ಮೈಸೂರು ಅರಮನೆಗೆ ಆಗಮಿಸಿದ ಯದುವಂಶದ ಕುಡಿ

By Suvarna Web DeskFirst Published Mar 2, 2018, 12:48 PM IST
Highlights

ಯದುವಂಶದ ಕುಡಿ ಮೈಸೂರಿನ ಮಹಾರಾಜ ಯದುವೀರ್-ತ್ರಿಷಿಕಾ ದಂಪತಿ ಪುತ್ರ ಆದ್ಯವೀರ್’ನನ್ನು ಇಂದು ತಂದೆಯ ಮನೆಗೆ ಕರೆತರಲಾಗಿದೆ. ಮಗನನ್ನು ದಂಪತಿ ಇಂದು ಮೈಸೂರಿಗೆ ಕರೆತಂದಿದ್ದಾರೆ. ಆರತಿ ಮಾಡಿ ಇಳಿ ತೆಗೆದು ಮಗುವನ್ನು ಅರಮನೆಗೆ ಬರಮಾಡಿಕೊಳ್ಳಲಾಗಿದೆ.

ಮೈಸೂರು : ಯದುವಂಶದ ಕುಡಿ ಮೈಸೂರಿನ ಮಹಾರಾಜ ಯದುವೀರ್-ತ್ರಿಷಿಕಾ ದಂಪತಿ ಪುತ್ರ ಆದ್ಯವೀರ್’ನನ್ನು ಇಂದು ತಂದೆಯ ಮನೆಗೆ ಕರೆತರಲಾಗಿದೆ. ಮಗನನ್ನು ದಂಪತಿ ಇಂದು ಮೈಸೂರಿಗೆ ಕರೆತಂದಿದ್ದಾರೆ. ಆರತಿ ಮಾಡಿ ಇಳಿ ತೆಗೆದು ಮಗುವನ್ನು ಅರಮನೆಗೆ ಬರಮಾಡಿಕೊಳ್ಳಲಾಗಿದೆ.

ಬೆಂಗಳೂರಿನಲ್ಲಿ ಮಗುವಿನ ನಾಮಕರಣವನ್ನು ನೆರವೇರಿಸಿದ್ದು, ಈ ಬಗ್ಗೆ ಮಾತನಾಡಿದ ಯದುವೀರ್ ಒಡೆಯರ್ ನಮ್ಮ ಅನುಕೂಲಕ್ಕಾಗಿ ಬೆಂಗಳೂರಲ್ಲಿ ನಾಮಕರಣ ಮಾಡಿಲಾಗಿದೆ ಅಷ್ಟೆ. ಅದನ್ನು ಹೊರತು ಪಡಿಸಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಹೇಳಿದ್ದಾರೆ. ಇನ್ನು ಶೀಘ್ರದಲ್ಲೇ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಾಗುವುದು ಎಂದರು.

ಇನ್ನು ಮಗುವಿಗೆ ಆದ್ಯವೀರ್ ಎಂದು ಹೆಸರಿಡಲಾಗಿದ್ದು, ಈ ಹೆಸರಿನ ಅರ್ಥವನ್ನು ಈ ವೇಳೆ ಯದುವೀರ್ ಒಡೆಯರ್ ತಿಳಿಸಿದ್ದು, ಇದರ ಅರ್ಥ ಚಾಮುಂಡಿ ಅಥವಾ ದುರ್ಗಿ ಎಂದು.  ಮಗುವಿನ ಒಳಿತಿಗಾಗಿ ಈ ಹೆಸರು ಇಡಲಾಗಿದೆ ಮಗ ಆದ್ಯವೀರ್ ಚೆನ್ನಾಗಿದ್ದಾನೆ ಎಂದು ಹೇಳಿದರು.

click me!