ಇಸ್ಲಾಂಗೆ ಮತಾಂತರವಾಗದಿದ್ದರೆ 6 ತಿಂಗಳಲ್ಲಿ ಕೈ-ಕಾಲು ಕತ್ತರಿಸುವುದಾಗಿ ಲೇಖಕನಿಗೆ ಬೆದರಿಕೆ!

Published : Jul 23, 2017, 12:02 AM ISTUpdated : Apr 11, 2018, 12:42 PM IST
ಇಸ್ಲಾಂಗೆ ಮತಾಂತರವಾಗದಿದ್ದರೆ 6 ತಿಂಗಳಲ್ಲಿ ಕೈ-ಕಾಲು ಕತ್ತರಿಸುವುದಾಗಿ ಲೇಖಕನಿಗೆ ಬೆದರಿಕೆ!

ಸಾರಾಂಶ

ಇಂಥ ಬರವಣಿಗೆಗಳು ಅಮಾಯಕ ಮುಸ್ಲಿಮರನ್ನು ತಪ್ಪು ದಾರಿಗೆ ಎಳೆಯುತ್ತವೆ. ಕಾಫಿರರು ಮತ್ತು ನಾಸ್ತಿಕರಿಗೆ ಇಸ್ಲಾಂಗೆ ಮತಾಂತರವಾಗಲು 6 ತಿಂಗಳ ಗಡುವು ನೀಡಲಾಗುತ್ತದೆ. ಅಷ್ಟೊರಳಗೆ ಮತಾಂತರವಾಗದವರನ್ನು ಹತ್ಯೆ ಮಾಡಲೇಬೇಕು ಎಂಬುದಾಗಿ ಉಲ್ಲೇಖಿಸಲಾಗಿದೆ’

ತಿರುವನಂತಪುರ(ಜು.23): ಮುಂದಿನ 6 ತಿಂಗಳಲ್ಲಿ ಇಸ್ಲಾಂಗೆ ಮತಾಂತರವಾಗದಿದ್ದರೆ ಬಲಗೈ ಮತ್ತು ಎಡಗಾಲನ್ನು ಕತ್ತರಿಸಿ ಹಾಕುವುದಾಗಿ ಅನಾಮಧೇಯ ಪತ್ರದ ಮೂಲಕ ಮಲಯಾಳಂನ ಖ್ಯಾತ ಲೇಖಕ ಕೆ.ಪಿ.ರಾಮನುಣ್ಣಿ ಅವರಿಗೆ ಬೆದರಿಕೆ ಹಾಕಲಾಗಿದೆ.

6 ದಿನಗಳ ಹಿಂದಷ್ಟೇ ತಮಗೆ ತಲುಪಿರುವ ಅನಾಮಧೇಯ ಪತ್ರದಲ್ಲಿ ‘ನೀವು ಹಿಂದೂ ಮತ್ತು ಮುಸ್ಲಿಂ ಧರ್ಮಗಳ ನಡುವೆ ಯಾವುದೇ ಭಿನ್ನತೆಯನ್ನು ಕಾಣದೇ ಸರಿ-ಸಮಾನ ಎಂದು ಪ್ರತಿಪಾದಿಸಿದ್ದೀರಿ. ಇಂಥ ಬರವಣಿಗೆಗಳು ಅಮಾಯಕ ಮುಸ್ಲಿಮರನ್ನು ತಪ್ಪು ದಾರಿಗೆ ಎಳೆಯುತ್ತವೆ. ಕಾಫಿರರು ಮತ್ತು ನಾಸ್ತಿಕರಿಗೆ ಇಸ್ಲಾಂಗೆ ಮತಾಂತರವಾಗಲು 6 ತಿಂಗಳ ಗಡುವು ನೀಡಲಾಗುತ್ತದೆ. ಅಷ್ಟೊರಳಗೆ ಮತಾಂತರವಾಗದವರನ್ನು ಹತ್ಯೆ ಮಾಡಲೇಬೇಕು ಎಂಬುದಾಗಿ ಉಲ್ಲೇಖಿಸಲಾಗಿದೆ’ ಎಂದು ಲೇಖಕ ಕೆ.ಪಿ.ರಾಮನುಣ್ಣಿ ಹೇಳಿದ್ದಾರೆ.

ಈ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದ್ದು, ಸ್ವತಂತ್ರ ಮತ್ತು ಪ್ರಗತಿಪರ ಚಿಂತನೆಗಳನ್ನು ಹೊಂದಿದವರ ಮೇಲೆ ಇಂಥ ಭೀತಿಗಳನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದಿದ್ದಾರೆ. ಮಜ್ಲಿಸ್ ಪಕ್ಷದ ಮುಖಂಡ ಅಸಾದುದ್ದೀನ್ ಒವೈಸಿ ಕೂಡ ಈ ಬೆದರಿಕೆಯನ್ನು ಖಂಡಿಸಿದ್ದು, ಬೆದರಿಕೆ ಹಾಕಿದವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಿಎಫ್ ಹಣ ಹಿಂಪಡೆಯುವ ನೀತಿಯಲ್ಲಿ 11 ಬದಲಾವಣೆ, EPFO 3.0 ನಿಯಮ ಜಾರಿ
ಕ್ರಿಸ್ಮಸ್ ಹಬ್ಬಕ್ಕೆ ಭಾರತದ ಹಲವು ನಗರದಲ್ಲಿ ಡ್ರೈ ಡೇ; ಮದ್ಯದಂಗಡಿ, ಬಾರ್ ತೆರೆದಿರುತ್ತಾ?