ಇಂದು ಸಿಎಂ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಲು ಮುಂದಾದ BSY!

By Suvarna Web DeskFirst Published Feb 12, 2017, 5:50 AM IST
Highlights

ಕಾಂಗ್ರೆಸ್​​ ಹೈಕಮಾಂಡ್​​ ವಿರುದ್ಧ ದೇಣಿಗೆ ಬಾಂಬ್​ ಹಾಕಿದ್ದ ಮಾಜಿ ಸಿಎಂ ಯಡಿಯೂರಪ್ಪ ಇವತ್ತು ಮತ್ತೊಂದು ಬಾಂಬ್​ ಸಿಡಿಸೋದಾಗಿ ಹೇಳಿದ್ದಾರೆ.

ಬೆಂಗಳೂರು(ಫೆ.12): ಕಾಂಗ್ರೆಸ್​​ ಹೈಕಮಾಂಡ್​​ ವಿರುದ್ಧ ದೇಣಿಗೆ ಬಾಂಬ್​ ಹಾಕಿದ್ದ ಮಾಜಿ ಸಿಎಂ ಯಡಿಯೂರಪ್ಪ ಇವತ್ತು ಮತ್ತೊಂದು ಬಾಂಬ್​ ಸಿಡಿಸೋದಾಗಿ ಹೇಳಿದ್ದಾರೆ.

ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ದ ಮತ್ತೊಂದು ಬಾಂಬ್ ಸಿಡಿಸುತ್ತೇನೆ ಎಂದು  ಹೇಳಿದ್ದಾರೆ. ಸರ್ಕಾರದ ಖಜಾನೆ ಲೂಟಿ  ಮಾಡಿ ಹಗಲು ದರೋಡೆ ಮಾಡಲಾಗುತ್ತಿದ್ದು, ಪ್ರತಿಯೊಬ್ಬ ಸಚಿವರು ಕೋಟಿ ಕೋಟಿ ಸಂಪಾದನೆ ಮಾಡಿದ್ದಾರೆ.

ಈ ಬಗ್ಗೆ ಇವತ್ತು ಇನ್ನೊಂದು ಬಾಂಬ್ ಸಿಡಿಸುತ್ತೇನೆ  ಎಂದು ಬಿಎಸ್ ಯಡಿಯೂರಪ್ಪ ತಿಳಿಸಿದರು. ಸಿಎಂ ಸಿದ್ದರಾಮಯ್ಯ ಸಿಎಂ ಕುರ್ಚಿ ಉಳಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಗೆ ಸಾವಿರಕ್ಕೂ ಹೆಚ್ಚು ಕೋಟಿ ಲಂಚವನ್ನ ನೀಡಿದ್ದಾರೆ ಎಂದು ಆರೋಪಿಸಿದ್ದರು.

click me!