ಮೈಸೂರು ಅರಮನೆಗೆ ಆಗಮಿಸಿದ ಯದುವಂಶದ ಕುಡಿ

Published : Mar 02, 2018, 12:48 PM ISTUpdated : Apr 11, 2018, 12:57 PM IST
ಮೈಸೂರು ಅರಮನೆಗೆ ಆಗಮಿಸಿದ ಯದುವಂಶದ ಕುಡಿ

ಸಾರಾಂಶ

ಯದುವಂಶದ ಕುಡಿ ಮೈಸೂರಿನ ಮಹಾರಾಜ ಯದುವೀರ್-ತ್ರಿಷಿಕಾ ದಂಪತಿ ಪುತ್ರ ಆದ್ಯವೀರ್’ನನ್ನು ಇಂದು ತಂದೆಯ ಮನೆಗೆ ಕರೆತರಲಾಗಿದೆ. ಮಗನನ್ನು ದಂಪತಿ ಇಂದು ಮೈಸೂರಿಗೆ ಕರೆತಂದಿದ್ದಾರೆ. ಆರತಿ ಮಾಡಿ ಇಳಿ ತೆಗೆದು ಮಗುವನ್ನು ಅರಮನೆಗೆ ಬರಮಾಡಿಕೊಳ್ಳಲಾಗಿದೆ.

ಮೈಸೂರು : ಯದುವಂಶದ ಕುಡಿ ಮೈಸೂರಿನ ಮಹಾರಾಜ ಯದುವೀರ್-ತ್ರಿಷಿಕಾ ದಂಪತಿ ಪುತ್ರ ಆದ್ಯವೀರ್’ನನ್ನು ಇಂದು ತಂದೆಯ ಮನೆಗೆ ಕರೆತರಲಾಗಿದೆ. ಮಗನನ್ನು ದಂಪತಿ ಇಂದು ಮೈಸೂರಿಗೆ ಕರೆತಂದಿದ್ದಾರೆ. ಆರತಿ ಮಾಡಿ ಇಳಿ ತೆಗೆದು ಮಗುವನ್ನು ಅರಮನೆಗೆ ಬರಮಾಡಿಕೊಳ್ಳಲಾಗಿದೆ.

ಬೆಂಗಳೂರಿನಲ್ಲಿ ಮಗುವಿನ ನಾಮಕರಣವನ್ನು ನೆರವೇರಿಸಿದ್ದು, ಈ ಬಗ್ಗೆ ಮಾತನಾಡಿದ ಯದುವೀರ್ ಒಡೆಯರ್ ನಮ್ಮ ಅನುಕೂಲಕ್ಕಾಗಿ ಬೆಂಗಳೂರಲ್ಲಿ ನಾಮಕರಣ ಮಾಡಿಲಾಗಿದೆ ಅಷ್ಟೆ. ಅದನ್ನು ಹೊರತು ಪಡಿಸಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಹೇಳಿದ್ದಾರೆ. ಇನ್ನು ಶೀಘ್ರದಲ್ಲೇ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಾಗುವುದು ಎಂದರು.

ಇನ್ನು ಮಗುವಿಗೆ ಆದ್ಯವೀರ್ ಎಂದು ಹೆಸರಿಡಲಾಗಿದ್ದು, ಈ ಹೆಸರಿನ ಅರ್ಥವನ್ನು ಈ ವೇಳೆ ಯದುವೀರ್ ಒಡೆಯರ್ ತಿಳಿಸಿದ್ದು, ಇದರ ಅರ್ಥ ಚಾಮುಂಡಿ ಅಥವಾ ದುರ್ಗಿ ಎಂದು.  ಮಗುವಿನ ಒಳಿತಿಗಾಗಿ ಈ ಹೆಸರು ಇಡಲಾಗಿದೆ ಮಗ ಆದ್ಯವೀರ್ ಚೆನ್ನಾಗಿದ್ದಾನೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆಲ್ಮೆಟ್ ಇಲ್ಲದ ಬೈಕ್ ಸವಾರನ ಹಿಡಿದ ಪೊಲೀಸ್, ಒಂದೇ ಮಾತಿಗೆ ದಂಡ ವಿಧಿಸದೆ ಬಿಟ್ಟುಕಳುಹಿಸಿದ್ರು
ಗ್ರೀನ್ ಕಾರ್ಡ್ ಸಂದರ್ಶನದ ವೇಳೆ 30 ವರ್ಷಗಳಿಂದ ಅಮೆರಿಕಾದಲ್ಲಿ ವಾಸವಿದ್ದ ಭಾರತೀಯ ಮಹಿಳೆಯ ಬಂಧನ