
ನವದೆಹಲಿ : ಸುಪ್ರೀಂಕೋರ್ಟ್ ಆಧಾರ್ ಸಂಬಂಧ ಮಹತ್ವದ ತೀರ್ಪನ್ನು ನೀಡಿದೆ.
ಪ್ರತೀ ಭಾರತೀಯನಿಗೂ 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಮಹತ್ವಾಕಾಂಕ್ಷಿ ಯೋಜನೆ ಆಧಾರ್ ನ ಸಾಂವಿಧಾನಿಕ ಸಂಧುತ್ವವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ಸಕಲ ಸೇವೆಗಳಿಗೂ ಕೂಡ ಆಧಾರ್ ಕಡ್ಡಾಯಗೊಳಿಸುವುದಕ್ಕೆ ಕಡಿವಾಣ ಹಾಕಿದೆ.
ಸರ್ಕಾರಿ ಸೇವೆಗೆ ಮಾತ್ರ ಆಧಾರ್ ಸಂಖ್ಯೆ ಕಡ್ಡಾಯವಾಗಿದ್ದು, ಬ್ಯಾಂಕ್, ಫೋನ್ ನಂಭರ್, ಖಾಸಗಿ ಕಂಪನಿಗಳಿಗೆ, ವಿವಿಧ ಪರೀಕ್ಷಗೆಳಿಗೆ ಕಡ್ಡಾಯವಲ್ಲ ಎಂದು ಹೇಳಿದೆ. ಈ ನಿಟ್ಟಿನಲ್ಲಿ ನೀವು ಈ ಎಲ್ಲಾ ಈಗಾಗಲೇ ಆಧಾರ್ ಸಂಖ್ಯೆಯನ್ನು ನೀಡಿದ್ದಲ್ಲಿ ಅದನ್ನು ವಾಪಸ್ ನೀಡುವಂತೆ ಅಥವಾ ಅಲ್ಲಿಂದ ಡಿಲೀಟ್ ಮಾಡುವಂತೆ ನೀವೂ ಕೇಳಬಹುದಾಗಿದೆ.
ಆಧಾರ್ ಬದಲಾಗಿ ನೀವು ಇತರೆ ದಾಖಲೆಗಳಾದ ಪಾಸ್ಪೋರ್ಟ್, ವೋಟರ್ ಐಟಿ, ಬ್ಯಾಂಕ್ ಸ್ಟೇಟ್ ಮೆಂಟ್ ಗಳನ್ನು ನೀಡಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.