ಸಿಎಂ ಆಪ್ತನಿಂದ ಹಲವು ಬಾರಿ ಲೈಂಗಿಕ ದೌರ್ಜನ್ಯ : ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ

Published : Feb 20, 2017, 11:43 AM ISTUpdated : Apr 11, 2018, 01:01 PM IST
ಸಿಎಂ ಆಪ್ತನಿಂದ ಹಲವು ಬಾರಿ ಲೈಂಗಿಕ ದೌರ್ಜನ್ಯ : ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ

ಸಾರಾಂಶ

ನಾನು ಬಹಳ ಪ್ರಭಾವಿ ರಾಜಕಾರಣಿಯಾಗಿದ್ದು ಈ ತರ ಸಾವಿರಾರು ಹುಡುಗಿಯರನ್ನ ಅನುಭವಿಸಿದ್ದೇನೆ. ಯಾವುದಾದರೂ ಹುಡುಗಿ ಇದ್ದರೇ ಹೇಳು. ಇದೆಲ್ಲಾ ನನಗೆ ಇಷ್ಟವಿಲ್ಲದ ಕಾರಣ ನಾನು ಆತನ ವಿರುದ್ದ ದೂರು ಕೊಡುತ್ತಿದ್ದೇನೆ.

ಬೆಂಗಳೂರು(ಫೆ.20):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೊಬ್ಬರು ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದು, ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ.

2013ರಲ್ಲಿ ಬೆಂಗಳೂರಿನ ಸಿ.ವಿ.ರಾಮನ್ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪಿ.ರಮೇಶ್ ತಾನು ಶಾಸಕ ಎಂದು ಹೇಳಿಕೊಂಡು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ರಾಜಾಜಿನಗರದಲ್ಲಿ ವಾಸವಾಗಿರುವ ನೊಂದ ಮಹಿಳೆ ದೂರು ನೀಡಿದ್ದಾರೆ.

ಯುವತಿ ಕೊಟ್ಟ ದೂರಿನ ಸಾರಾಂಶ ಹೀಗಿದೆ

ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಾಗಿರುವ ನಾನು ವೃತ್ತಿಯಲ್ಲಿ ಟೀಚರ್ ಕೆಲಸ ಮಾಡುತ್ತಿದ್ದೇನೆ. ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ವರ್ಗಾವಣೆಗಾಗಿ ಸರ್ವಜ್ಞ ನಗರದ ಪಿ. ರಮೇಶ್ ಅವರ ಮೊಬೈಲ್ ನಂಬರ್ ..90080...25 ಗೆ ಕರೆ ಮಾಡಿದ್ದೇನೆ. ಒಂದೆರಡು ಬಾರಿ ಭೇಟಿಯಾದ ನಾನು ವರ್ಗಾವಣೆ ಮಾಡಿಕೊಡುತ್ತೇನೆಂದು ನಗರದ ಫಾರ್ಚೂನ್ ಹೋಟೆಲ್'ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ನನಗೆ ಬಲವಂತವಾಗಿ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ.

ನನ್ನ ಜೊತೆ ಸೆಕ್ಸ್ ಇಂಟರ್ ಕೋರ್ಸ್ ಮಾಡಿದ್ದಾರೆ ನನ್ನ ಇಷ್ಟಕ್ಕೆ ವಿರುದ್ಧವಾಗಿ ಅದು ನಡೆದಿದೆ. ಹೀಗೆ ಹಲವಾರು ಬಾರಿ‌ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ನಾನು ಬಹಳ ಪ್ರಭಾವಿ ರಾಜಕಾರಣಿಯಾಗಿದ್ದು ಈ ತರ ಸಾವಿರಾರು ಹುಡುಗಿಯರನ್ನ ಅನುಭವಿಸಿದ್ದೇನೆ. ಯಾವುದಾದರೂ ಹುಡುಗಿ ಇದ್ದರೇ ಹೇಳು. ಇದೆಲ್ಲಾ ನನಗೆ ಇಷ್ಟವಿಲ್ಲದ ಕಾರಣ ನಾನು ಆತನ ವಿರುದ್ದ ದೂರು ಕೊಡುತ್ತಿದ್ದೇನೆ. 9632.... 72 ,,,,, 9845....77,,,, 9448....61 ಈ ನಂಬರ್ ಗಳಿಂದ ಪಿ.ರಮೇಶ್ ಪೊರ್ನ್ ವಿಡಿಯೋ ಮತ್ತು ಅಶ್ಲೀಲ ಪೋಟೋಗಳನ್ನ ಕಳುಹಿಸುತ್ತಿದ್ದಾರೆ. ಅವರು ಪ್ರಭಾವಿ ರಾಜಕಾರಣಿ ಯಾಗಿರುವುದರಿಂದ ಕಂಪ್ಲೆಂಟ್ ಕೊಡಲು ಹೋದರೆ ಪ್ರಾಣಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಈ ದೂರನ್ನು ನೀಡುತ್ತಿದ್ದಾನೆ. ಪಿ.ರಮೇಶ್ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ನಿತೀಶ್‌ ಹಿಜಾಬ್ ಎಳೆದಿದ್ದ ವೈದ್ಯೆಗೆ ಜಾರ್ಖಂಡ್‌ 3 ಲಕ್ಷ ರು. ವೇತನ ಆಫರ್‌
ಗ್ಯಾರಂಟಿ ಎಫೆಕ್ಟ್: ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಉಗ್ರಪ್ಪ ಆತಂಕ; ಸತ್ಯ ಒಪ್ಪಿಕೊಂಡರಾ ಕಾಂಗ್ರೆಸ್ ಹಿರಿಯ ನಾಯಕ?