ್ರಿ ಒಪ್ಪಿಕೊಂಡಿದ್ದಾರೆ. ಸಮಯ, ಸ್ಥಳ ನಿಗದಿಪಡಿಸಿ ನಾವು ಸಿದ್ಧರಿದ್ದೇವೆ ಎಂದಿದ್ದು ಚರ್ಚೆಗೆ ಎಎಪಿಯ ನಾಲ್ವರನ್ನು ಸಲಹೆ ಮಾಡಿದ್ದಾರೆ.
ಇವರಿಬ್ಬರ ಈ ಸವಾಲು-ಜವಾಬು ರಾಜಕೀಯಾಸಕ್ತರಿಗೆ ಕುತೂಹಲ ಕೆರಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.