
ನವದೆಹಲಿ (ಏ.20): ಯಮುನಾ ನದಿ ತಟದಲ್ಲಿ ಕಳೆದ ವರ್ಷ 3 ದಿನಗಳ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಿ ಪರಿಸರವನ್ನು ಕಲುಷಿತಗೊಳಿಸಲಾಗಿದೆ ಎಂದು ಹಸಿರು ನ್ಯಾಯಾಧೀಕರಣವು ಶ್ರೀಶ್ರೀ ರವಿಶಂಕರ್ ಗುರೂಜಿಯನ್ನು ತರಾಟೆಗೆ ತೆಗೆದುಕೊಂಡಿರುವುದಾಗಿ ಎನ್'ಡಿಟಿವಿ ವರದಿ ಮಾಡಿದೆ.
ದೆಹಲಿಯಲ್ಲಿ ಕಳೆದ ವರ್ಷ ಯಮುನಾ ನದಿ ತಟದಲ್ಲಿ ಆಯೋಜಿಸಿದ್ದ 3 ದಿನಗಳ ಜಾಗತಿಕ ಸಾಂಸ್ಕೃತಿಕ ಉತ್ಸವದಿಂದ ಪರಿಸರ ಹಾಳಾಗಿದ್ದರೆ ಅದಕ್ಕೆ ಸರ್ಕಾರ ಮತ್ತು ಕೋರ್ಟ್ ಹೊಣೆ ಯಾಕೆಂದರೆ ಅವರೇ ನಮಗೆ ಅವಕಾಶ ನೀಡಿದ್ದು. ಹೀಗಾಗಿ ಅವರನ್ನು ಪ್ರಶ್ನಿಸಿ ಎಂದು ರವಿಶಂಕರ್ ಗುರೂಜಿ ನಿನ್ನೆ ಹೇಳಿದ್ದರು. ಇದಕ್ಕೆ ಕೋಪೋದ್ರಿಕ್ತವಾದ ಕೋರ್ಟ್, ನಿಮಗೆ ಜವಾಬ್ದಾರಿಯಿಲ್ಲ. ನಿಮಗೆ ಬೇಕೆನಿಸಿದ್ದನ್ನು ಹೇಳುವ ಸ್ವಾತಂತ್ರ್ಯ ನಿಮಗಿದೆ ಎಂದು ಭಾವಿಸಿದ್ದೀರಾ? ಎಂದು ಕೋರ್ಟ್ ಶ್ರೀಶ್ರೀಗಳಿಗೆ ಕೇಳಿದೆ.
ಒಂದುವೇಳೆ ದಂಡವನ್ನು ವಿಧಿಸುವುದಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಎನ್ ಜಿಟಿ ಮೇಲೆ ವಿಧಿಸಬೇಕು. ಯಾಕೆಂದರೆ ಅವರು ನಮಗೆ ಅನುಮತಿ ನೀಡಿದ್ದು. ಒಂದು ವೇಳೆ ಯಮುನಾ ನದಿ ತೀರ ಕಲುಷಿತಗೊಂಡಿದ್ದರೆ ಅವರು ಅವಕಾಶ ನೀಡಬಾರದಿತ್ತು ಎಂದು ಗುರೂಜಿ ಹೇಳಿದ್ದಾರೆ.
ಮುಂದಿನ ವಿಚಾರಣೆ ಮೇ 7 ರಂದು ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.