ಬೆಂಗಳೂರಿನ ರಾಮ ವಿಗ್ರಹ ಅಯೋಧ್ಯೆಯಲ್ಲಿ ಅನಾವರಣ!

Published : Jun 08, 2019, 09:30 AM IST
ಬೆಂಗಳೂರಿನ ರಾಮ ವಿಗ್ರಹ ಅಯೋಧ್ಯೆಯಲ್ಲಿ ಅನಾವರಣ!

ಸಾರಾಂಶ

ಬೆಂಗಳೂರಿನ ಶ್ರೀರಾಮ ಮೂರ್ತಿ ಅಯೋಧ್ಯೆಯಲ್ಲಿ ಅನಾವರಣ| ಅಯೋಧ್ಯಾ ಸಂಶೋಧನಾ ಸಂಸ್ಥೆಯಲ್ಲಿ ಪ್ರತಿಷ್ಠಾಪನೆ| ಸಿಎಂ ಯೋಗಿ ಆದಿತ್ಯನಾಥ್‌ರಿಂದ ಲೋಕಾರ್ಪಣೆ| ಕಾವೇರಿ ಎಂಪೋರಿಯಂನಲ್ಲಿ ಖರೀದಿಸಲಾದ ವಿಗ್ರಹ

ಅಯೋಧ್ಯೆ[ಜೂ.08]: ಬೆಂಗಳೂರಿನಲ್ಲಿರುವ ಸರ್ಕಾರಿ ಸ್ವಾಮ್ಯದ ಕಾವೇರಿ ಎಂಪೋರಿಯಂನಲ್ಲಿ ಖರೀದಿಸಲಾದ ಶ್ರೀರಾಮ ಚಂದ್ರನ ವಿಗ್ರಹವನ್ನು ಅಯೋಧ್ಯೆ ಸಂಶೋಧನಾ ಸಂಸ್ಥೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಶುಕ್ರವಾರ ಅನಾವರಣಗೊಳಿಸಿದ್ದಾರೆ.

35 ಲಕ್ಷ ರು. ಮೌಲ್ಯದ ಈ ವಿಗ್ರಹ 7 ಅಡಿ ಎತ್ತರವಿದೆ. ತೇಗದ ಮರದಲ್ಲಿ ಕೆತ್ತಲಾಗಿದೆ. ರಾವಣನನ್ನು ಕೊಲ್ಲಲು ಬಳಸಿದ್ದ ಕೋದಂಡ ಬಿಲ್ಲನ್ನು ಶ್ರೀರಾಮ ಹಿಡಿದು ನಿಂತಿರುವ ಭಂಗಿಯ ಮೂರ್ತಿ ಇದಾಗಿದೆ.

ಬೆಂಗಳೂರಿನ ಕಾವೇರಿ ಎಂಪೋರಿಯಂನಲ್ಲಿ ಈ ಭಂಗಿಯ ಮೂರ್ತಿ ನೋಡಿದ್ದೆವು. ಅದೇ ರೀತಿಯ ಮೂರ್ತಿ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದೆವು. ಮೂರು ವರ್ಷಗಳ ಬಳಿಕ ಈ ಮೂರ್ತಿ ಸಿದ್ಧವಾಗಿದೆ ಎಂದು ಅಯೋಧ್ಯೆ ಸಂಶೋಧನಾ ಸಂಸ್ಥೆಯ ಆಡಳಿತಾಧಿಕಾರಿ ರಾಮ ತೀರಥ್‌ ಅವರು ತಿಳಿಸಿದ್ದಾರೆ. ರಾಷ್ಟ್ರಪತಿಗಳಿಂದ ಪ್ರಶಸ್ತಿ ಪುರಸ್ಕೃತ ಎಚ್‌. ಮೂರ್ತಿ ಅವರು ಈ ಮೂರ್ತಿಯನ್ನು ಕೆತ್ತಿಕೊಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್