ಅಪವಿತ್ರ’ಮರ ಕತ್ತರಿಸಲು ಸಿಎಂ ಯೋಗಿ ಸೂಚನೆ

Published : Jul 01, 2017, 11:54 PM ISTUpdated : Apr 11, 2018, 12:55 PM IST
ಅಪವಿತ್ರ’ಮರ ಕತ್ತರಿಸಲು ಸಿಎಂ ಯೋಗಿ ಸೂಚನೆ

ಸಾರಾಂಶ

ಅಲ್ಲದೆ ಯಾತ್ರೆಯ ಸಂದರ್ಭ ಕನ್ವರಿಯಾಗಳು ಕೇವಲ ಭಜನೆಗಳನ್ನು ಮಾತ್ರ ಹಾಡಬೇಕು ಮತ್ತು ಅಶ್ಲೀಲ ಪದಗಳನ್ನು ಹಾಡುವುದಕ್ಕೆ ಅವಕಾಶ ನೀಡದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸಿಎಂ ಯೋಗಿ ನಿರ್ದೇಶಿಸಿದ್ದಾರೆ.

ನವದೆಹಲಿ(ಜು.02): ‘ಕನ್ವರ್ ಯಾತ್ರೆ’ಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಯಾತ್ರಾರ್ಥಿಗಳು ಅಪವಿತ್ರವೆಂದು ಭಾವಿಸುವ ಅತ್ತಿ ಹಣ್ಣಿನ ಮರಗಳನ್ನು ಕತ್ತರಿಸಲು ಆದೇಶಿಸಿದ್ದಾರೆ. ಅಲ್ಲದೆ ಯಾತ್ರೆಯ ಸಂದರ್ಭ ಕನ್ವರಿಯಾಗಳು ಕೇವಲ ಭಜನೆಗಳನ್ನು ಮಾತ್ರ ಹಾಡಬೇಕು ಮತ್ತು ಅಶ್ಲೀಲ ಪದಗಳನ್ನು ಹಾಡುವುದಕ್ಕೆ ಅವಕಾಶ ನೀಡದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸಿಎಂ ಯೋಗಿ ನಿರ್ದೇಶಿಸಿದ್ದಾರೆ. ಜೋರಾದ ಮತ್ತು ಪ್ರಚೋದನಾತ್ಮಕ ಡಿಜೆಗಳಿಂದಾಗಿ ಸಮಸ್ಯೆಗಳಾಗುತ್ತಿದ್ದವು, ಈ ಬಾರಿ ಡಿಜೆಗಳಿಗೆ ಅವಕಾಶ ನೀಡದಂತೆ ಅಥವಾ ಉತ್ತೇಜನ ನೀಡದಂತೆ ಸೂಚಿಸಲಾಗಿದೆ. ಜು. ೮ರಂದು ಆರಂಭವಾಗಲಿರುವ ವಾರ್ಷಿಕ ಯಾತ್ರೆಯ ತಯಾರಿ ಬಗ್ಗೆ ಸಿಎಂ ಯೋಗಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ಇದೇ ಮೊದಲ ಬಾರಿ ಸ್ವತಃ ಸಿಎಂ ಯಾತ್ರೆಯ ವ್ಯವಸ್ಥೆಗಳ ಅವಲೋಕನ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಸ್ಸಿ ಕಿಕ್ ಮಾಡಿದ ಚೆಂಡಿಗಾಗಿ ಕಿತ್ತಾಡಿದ ಅಭಿಮಾನಿಗಳು: ವೀಡಿಯೋ ಭಾರಿ ವೈರಲ್
ಕರ್ನಾಟಕಕ್ಕೆ ಮಹಾತ್ಮ ಗಾಂಧಿ ನರೇಗಾ ಯೋಜನೆ 5 ಕೋಟಿ ಮಾನವ ದಿನ ಕಡಿತ; ಪ್ರಿಯಾಂಕ್ ಖರ್ಗೆ ಆರೋಪ