2 ತಿಂಗಳ ಹಸುಳೆ ಎದೆಗೊತ್ತಿ ಈಜಿದ ಬಾಣಂತಿ ಬಚಾವ್!

Published : Aug 12, 2019, 11:03 AM ISTUpdated : Aug 13, 2019, 08:26 AM IST
2 ತಿಂಗಳ ಹಸುಳೆ ಎದೆಗೊತ್ತಿ ಈಜಿದ ಬಾಣಂತಿ ಬಚಾವ್!

ಸಾರಾಂಶ

ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ವರುಣನ ಅಬ್ಬರ| ಮಳೆಯ ನರ್ತನಕ್ಕೆ ತತ್ತರಿಸಿದ ಜನರು| 2 ತಿಂಗಳ ಹಸುಳೆ ಎದೆಗೊತ್ತಿ ಈಜಿದ ಬಾಣಂತಿ ಬಚಾವ್

ಪುತ್ತುಮಾಲಾ[ಆ.12]: ಮಹಿಳೆಯೊಬ್ಬಳು ತನ್ನ 2 ತಿಂಗಳ ಮಗುವನ್ನು ಎದೆಗೆ ಕಟ್ಟಿಕೊಂಡು ಈಜಿಕೊಂಡೇ ಪ್ರವಾಹವನ್ನು ದಾಟಿ ಜೀವ ಉಳಿಸಿಕೊಂಡ ಸಾಹಸಮಯ ಘಟನೆ ಕೇರಳದಲ್ಲಿ ನಡೆದಿದೆ. ವಯನಾಡಿನಲ್ಲಿ ಉಂಟಾದ ಭೂ ಕುಸಿತದಿಂದ ಪಾರಾಗುವ ಸಲುವಾಗಿ 25 ವರ್ಷದ ಪ್ರಜಿತಾ ಎಂಬಾಕೆ ಈ ಸಾಹಸ ಮಾಡಿದ್ದಾಳೆ.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಆಗಿದ್ದೇನು?:

ವಯನಾಡಿನ ಮೆಪ್ಪಾಡಿಯಲ್ಲಿ ಭಾರೀ ಮಳೆಯಿಂದಾಗಿ ಪುತ್ತುಮಾಲಾ ಪ್ರದೇಶದಲ್ಲಿ ಭಾರೀ ಭೂಕುಸಿತ ಸಂಭವಿಸಿತ್ತು. ಮುಂದಾಗಬಹುದಾದ ಅನಾಹುತವನ್ನು ಊಹಿಸಿ ಪ್ರಜಿತಾಳ ಕುಟುಂಬ ಮನೆಯಿಂದ ಹೊರಗೆ ಓಡಿ ಬಂದು ಸುರಕ್ಷಿತ ಪ್ರದೇಶಕ್ಕೆ ತೆರಳಲು ಧಾವಿಸಿತ್ತು. ಈ ವೇಳೆ ಪ್ರಜಿತಾ ಪುಟ್ಟ ಮಗುವನ್ನು ಎದೆಗೆ ಕಟ್ಟಿಕೊಂಡೆ ತುಂಬಿ ಹರಿಯುತ್ತಿದ್ದ ನೀರಿನ ಪ್ರವಾಹದಲ್ಲಿ ಈಜಿ ದಡ ಸೇರಿದ್ದಾಳೆ.

ಸಿಸೆರಿಯನ್ ಮೂಲಕ 2 ತಿಂಗಳ ಹಿಂದಷ್ಟೇ ಮಗುವನ್ನು ಹೆತ್ತಿದ್ದ ಆಕೆ ಇಂಥ ಸಂಕಷ್ಟದಲ್ಲೂ ನಡೆಸಿದ ಸಾಹಸ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karnataka News Live: ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಗಮನ, ರಾಜ್ಯದ 17 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್!
ಹೆದ್ದಾರಿ ಸುರಕ್ಷತೆಗೆ ಭಾರೀ ಕ್ರಮ: 100 ವಾಹನಗಳಲ್ಲಿ ಪೊಲೀಸ್ ಗಸ್ತು, ಏನಿದು ಹೊಸ ಯೋಜನೆ!