
ಬೆಂಗಳೂರು, [ಆ.01]: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಆಗಿದ್ದು, ಬರೋಬ್ಬರಿ 11 ಮಂದಿ ಐಪಿಎಸ್ ಅಧಿಕಾರಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹಿಂದು ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಕೇಸ್ ವಾಪಸ್ ಪಡೆದ BSY ಸರ್ಕಾರ
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳತ್ತ ಚಿತ್ತ ಹರಿಸಿದ್ದ ಯಡಿಯೂರಪ್ಪನವರು, ಗುರುವಾರ ಬೆಳಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ಅವರು ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದರು.
ಆದ್ರೆ ಸಂಜೆ ವೇಳೆಗೆ ರಾಜ್ಯ ಸರ್ಕಾರ 11 ಐಪಿಎಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಿರುವುದು ಭಾರೀ ಕುತೂಹಲ ಮೂಡಿಸಿದೆ.ಯಡಿಯೂರಪ್ಪ ಸಿಎಂ ಆದ ಮೇಲೆ ಇದು ಮೊದಲ ವರ್ಗಾವಣೆಯಾಗಿದೆ.
11 IPS ಅಧಿಕಾರಿಗಳ ವರ್ಗಾವಣೆ ಪಟ್ಟಿ ಇಂತಿದೆ
* ಅಮರ್ ಕುಮಾರ್ ಪಾಂಡೆ - ಎಡಿಜಿಪಿ, ಕಾನೂನು ಸುವ್ಯವಸ್ಥೆ
* ಕಮಲ್ ಪಂತ್ - ಎಡಿಜಿಪಿ, ಗುಪ್ತಚರ ಇಲಾಖೆ
* ಬಿ.ದಯಾನಂದ್ - ಐಜಿಪಿ, ಕೆಎಸ್ಆರ್ಪಿ
* ಎಂ.ಚಂದ್ರಶೇಖರ್ - ಐಜಿಪಿ, ಎಸಿಬಿ
* ಸುಬ್ರಹ್ಮಣ್ಯೇಶ್ವರ ರಾವ್ - ಮಂಗಳೂರು ಪೊಲೀಸ್ ಆಯುಕ್ತ
* ಸಂದೀಪ್ ಪಾಟೀಲ್ - ಜಂಟಿ ಪೊಲೀಸ್ ಆಯುಕ್ತ, ಸಿಸಿಬಿ, ಬೆಂಗಳೂರು
* ಸಿದ್ದರಾಮಪ್ಪ - ಆಯುಕ್ತರು, ಮಾಹಿತಿ & ಸಾರ್ವಜನಿಕ ಸಂಪರ್ಕ ವಿಭಾಗ
* ಚೇತನ್ ಸಿಂಗ್ ರಾಥೋಡ್ - ಡಿಸಿಪಿ, ಬೆಂಗಳೂರು ಕೇಂದ್ರ ವಿಭಾಗ
* ಕೆ.ಎಂ.ಶಾಂತರಾಜು - ಎಸ್ಪಿ, ಶಿವಮೊಗ್ಗ ಜಿಲ್ಲೆ
*ಹನುಮಂತರಾಯ - ಎಸ್ಪಿ, ದಾವಣಗೆರೆ ಜಿಲ್ಲೆ
* ಅನೂಪ್ ಶೆಟ್ಟಿ - ಎಸ್ಪಿ, ರಾಮನಗರ
* ಇತ್ತೀಚೆಗೆ ಸಿಸಿಬಿಗೆ ವರ್ಗಾವಣೆಯಾಗಿದ್ದ ರವಿಕಾಂತೇಗೌಡ ಎತ್ತಂಗಡಿ
* ಬೆಂಗಳೂರು ಕೇಂದ್ರ ವಿಭಾಗದ ದೇವರಾಜ್ ವರ್ಗಾವಣೆ
* ರವಿಕಾಂತೇಗೌಡ, ದೇವರಾಜ್ ಅವರಿಗೆ ಹುದ್ದೆ ತೋರಿಸದ ಸರ್ಕಾರ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.