ಸಮರ ಕಣಕ್ಕೆ ಮಹಿಳೆಯರು: ಸೇನೆಯಲ್ಲಿ ಮಹಿಳೆಯರಿಗೂ ಇನ್ನು ಯೋಧರ ಹುದ್ದೆ

Published : Jun 05, 2017, 10:32 AM ISTUpdated : Apr 11, 2018, 01:02 PM IST
ಸಮರ ಕಣಕ್ಕೆ ಮಹಿಳೆಯರು: ಸೇನೆಯಲ್ಲಿ ಮಹಿಳೆಯರಿಗೂ ಇನ್ನು ಯೋಧರ ಹುದ್ದೆ

ಸಾರಾಂಶ

ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರನ್ನು ಸಮರ ಭೂಮಿಗೆ ನಿಯೋಜಿಸಲು ಭಾರತ ಮುಂದಾಗಿದೆ. ತನ್ಮೂಲಕ ಮಹಿಳೆಯರಿಗೆ ಯುದ್ಧ ಭೂಮಿಯಲ್ಲಿ ಶತ್ರುಪಾಳೆಯದ ಜತೆ ಹೋರಾಡುವ ಹೊಣೆ ವಹಿಸಿರುವ ಕೆಲವೇ ದೇಶಗಳ ಸಾಲಿಗೆ ಸೇರ್ಪಡೆಯಾಗಲು ತುದಿಗಾಲಿನಲ್ಲಿ ನಿಂತಿದೆ.

ನವದೆಹಲಿ(ಜೂ.05): ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರನ್ನು ಸಮರ ಭೂಮಿಗೆ ನಿಯೋಜಿಸಲು ಭಾರತ ಮುಂದಾಗಿದೆ. ತನ್ಮೂಲಕ ಮಹಿಳೆಯರಿಗೆ ಯುದ್ಧ ಭೂಮಿಯಲ್ಲಿ ಶತ್ರುಪಾಳೆಯದ ಜತೆ ಹೋರಾಡುವ ಹೊಣೆ ವಹಿಸಿರುವ ಕೆಲವೇ ದೇಶಗಳ ಸಾಲಿಗೆ ಸೇರ್ಪಡೆಯಾಗಲು ತುದಿಗಾಲಿನಲ್ಲಿ ನಿಂತಿದೆ.

ಕಳೆದ ವರ್ಷವಷ್ಟೇ ಭಾರತೀಯ ವಾಯುಪಡೆ ಮೂವರು ಮಹಿಳೆಯರಿಗೆ ಯುದ್ಧ ವಿಮಾನ ಚಾಲನೆ ಹೊಣೆಗಾರಿಕೆ ವಹಿಸುವ ಮೂಲಕ ಹೊಸ ದಾಖಲೆ ಬರೆದಿತ್ತು. ಇದೀಗ ಭೂಸೇನೆ ಕೂಡ ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಸದ್ಯ ಪುರುಷರ ಆಡುಂಬೊಲವಾಗಿರುವ ಸಮರಾಂಗಣದಲ್ಲಿ ಮಹಿಳೆಯರನ್ನು ಯೋಧರನ್ನಾಗಿ ನೇಮಕ ಮಾಡಿಕೊಳ್ಳುವ ಮೂಲಕ ವಿವಿಧ ಜವಾಬ್ದಾರಿ ಹಂಚಲು ಸೇನೆ ನಿರ್ಧರಿಸಿದೆ.

ಮಹಿಳೆಯರನ್ನು ಯೋಧರನ್ನಾಗಿ ನೇಮಕ ಮಾಡಲು ನಾನಂತೂ ರೆಡಿ. ಈ ಬಗ್ಗೆ ಸರ್ಕಾರದ ಜತೆ ಚರ್ಚಿಸಲಾಗುತ್ತಿದೆ. ಮಹಿಳೆಯರ ನಿಯೋಜನೆ ಪ್ರಕ್ರಿಯೆಯೂ ಆರಂಭವಾಗಿದೆ. ಆರಂಭಿಕ ಹಂತದಲ್ಲಿ ಮಿಲಿಟರಿ ಪೊಲೀಸ್ ಯೋಧರ ಹುದ್ದೆಗೆ ಮಹಿಳೆಯರನ್ನು ನಿಯೋಜಿಸಲಾಗುತ್ತದೆ ಎಂದು ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸದ್ಯ ಸೇನೆಯ ವೈದ್ಯಕೀಯ, ಕಾನೂನು, ಶಿಕ್ಷಣ, ಸಿಗ್ನಲ್ ಹಾಗೂ ಎಂಜಿನಿಯರಿಂಗ್ ವಿಭಾಗದಲ್ಲಿ ಮಹಿಳೆಯರಿಗೆ ಅವಕಾಶವಿದೆ. ಆದರೆ ಸಮರ ಭೂಮಿಯಲ್ಲಿ ಶತ್ರು ಪಾಳೆಯದ ಜತೆ ಹೋರಾಡುವ ಹೊಣೆಗಾರಿಕೆ ಇಲ್ಲ. ಜರ್ಮನಿ, ಆಸ್ಪ್ರೇಲಿಯಾ, ಕೆನಡಾ, ಅಮೆರಿಕ, ಬ್ರಿಟನ್, ಡೆನ್ಮಾರ್ಕ್, ಫಿನ್ಲೆಂಡ್, ಫ್ರಾನ್ಸ್, ನಾರ್ವೆ, ಸ್ವೀಡನ್ ಹಾಗೂ ಇಸ್ರೇಲ್ನಲ್ಲಿ ಮಹಿಳಾ ಯೋಧರು ಇದ್ದಾರೆ.

ಯೋಧರಾಗುವ ನಿಟ್ಟಿನಲ್ಲಿ ಮೊದಲು ಮಿಲಿಟರಿ ಪೊಲೀಸ್ ಯೋಧರಾಗಿ ನಿಯುಕ್ತಿಗೊಳ್ಳಲಿರುವ ಮಹಿಳೆಯರು ಸೇನಾ ಕಂಟೋನ್ಮೆಂಟ್, ಸಂಸ್ಥೆಗಳ ಭದ್ರತಾ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ. ಯೋಧರು ನಿಯಮ ಹಾಗೂ ನಿಯಂತ್ರಣ ಉಲ್ಲಂಘಿಸುವುದನ್ನು ತಡೆಯಲಿದ್ದಾರೆ. ಶಾಂತಿ ಹಾಗೂ ಸಮರದ ಸಂದರ್ಭದಲ್ಲಿ ಯೋಧರು, ಸರಕುಗಳ ಸಾಗಣೆ, ಯುದ್ಧ ಕೈದಿಗಳ ನಿರ್ವಹಣೆ, ನಾಗರಿಕ ಪೊಲೀಸರಿಗೆ ಸಹಾಯದಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್ ರೀತಿಯಲ್ಲೇ ಮತ್ತೊಂದು ಉಗ್ರ ಕೃತ್ಯ, ಗುಂಡಿನ ದಾಳಿಯಲ್ಲಿ 10 ಸಾವು, ಹಲವರು ಗಂಭೀರ
ಐಟಿ ಪಾರ್ಕ್ ಗುತ್ತಿಗೆ 30 ವರ್ಷ, ವಿಸ್ತರಣೆಗೂ ಅವಕಾಶ: ಸಚಿವ ಪ್ರಿಯಾಂಕ್‌ ಖರ್ಗೆ