ಇಂದು ವಿಶ್ವ ಆನೆ ದಿನ : ಗಜರಾಜನ ಬಗ್ಗೆ ತಿಳಿದುಕೊಳ್ಳಬೇಕಾದ 6 ಸಂಗತಿಗಳು

Published : Aug 12, 2018, 04:52 PM ISTUpdated : Sep 09, 2018, 08:56 PM IST
ಇಂದು ವಿಶ್ವ ಆನೆ ದಿನ : ಗಜರಾಜನ  ಬಗ್ಗೆ ತಿಳಿದುಕೊಳ್ಳಬೇಕಾದ 6 ಸಂಗತಿಗಳು

ಸಾರಾಂಶ

ಜಗತ್ತಿನಲ್ಲಿ ಬಲಿಷ್ಟ ಪ್ರಾಣಿಯೆಂದರೆ ಆನೆ. ಗಜರಾಜನಷ್ಟು ಶಕ್ತಿಶಾಲಿಯಾದ ಪ್ರಾಣಿ ವನ್ಯಜೀವಿಗಳಲ್ಲಿ ಮತ್ತೊಂದಿಲ್ಲ. ಆದರೆ  ಅರಣ್ಯ ನಾಶ, ದಂತದ ಬೇಡಿಕೆ, ಮಾನವ ಆನೆಯ ಸಂಘರ್ಷಮುಂತಾದ ಕಾರಣಗಳಿಂದಾಗಿ ಆನೆಯ ಸಂತತಿ ವಿಶ್ವದಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅವಸಾನದ ಅಂಚಿನಲ್ಲಿ ಸಾಗುತ್ತಿರುವ ಆನೆಗಳನ್ನು ರಕ್ಷಿಸುವ ಸಲುವಾಗಿ 2011 ರಿಂದ ವಿಶ್ವ ಆನೆ ದಿನವನ್ನು ಪ್ರಾರಂಭಿಸಲಾಯಿತು.

ಜಗತ್ತಿನಲ್ಲಿ ಬಲಿಷ್ಟ ಪ್ರಾಣಿಯೆಂದರೆ ಆನೆ. ಗಜರಾಜನಷ್ಟು ಶಕ್ತಿಶಾಲಿಯಾದ ಪ್ರಾಣಿ ವನ್ಯಜೀವಿಗಳಲ್ಲಿ ಮತ್ತೊಂದಿಲ್ಲ. ಆದರೆ  ಅರಣ್ಯ ನಾಶ, ದಂತದ ಬೇಡಿಕೆ, ಮಾನವ ಆನೆಯ ಸಂಘರ್ಷಮುಂತಾದ ಕಾರಣಗಳಿಂದಾಗಿ ಆನೆಯ ಸಂತತಿ ವಿಶ್ವದಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅವಸಾನದ ಅಂಚಿನಲ್ಲಿ ಸಾಗುತ್ತಿರುವ ಆನೆಗಳನ್ನು ರಕ್ಷಿಸುವ ಸಲುವಾಗಿ 2011 ರಿಂದ ವಿಶ್ವ ಆನೆ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು.


ವಿಶ್ವ ಆನೆ ದಿನದ ಪ್ರಯುಕ್ತ ತಿಳಿದುಕೊಳ್ಳಬೇಕಾದ ಪ್ರಮುಖ 6 ವಿಚಾರಗಳು        

1] ಅವಸಾನದ ಅಂಚಿನಲ್ಲಿರುವ ಆನೆಗಳನ್ನು ರಕ್ಷಿಸುವ ಸಲುವಾಗಿ 2011, ಆಗಸ್ಟ್ 12 ರಿಂದ ವಿಶ್ವ ಆನೆ ದಿನವನ್ನು ಆಚರಿಸಲು ಆರಂಭಿಸಲಾಯಿತು. ಇದಕ್ಕೆ ಪ್ರಮುಖ ಕಾರಣಕರ್ತರು ಕೆನಡಾದ ಚಿತ್ರ ನಿರ್ದೇಶಕರಾದ ಪ್ಯಾಟ್ರೀಷಿಯಾ ಸಿಮ್ಸ್ ಮತ್ತು ಮೈಕಲ್ ಕ್ಲಾರ್ಕ್ ಹಾಗೂ ಥೈಲ್ಯಾಂಡಿನ ಆನೆ ಉಳಿಯುವಿಕೆ  ಪ್ರಧಾನ ಕಾರ್ಯದರ್ಶಿಯಾದ ಶಿವಪೋರ್ನ್ ದರ್ದಾರನಂದ.

2] ಆನೆಯ ಕುರಿತಾಗಿಯೇ  ಮೊದಲ ವಿಶ್ವ ಆನೆ ದಿನಾಚರಣೆಯ ದಿನದಂದು ಹಾಲಿವುಡ್ ನಟ ವಿಲಿಯಂ ಶಟ್ನೇರ್  'ರಿಟರ್ನ್ಸ್ ಟೂ ಫಾರೆಸ್ಟ್' ಎಂಬ ಸಾಕ್ಷಚಿತ್ರ ನಿರ್ಮಿಸಿದ್ದರು.

3] ವಿಶ್ವದ ವಿವಿಧ ದೇಶಗಳಲ್ಲಿರುವ 65 ವನ್ಯಜೀವಿ ಸಂಸ್ಥೆಗಳು ಹಾಗೂ ಲಕ್ಷಾಂತರ ಮಂದಿ ವನ್ಯಜೀವಿ ತಜ್ಞರಿಂದ ಗಜರಾಜನ ದಿನಾಚರಣೆಗೆ ಬೆಂಬಲ ವ್ಯಕ್ತವಾಗಿದೆ.

4] ಭಾರತದಲ್ಲಿ 27312 ಆನೆಗಳಿದ್ದು ಕರ್ನಾಟಕದಲ್ಲಿ ಅತೀ ಹೆಚ್ಚು [6072] ಆನೆಗಳಿದ್ದರೆ 2ನೇ ಸ್ಥಾನದಲ್ಲಿ ಅಸ್ಸಾಂ[5709] ರಾಜ್ಯವಿದೆ.

5] ವಿಶ್ವದಲ್ಲಿ ಇವುಗಳ ಸಂಖ್ಯೆ  8 ಲಕ್ಷಗಳಿದ್ದು, ಆಫ್ರಿಕಾ ಖಂಡದಲ್ಲಿಯೇ 7 ಲಕ್ಷವಿದ್ದರೆ, ಏಷ್ಯಾದಲ್ಲಿ 1 ಲಕ್ಷ ಆನೆಗಳಿವೆ ಎಂದು ಅಂದಾಜಿಸಲಾಗಿದೆ.

6] ಕರ್ನಾಟಕದಲ್ಲಿ ಆನೆಗಳ ಕಾರಿಡಾರ್ ಗಳನ್ನು ರಕ್ಷಿಸಲು ’ಖಾಸಗಿ ರಕ್ಷಿತ ಅರಣ್ಯ'ಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು ಈಬಗ್ಗೆ ಸುಪ್ರೀಂ ಕೋರ್ಟ್'ಗೆ ಮಾಹಿತಿ ನೀಡಿದೆ.

ಇಂಗ್ಲಿಷ್ ನಲ್ಲಿ ಈ ಸುದ್ದಿ ಓದಲು ಕ್ಲಿಕ್ಕಿಸಿ : World Elephant Day: 6 things you must know about this annual event in celebration of the pachyderm

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್